ಜೇಬ್ ಪ್ಲೀಸ್..!


Team Udayavani, Apr 8, 2020, 5:28 PM IST

avalu-tdy-05

ನಾವೀಗ ಲಾಕ್‌ ಡೌನ್‌ ನ ಎರಡನೇ ವಾರದಲ್ಲಿದ್ದೇವೆ. ಟಿವಿ, ಮೊಬೈಲ್, ಸಿನಿಮಾ, ಪುಸ್ತಕ ಎಲ್ಲವೂ ಬೇಸರ ತರಿಸಲು ಶುರುವಾಗಿದೆ. ಉಳಿದಿರುವ ದಿನಗಳನ್ನು ಸೃಜನಾತ್ಮಕವಾಗಿ ಕಳೆಯುವುದು ಹೇಗೆ ಎಂಬ ಯೋಚನೆಯಲ್ಲಿ ಇರುವವರಿಗೆ ಹೊಸ ಐಡಿಯಾ ಇಲ್ಲಿದೆ…

 

ಜಗತ್ತಿನಲ್ಲಿ ಜನರಿಗೆ ಹಣದ ಮೇಲಷ್ಟೇ ಅಲ್ಲ, ಜೇಬಿನ ಮೇಲೆಯೂ ಕಣ್ಣಿದೆ. ಪಿಕ್‌ ಪಾಕೆಟ್‌ ಮಾಡುವವರ ಬಗ್ಗೆ ಹೇಳಿದ್ದಲ್ಲ; ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಆಗಿರುವ ಬಣ್ಣ ಬಣ್ಣದ ಪಾಕೆಟ್‌ಗಳ ಬಗ್ಗೆ ಹೇಳುತ್ತಿರುವುದು. ಸಿಂಪಲ್‌ ಡ್ರೆಸ್‌ಗೆ ಮೆರಗು ನೀಡಲು, ಬಣ್ಣಬಣ್ಣದ ಜೇಬು ಹೊಲಿಯುವುದು ಈಗಿನ ಸ್ಟೈಲ್  ನೀಲಿ ಡೆನಿಮ್‌ ಜಾಕೆಟ್‌ ಮೇಲೆ ಕಣ್ಣು ಕುಕ್ಕುವಂಥ ದೊಡ್ಡ ಜೇಬು, ಬಿಳಿ ಅಂಗಿ ಮೇಲೆ ಕಪ್ಪುಬಣ್ಣದ ಜೇಬು, ಪ್ಲೇನ್‌ ಬಣ್ಣದ ಉಡುಗೆಯ ಮೇಲೆ ಸಂಪೂರ್ಣ ಕಸೂತಿ ಕೆಲಸದ ಜೇಬು… ಹೀಗೆ ಬಗೆಬಗೆಯ ಜೇಬುಗಳನ್ನು ಹೊಲಿಯಬಹುದು. ನಿಮ್ಮ ಸೃಜನಶೀಲತೆಗೆ ಕಿಕ್‌ ಕೊಡಲು ಇದೀಗ ಒಳ್ಳೆ ಸಮಯ. ಹಳೆಯ ಉಡುಗೆಗಳನ್ನು ಕಪಾಟಿನಿಂದ ಹೊರತೆಗೆದು, ಕ್ರಿಯಾಶೀಲ ಕೌಶಲವನ್ನು ಪ್ರಯೋಗಿಸಿ.

ಚಿತ್ರ, ಅಲಂಕಾರ ಮೂಡಿಸಿ : ಜೇಬುಗಳನ್ನು ಹೊಲಿಯುವುದಷ್ಟೇ ಅಲ್ಲ, ಅವುಗಳ ಮೇಲೆ ಚಿತ್ರ ಬಿಡಿಸಿ, ಕನ್ನಡಿ ಅಂಟಿಸಿ, ಗೆಜ್ಜೆ, ಮಣಿ, ದಾರ, ಲೇಸ್‌ ಅಂಟಿಸಿ. ಗುಂಡಿಗಳನ್ನೂ ಜೋಡಿಸಬಹುದು. ಒಟ್ಟಿನಲ್ಲಿ ಉಡುಗೆಗಿಂತ ಭಿನ್ನವಾದ ಜೇಬನ್ನು ಸೃಷ್ಟಿಸಿ, ಅದು ಎದ್ದು ಕಾಣುವಂತೆ ಮಾಡಿ. ಈ ಜೇಬುಗಳು ಅಂಗಿಗಷ್ಟೇ ಸೀಮಿತವಾಗಿರಬೇಕಿಲ್ಲ. ಪ್ಯಾಂಟ್‌, ಲಂಗ, ಜಂಪ್‌ ಸೂಟ್‌, ಶಾರ್ಟ್ಸ್, ಸ್ಕರ್ಟ್ಸ್, ಕ್ಯಾಪ್ರಿಸ್‌, ಕುರ್ತಿ, ಜಾಕೆಟ್‌, ಹುಡಿ, ಸ್ವೆಟರ್‌, ಮುಂತಾದವುಗಳ ಮೇಲೆಯೂ ಇವನ್ನು ಮೂಡಿಸ ಬಹುದು!

ವಿವಿಧ ವಸ್ತು ಗಳಿಂದ ಜೇಬು :  ಜೇಬು ಬಟ್ಟೆಯದ್ದೇ ಆಗಿರಬೇಕಿಲ್ಲ. ಲೆದರ್‌ (ಚರ್ಮ), ಫೇಕ್‌ ಲೆದರ್‌, ಕ್ರೋಶಾ, ವೆಲ್ವೆಟ್‌, ನೆಟ್‌ (ಸೊಳ್ಳೆ ಪರದೆಯಂಥ ಬಟ್ಟೆ), ಪ್ಲಾಸ್ಟಿಕ್‌, ಮುಂತಾದವು ಗಳನ್ನೂ ಬಳಸಬಹುದು. ಜೇಬು ಗಳ ಮೇಲೆ ಪ್ರಿಂಟೆಬಲ್‌ ಸ್ಟಿಕರ್‌ ಗಳನ್ನು ಅಂಟಿಸಿದರೆ ಚೆನ್ನ. ಸ್ಟೆನ್ಸಿಲ್‌ ಅಥವಾ ಅಚ್ಚು ಬಳಸಿ, ಬೇಕಾದ ಔಟ್‌ಲೈನ್‌ ಆರಿಸಿ, ಅದಕ್ಕೆ ಬಣ್ಣ ತುಂಬಬಹುದು.

ಜೇಬುಗಳ ಗಾತ್ರ ದೊಡ್ಡದಾದಷ್ಟೂ, ಅದರ ಅಂದ ಹೆಚ್ಚು. ಮೊಬೈಲ್‌ ಇಟ್ಟು ಕೊಳ್ಳು ವಷ್ಟು ದೊಡ್ಡ ಜೇಬುಗಳಿಂದ ಉಪಯೋಗವೂ ಇದೆ. ಇನ್ಯಾಕೆ ತಡ, ಬೇಕಾದಷ್ಟು ಸಮಯವಿದೆ. ದಿನಕ್ಕೊಂದು ಬಟ್ಟೆಗೆ ಜೇಬು ಹೊಲಿಯಲು, ಅದರ ಮೇಲೆ ಕಸೂತಿ ಚಿತ್ತಾರ ಬಿಡಿಸಲು ಮುಂದಾಗಿ. ನಿಮ್ಮ ಪ್ರಯೋಗಗಳು ಸಫ‌ಲವಾದರೆ, ಅವುಗಳ ವಿಡಿಯೋ ಅಥವಾ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇತರರಿಗೂ ಮಾದರಿಯಾಗಿ, ಉತ್ಸಾಹ ಮತ್ತು ಪ್ರೇರಣೆ ನೀಡಿ. ಸಂಕಟದ ಈ ವಾತಾವರಣವನ್ನು ಸ್ವಲ್ಪ ಲೈಟ್‌ ಆಗಿಸಿ.­

 

-ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.