ಪ್ರಾಣಿಗಳ ಮಾನವೀಯತೆ : ನಾಯಿ ಮರಿಗಳಿಗೆ ಹಾಲುಣಿಸಿ ಮಾತೃಪ್ರೇಮ ಮೆರೆದ ತಾಯಿ ಹಂದಿ
Team Udayavani, Feb 2, 2022, 5:38 PM IST
ಮುದ್ದೇಬಿಹಾಳ: ಹಂದಿಗಳು ಸಾಮಾನ್ಯವಾಗಿ ನಾಯಿ ಮರಿಗಳನ್ನು ಕಂಡರೆ ಎಳೆದಾಡಿ ಸಾಯಿಸಿ ಅವುಗಳ ಎಳೇಯ ಮಾಂಸ ತಿನ್ನುವುದನ್ನು ಹಲವೆಡೆ ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಇಲ್ಲೊಂದು ತಾಯಿ ಹಂದಿ ನಾಯಿ ಮರಿಗಳಿಗೆ ತನ್ನ ಮೊಲೆ ಹಾಲು ಕುಡಿಸಿ ಮಾತೃಪ್ರೇಮ ಮೆರೆದು ಮಾನವೀಯತೆಗೆ ಮನುಷ್ಯರನ್ನೇ ಅಣಕಿಸುವ ಘಟನೆ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಮಹಾಂತೇಶ ನಗರದಲ್ಲಿ ಈ ಮಾನವೀಯತೆಗೆ ವರಾಹದ ಮಾತೃಪ್ರೇಮ ಸಾಕ್ಷಿಯಾಗಿದೆ. ಇಲ್ಲಿ ಹಂದಿಯೊಂದು ಮೂರು ನಾಯಿ ಮರಿಗಳಿಗೆ ಆಗಾಗ ತನ್ನ ಮೊಲೆ ಹಾಲು ಕುಡಿಸುತ್ತಿದೆ. ಮರಿಗಳಿಗೆ ಜನ್ಮ ನೀಡಿದ ತಾಯಿ ನಾಯಿ ಎಲ್ಲೋ ಮರೆಯಾಗಿದೆ. ಅಲ್ಲೆ ಸುತ್ತಾಡುತ್ತಿದ್ದ ಹಂದಿಯೊಂದು ಮಾತ್ರ ಈ ಮರಿಗಳಿಗೆ ಹಾಲುಣಿಸುತ್ತದೆ.
ಈ ತಾಯಿ ಹಂದಿಯ ನವಜಾತ ಮರಿಗಳನ್ನು ಬೀದಿ ನಾಯಿಗಳು ಎಳೆದಾಡಿ ಸಾಯಿಸಿವೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ.
ಈ ದೃಶ್ಯವನ್ನು ಅಲ್ಲಿನ ನಿವಾಸಿ, ಎಂಜಿನಿಯರ್ ಅನಿಲ್ ಕುಲಕರ್ಣಿ ಅವರು ತಮ್ಮ ಮೊಬೈಲದಲ್ಲಿ ಸೆರೆ ಹಿಡಿದಿದ್ದಾರೆ. ಸಹಜವಾಗಿ ಮನುಷ್ಯನನ್ನು ಕಂಡರೆ ಮನುಷ್ಯನಿಗೇ ಆಗಿ ಬಾರದ ಪರಿಸ್ಥಿತಿ ಇರುವಾಗ ಮಾತು ಬಾರದ ಈ ಮೂಕ ಪ್ರಾಣಿಗಳ ಬಾಂಧವ್ಯ ಬಡಾವಣೆಯ ನಿವಾಸಿಗಳಿಗೆ ಮಾತನಾಡಿಕೊಳ್ಳುವ ವಿಷಯ ವಸ್ತುವಾಗಿದೆ ಎನ್ನುತ್ತಾರೆ ಇಂಜಿನೀಯರ್ ಅನೀಲ ಕುಲಕರ್ಣಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
MUST WATCH
ಹೊಸ ಸೇರ್ಪಡೆ
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ