ಲಾಕ್ಡೌನ್: ಬ್ಯಾಂಕ್ಗೆ ಹೋಗಿ ಹಣ ತಂದುಕೊಡುವಿರಾ!?
Team Udayavani, Apr 16, 2020, 10:33 AM IST
ಮಂಗಳೂರು: ಕೋವಿಡ್ ಲಾಕ್ಡೌನ್ ದಿನಗಳಲ್ಲಿ ಜನಸಾಮಾನ್ಯರಿಗೆ ಆವಶ್ಯಕ ಸೇವೆಗಳನ್ನು ಒದಗಿಸುವುದಕ್ಕೆ ಕೋವಿಡ್ ವಾರಿಯರ್, ವಾರ್ರೂಮ್ ಆದಿಯಾಗಿ ಅನೇಕ ಸಹಾಯ ಹಸ್ತಗಳಿವೆ. ಸಹಾಯ ಕೋರಿ ಇಲ್ಲಿಗೆ ಬರುವ ಕರೆಗಳು ತರಹೇವಾರಿ ಆಗಿರುತ್ತವೆ ಎಂಬುದಕ್ಕೆ ಈ ಹಿಂದೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಮೊಟ್ಟೆ ಮತ್ತು ಮ್ಯಾಗಿಗೆ ಬೇಡಿಕೆ ಮಂಡಿಸಿದ್ದೇ ಸಾಕ್ಷಿ. ಅಂಥ ಇನ್ನೊಂದು ಪ್ರಕರಣ ಇದು.
ನಗರದ ನಿವೃತ್ತ ಶಿಕ್ಷಕರೊಬ್ಬರಿಗೆ ದಿನಸಿ ಖರೀದಿಗೆ ಹಣ ಬೇಕಾಗಿತ್ತು. ಬ್ಯಾಂಕ್ಗೆ ವಾಹನದಲ್ಲಿ ತೆರಳಬೇಕು. ಲಾಕ್ಡೌನ್ನಡಿ ಖಾಸಗಿ ವಾಹನ ಸಂಚಾರಕ್ಕೆ ನಿಷೇಧ ಇರುವುದರಿಂದ ಕಾರು ಹೊರತೆಗೆಯಲು ಮನಸೊÕಪ್ಪಲಿಲ್ಲ. ಕಾಲ್ನಡಿಗೆಯಲ್ಲಿ ತೆರಳಲು ವಯಸ್ಸಿನ ಸಮಸ್ಯೆ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ವಾರ್ ರೂಂಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿದರು.
ಕರೆ ಸ್ವೀಕರಿಸಿದ ವಾರ್ ರೂಂ ಸಿಬಂದಿಯಿಂದ “ಅನುಮತಿ ಇರುವ ವಾಹನದ ವ್ಯವಸ್ಥೆ ತಮಗೆ ಮಾಡಿಕೊಡುತ್ತೇವೆ, ಅದರಲ್ಲಿ ಬ್ಯಾಂಕ್ಗೆ ತೆರಳಿ ಹಣ ಪಡೆಯಿರಿ’ ಎಂಬ ಸಲಹೆ ಸಿಕ್ಕಿತು. ಆದರೆ ನಿವೃತ್ತ ಶಿಕ್ಷಕರು ಅದಕ್ಕೆ ಒಪ್ಪಲಿಲ್ಲ. ಲಾಕ್ಡೌನ್ ಇರುವಾಗ ಹೊರಗೆ ಹೋಗುವುದು ತಪ್ಪಲ್ಲವೇ ಎಂಬುದು ಅವರ ವಾದ. ವಾರ್ ರೂಂ ಸಿಬಂದಿಗೂ ಇದು ಸರಿಯೆನಿಸಿತು. ಅವರು “ಇನ್ನೇನು ಮಾಡೋಣ’ ಎಂದು ಚೆಂಡನ್ನು ಶಿಕ್ಷಕರ ಅಂಗಳಕ್ಕೇ ದೂಡಿದರು. “ವಾರ್ ರೂಂನ ನಂಬಿಕಸ್ತ ಮತ್ತು ಜಿಲ್ಲಾಡಳಿತದ ಅನುಮತಿ ಇರುವ ಸಿಬಂದಿಯೊಬ್ಬರನ್ನು ನನ್ನ ಮನೆಗೆ ಕಳುಹಿಸಿ’ ಎಂದು ಕೇಳಿಕೊಂಡರು ನಿವೃತ್ತ ಶಿಕ್ಷಕರು.
ಲಾಕ್ಡೌನ್ ಉಲ್ಲಂ ಸಿಲ್ಲ
ಇದರಂತೆ ಸಿಬಂದಿಯೊಬ್ಬರು ಶಿಕ್ಷಕರ ಮನೆಗೆ ತೆರಳಿದರು. ಅವರು ಚೆಕ್ ಬರೆದು ಕೊಟ್ಟು ಬ್ಯಾಂಕ್ಗೆ
ಹೋಗಿ ಹಣ ಡ್ರಾ ಮಾಡಿ ತಂದು ಕೊಡುವಂತೆ ವಿನಂತಿಸಿದರು. ಸಿಬಂದಿ ಹಾಗೆಯೇ ಮಾಡಿದರು. ನಿವೃತ್ತ ಶಿಕ್ಷಕರು ಲಾಕ್ಡೌನ್ ಉಲ್ಲಂಘನೆ ಮಾಡದೆಯೇ ವಾರ್ರೂಂ ನೆರವು ಪಡೆದು ಹಣವನ್ನು ನಗದಾಗಿ ಪಡೆಯುವುದಕ್ಕಾಯಿತು!
ಚಿತ್ರ ವಿಚಿತ್ರ “ನೆರವಿಗೆ ಮನವಿ!’
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ವಾರ್ ರೂಂ ಮತ್ತು ದ.ಕ. ಜಿಲ್ಲಾಡಳಿತದ ಅಧೀನ ಮನಪಾದಲ್ಲಿರುವ ಕೊರೊನಾ ಮೇಲ್ವಿಚಾರಣ ಕೇಂದ್ರದಲ್ಲಿ ದಾಖಲಾಗುತ್ತಿರುವ ಚಿತ್ರವಿಚಿತ್ರ “ನೆರವಿಗೆ ಮನವಿ’ಗಳ ಸ್ಯಾಂಪಲ್ ಇದು. ಇತ್ತೀಚೆಗೆ ಮಂಗಳೂರಿನಲ್ಲಿ ವಾಸವಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು “ಮೊಟ್ಟೆ ಹಾಗೂ ಮ್ಯಾಗಿ ಬೇಕು’ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್ ಮಾಡಿದ್ದರು. ರಾಜ್ಯ ನಗರಾಭಿವೃದ್ಧಿ ಇಲಾಖೆ ಅಧಿಕಾರಿ ಇದನ್ನು ನೋಡಿ ಸಂಸದರ ವಾರ್ ರೂಂಗೆ ಸೂಚಿಸಿ ಆಕೆ ಕೇಳಿದ್ದನ್ನು ಕೊಟ್ಟು ಬಂದಿದ್ದರು.
“ಖರ್ಚಿಗೆ ಹಣ ಕೊಡಿ… ಮದ್ಯ ಕೊಡಿ…’
ಲಾಕ್ಡೌನ್ನಿಂದಾಗಿ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದ್ದು ಹಲವರಿಗೆ ಸಮಸ್ಯೆಯಾಗಿದೆ. ಹತಾಶರಾದ ಕೆಲವರು ಸಂಸದರ ವಾರ್ ರೂಂ, ಜಿಲ್ಲಾಡಳಿತದ ಕೇಂದ್ರಕ್ಕೆ ಕರೆ ಮಾಡಿ ಮದ್ಯ ನೀಡುವಂತೆ ಗೋಗರೆಯುತ್ತಿದ್ದಾರೆ. ಇನ್ನೂ ಕೆಲವರು ಖರ್ಚಿಗೆ ಹಣವಿಲ್ಲ; ಸಹಾಯ ಮಾಡಿ ಎನ್ನುತ್ತಿದ್ದಾರೆ. ಗ್ಯಾಸ್ ಖಾಲಿ, ಕರೆಂಟ್ ಹೋಗಿದೆ, ಬೈಕಿನ ಇಎಂಐ ಪಾವತಿಸುತ್ತೀರಾ, ಮೊಟ್ಟೆ ಕೊಡಿ… ಹೀಗೂ ಕರೆ ಮಾಡುವವರಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!
Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ