ಸುರಂಗ ದುರಸ್ತಿ ಕಾರ್ಯ ಪೂರ್ಣ : ರೈಲು ಸಂಚಾರ ಪುನಾರಂಭ
Team Udayavani, Sep 17, 2020, 7:20 PM IST
ಕಾರವಾರ: ಕೊಂಕಣ ರೈಲ್ವೆಯ ಕಾರವಾರ ವ್ಯಾಪ್ತಿಯ ಪೆರ್ನೆಮ್ ಸುರಂಗ ಮಾರ್ಗದ ದುರಸ್ತಿ ಪೂರ್ಣಗೊಂಡು ಟ್ರಾಕ್ ಫಿಟ್ ಪ್ರಮಾಣ ಪತ್ರ ನೀಡಲಾಗಿದ್ದು, ಮಂಗಳವಾರ ರಾತ್ರಿಯಿಂದಲೇ ರೈಲು ಸಂಚಾರ ಪ್ರಾರಂಭವಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಎರ್ನಾಕುಲಂ ಜಂಕ್ಷನ್ – ಹಜರತ್ ನಿಜಾಮುದ್ದೀನ್ ವಿಶೇಷ ಎಕ್ಸ್ಪ್ರೆಸ್ (02617) ಸೆ.15ರಿಂದಲೇ ತನ್ನ ಎಂದಿನ ಮಾರ್ಗವಾದ ಮಡಗಾಂವ್ – ರೋಹ – ಪನ್ವೇಲ್ – ಕಲ್ಯಾಣ್ ಮೂಲಕ ಸಂಚರಿಸಲಿದೆ. ನಿಜಾಮುದ್ದೀನ್- ಎರ್ನಾಕುಲಂ ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ (02618) ಸೆ.15ರಿಂದ ಕಲ್ಯಾಣ್- ಪನ್ವೇಲ್- ರೋಹ- ಮಡಗಾಂವ್- ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದೆ.
ನಿಜಾಮುದ್ದೀನ್ ಎರ್ನಾಕುಲಂ ಜಂಕ್ಷನ್ ದುರಂತೊ ವಿಶೇಷ ಎಕ್ಸ್ಪ್ರೆಸ್ (02284) ಸೆ.19ರಿಂದ ತನ್ನ ಮಾಮೂಲಿ ಮಾರ್ಗವಾದ ವಸಾಯ್ ರೋಡ್ – ಪನ್ವೆಲ್ – ರೋಹ – ಮಡಗಾಂವ್ – ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದೆ. ಎರ್ನಾಕುಳಂ ಜಂಕ್ಷನ್ – ನಿಜಾಮುದ್ದೀನ್ ದುರಂತೊ ಎಕ್ಸ್ಪ್ರೆಸ್ (02283) ಸೆ.22ರಿಂದ ತನ್ನ ಎಂದಿನ ಮಾರ್ಗವಾದ ಮಂಗಳೂರು ಜಂಕ್ಷನ್ – ಮಡಗಾಂವ್ – ರೋಹ – ಪನ್ವೆಲ್ – ವಸಾಯ್ ರೋಡ್ ಮೂಲಕ ತೆರಳಲಿದೆ.
ನವದೆಹಲಿ- ತಿರುವನಂತಪುರಂ ಸೆಂಟ್ರಲ್- ನವದೆಹಲಿ ರಾಜಧಾನಿ ವಿಶೇಷ ರೈಲು (02432 ಹಾಗೂ 02431) ಸೆ.16ರಿಂದ ಸೇವೆಗಳನ್ನು ಆರಂಭಿಸಲಿದೆ. ಲೋಕಮಾನ್ಯ ತಿಲಕ್ ಟರ್ಮಿನಲ್- ತಿರುವನಂತಪುರಂ- ಲೋಕಮಾನ್ಯ ತಿಲಕ್ ಟರ್ಮಿನಲ್ ವಿಶೇಷ ರೈಲು (06345- 06346) ಸೆ.16ರಿಂದ ಸೇವೆ ಪ್ರಾರಂಭಿಸಿರುವುದಾಗಿ ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ