ಎಲೆಗಳಂತೆ ಬಿದ್ದ ಕಟ್ಟಡಗಳು; ಕಂಪನದ ಪ್ರಕೋಪಕ್ಕೆ ತಲ್ಲಣ, ಹಾಹಾಕಾರ

ಮೂರು ದಿನಗಳ ಹಿಂದೆ ಭವಿಷ್ಯ ನುಡಿದಿದ್ದ ವಿಜ್ಞಾನಿ

Team Udayavani, Feb 7, 2023, 7:40 AM IST

ಎಲೆಗಳಂತೆ ಬಿದ್ದ ಕಟ್ಟಡಗಳು; ಕಂಪನದ ಪ್ರಕೋಪಕ್ಕೆ ತಲ್ಲಣ, ಹಾಹಾಕಾರ

ಇಸ್ತಾನ್‌ಬುಲ್‌/ಅಜ್ಮರಿನ್‌: ಟರ್ಕಿ ಮತ್ತು ಸಿರಿಯಾಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದ ಪ್ರಬಲ ಭೂಕಂಪ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ರಾತ್ರಿ ಬೆಳಗಾಗುವುದಕ್ಕಿಂತ ಮುಂಚಿತವಾಗಿ ಭೂಮಿ ಕಂಪಿಸಿದ ಪ್ರಕೋಪಕ್ಕೆ ಅಸುವನ್ನೇ ಕಳೆದುಕೊಂಡಿದ್ದಾರೆ.

ಈ ಪೈಕಿ ಹೆಚ್ಚಿನವರು ಸವಿ ನಿದ್ದೆಯಲ್ಲಿದ್ದವರೇ ಆಗಿದ್ದಾರೆ. ಟರ್ಕಿಯ ಹತ್ತು ನಗರಗಳು ಭೂಕಂಪನದಿಂದಾಗಿ ಬಾಧಿತವಾಗಿವೆ ಎಂದು ಸರ್ಕಾರ ಪ್ರಕಟಿಸಿದೆ.

ಜಗತ್ತಿನಾದ್ಯಂತ ಘಟನೆಯ ಫೋಟೋಗಳು ಮತ್ತು ವಿಡಿಯೋಗಳು ವೈರಲ್‌ ಆಗಿವೆ. ಜಾಲತಾಣದಲ್ಲಿ ವೈರಲ್‌ ಆಗಿರುವ ಒಂದು ವಿಡಿಯೋದಲ್ಲಿ ಆರು ಅಂತಸ್ತಿನ ಕಟ್ಟಡವೊಂದು ಭೂಕಂಪನದ ಪ್ರಭಾವದಿಂದಾಗಿ ಅಲುಗಾಡುತ್ತಿರುವುದು ಕಂಡುಬಂದಿದೆ. ನೋಡ ನೋಡುತ್ತಿದ್ದಂತೆಯೇ ಅದು ಒಣಗಿದ ಎಲೆಗಳು ಮರದಿಂದ ಬೀಳುವಂತೆ ಬಿದ್ದಿದೆ. ಅದರ ಸುತ್ತಮುತ್ತಲು ಇದ್ದವರು ಸುರಕ್ಷತೆಗಾಗಿ ದೂರಕ್ಕೆ ಓಡಿದ್ದಾರೆ. ಇಂಥ ಹಲವು ವಿಡಿಯೋ, ಫೋಟೋಗಳು ವೈರಲ್‌ ಆಗಿವೆ

ಪಾರಂಪರಿಕ ತಾಣಗಳ ನಾಶ:
ಟರ್ಕಿಯಲ್ಲಿ ಹತ್ತು ನಗರಗಳು ತೊಂದರೆಗೆ ಒಳಗಾಗಿದ್ದು, ಈ ಪೈಕಿ ಪಾರಂಪರಿಕ ನಗರ ಗಾಜಿಯಾನ್‌ಟೆಪ್‌ನಲ್ಲಿ ಇರುವ ಕಟ್ಟಡಗಳು, ಐತಿಹಾಸಿಕ ಕಟ್ಟಡಗಳು ಕುಸಿದು ಬಿದ್ದಿವೆ. ಆ ನಗರ ಟರ್ಕಿಯಲ್ಲಿ ಅತ್ಯಂತ ಉತ್ತಮವಾಗಿ ನಿರ್ವಹಣೆಯಲ್ಲಿ ಇರುವ ನಗರವಾಗಿದೆ.

ಸಿರಿಯಾಕ್ಕೆ ಆಘಾತ:
ಆಂತರಿಕ ಸಂಘರ್ಷದಿಂದ ಜರ್ಝರಿತವಾಗಿರುವ ಸಿರಿಯಾಕ್ಕೆ ಭೂಕಂಪ ಮತ್ತೂಂದು ಪ್ರಬಲ ಆಘಾತವನ್ನು ತಂದೊಡ್ಡಿದೆ. ಡಾರ್ಕುಶ್‌ ಎಂಬ ನಗರದಲ್ಲಿ ಭೂಕಂಪನ ಬಳಿಕ ಅವಶೇಷಗಳ ಎಡೆಯಿಂದ ಗಾಯಗೊಂಡವರನ್ನು, ಅಸುನೀಗಿದವರನ್ನು ಹೊರಕ್ಕೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ. ದುರಂತವೆಂದರೆ, ಕಂಪನಕ್ಕೆ ತುತ್ತಾದ ಪ್ರದೇಶಗಳು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿಲ್ಲ.

ಅಜ್ಮಾರಿನ್‌ ಎಂಬ ಗ್ರಾಮದ ಒಸಾಮಾ ಅಬ್ದುಲ್‌ ಹಮೀದ್‌ ಎಂಬಾತ ಪತ್ನಿ ಮತ್ತು ನಾಲ್ವರು ಮಕ್ಕಳ ಜತೆಗೆ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದ. ಭೂಕಂಪನದ ಬಳಿಕ ಆತ ವಾಸಿಸುತ್ತಿದ್ದ ವಸತಿ ಸಮುತ್ಛಯ ಕುಸಿದು ಬಿದ್ದಿದೆ. ಆದರೆ, ಅದರಲ್ಲಿ ವಾಸಿಸುತ್ತಿದ್ದ ಇತರರು ಸಾವಿಗೀಡಾಗಿದ್ದಾರೆ ಎಂದು ಆತ ಶೋಕಿಸುತ್ತಿದ್ದ. ಜತೆಗೆ ಬದುಕಿ ಉಳಿದವರು ಇದ್ದಾರೆಯೇ ಎಂದು ಚಿಂತನೆಯಲ್ಲಿ ತೊಡಗಿದ್ದ. ಮುಂದೆ ಜೀವನ ಹೇಗೆ ಎಂಬ ಲೆಕ್ಕಾಚಾರ ಆತನದ್ದಾಗಿತ್ತು.

ಸಿರಿಯಾ ಅಧ್ಯಕ್ಷ ಬಶರ್‌ ಅಲ್‌ ಅಸಾದ್‌ ವಿರುದ್ಧ ದಾಳಿ ಮತ್ತು ಸಂಘರ್ಷದಿಂದಾಗಿ ದೇಶ ನಲುಗಿ ಹೋಗಿದೆ. ಹೊಸ ದುರಂತದಿಂದಾಗಿ ಅಳಿದುಳಿದಿರುವ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ನೀಡಲು ಹರಸಾಹಸ ಪಡುತ್ತಿದ್ದಾರೆ ವೈದ್ಯರು ಮತ್ತು ಅವರ ಸಹಾಯಕರು. ಸಿರಿಯಾದ ನೈಋತ್ಯ ಭಾಗದಲ್ಲಿ 58 ಗ್ರಾಮಗಳು, ಪಟ್ಟಣಗಳು ಮತ್ತು ದೊಡ್ಡ ನಗರಗಳಿಗೆ ಹಾನಿಯಾಗಿದೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಸಿರಿಯನ್‌ ಅಮೆರಿಕನ್‌ ಮೆಡಿಕಲ್‌ ಸೊಸೈಟಿ ಎಂಬ ಸಂಸ್ಥೆ ಹಲವು ಆಸ್ಪತ್ರೆಗಳನ್ನು ನಡೆಸುತ್ತಿದ್ದು, ಅವುಗಳಲ್ಲಿ ಪರಿಣಿತರು ಮತ್ತು ವೈದ್ಯಕೀಯ ಉಪಕರಣಗಳ, ಔಷಧಗಳ ಕೊರತೆ ಉಂಟಾಗಿದೆ.

ಮೂರು ದಿನಗಳ ಹಿಂದೆ ಭವಿಷ್ಯ ನುಡಿದಿದ್ದ ವಿಜ್ಞಾನಿ
ಭೀಕರ ಭೂಕಂಪ ಉಂಟಾಗುವ ಬಗ್ಗೆ ಸೋಲಾರ್‌ ಸಿಸ್ಟಮ್‌ ಜಿಯೋಮೆಟ್ರಿ ಸರ್ವೆ (ಎಸ್‌ಎಸ್‌ಜಿಇಒಎಸ್‌) ಎಂಬ ಸಂಸ್ಥೆಯ ವಿಜ್ಞಾನಿ ಫ್ರಾಂಕ್‌ ಹೂಟರ್‌ಬೀಟ್ಸ್‌ ಎಂಬುವರು ಮೂರು ದಿನಗಳ ಹಿಂದೆ ಭವಿಷ್ಯ ನುಡಿದಿದ್ದರು. ದಕ್ಷಿಣ-ಕೇಂದ್ರ ಟರ್ಕಿ, ಜೋರ್ಡಾನ್‌, ಸಿರಿಯಾ, ಲೆಬನಾನ್‌ ಭಾಗಗಳಿಗೆ ಅದರಿಂದ ಭಾರೀ ಹಾನಿ ಉಂಟಾಗಲಿದೆ ಎಂದು ಅವರು ಟ್ವೀಟ್‌ ಮಾಡಿದ್ದರು. ಅದರ ಪ್ರಮಾಣ ರಿಕ್ಟರ್‌ಮಾಪಕದಲ್ಲಿ 7.5 ಇರಲಿದೆ ಎಂದೂ ಹೇಳಿಕೊಂಡಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಅಪಹಾಸ್ಯ ವ್ಯಕ್ತವಾಗಿತ್ತು. ಅವರೊಬ್ಬ ವಿಜ್ಞಾನಿಯೇ ಅಲ್ಲವೆಂದು ಕೆಲವರು ಟೀಕಿಸಿದ್ದರು.

ಅಂತಾರಾಷ್ಟ್ರೀಯ ಸಮುದಾಯದ ನೆರವು
ಪ್ರಾಕೃತಿಕ ವಿಕೋಪದಿಂದ ತುತ್ತಾಗಿರುವ 2 ದೇಶಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆರವು ಬರಲಾರಂಭಿಸಿದೆ. ಇಸ್ರೇಲ್‌, ಯು.ಕೆ. ಕೆನಡಾ, ಅಮೆರಿಕ ಸೇರಿದಂತೆ ಹಲವು ದೇಶಗಳು ಆಹಾರ ವಸ್ತುಗಳು, ಔಷಧಗಳು, ವೈದ್ಯಕೀಯ ಉಪಕರಣಗಳು, ಹೊದಿಕೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಶುರು ಮಾಡಿವೆ. ಜತೆಗೆ ರಕ್ಷಣಾ ಕಾರ್ಯಾಚರಣೆಗಾಗಿ ನುರಿತ ಸಿಬ್ಬಂದಿಯನ್ನೂ ಕಳುಹಿಸಿಕೊಡಲಾರಂಭಿಸಿವೆ.

ಟಾಪ್ ನ್ಯೂಸ್

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು ಎಚ್ಚರವಹಿಸಲು ಅರಣ್ಯ ಅಧಿಕಾರಿಗಳ ಸೂಚನೆ

ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ: ಓರ್ವನ ಸೆರೆ, ಇನ್ನೋರ್ವ ಪರಾರಿ

ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ ಯತ್ನ: ಓರ್ವನ ಸೆರೆ, ಇನ್ನೋರ್ವ ಪರಾರಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತಿಯಾದ ಮೈಗ್ರೇನ್ ನಿಂದ ಕೊನೆಯುಸಿರೆಳೆದ ಟಿಕ್ ಟಾಕ್ ಸ್ಟಾರ್ ಜೇಹಾನೆ …

ಅತಿಯಾದ ಮೈಗ್ರೇನ್ ನಿಂದ ಕೊನೆಯುಸಿರೆಳೆದ ಟಿಕ್ ಟಾಕ್ ಸ್ಟಾರ್ ಜೇಹಾನೆ …

1-aAA

ಇಂಟರ್‌ಪೋಲ್‌ ವಾಂಟೆಡ್‌ ಲಿಸ್ಟ್‌ನಲ್ಲಿ ಚೋಕ್ಸಿ ಇಲ್ಲ !

ಸಿಗ್ನೇಚರ್‌ ಬ್ಯಾಂಕನ್ನು ಖರೀದಿಸಲಿದೆ “ನ್ಯೂಯಾರ್ಕ್‌ ಕಮ್ಯೂನಿಟಿ’

ಸಿಗ್ನೇಚರ್‌ ಬ್ಯಾಂಕನ್ನು ಖರೀದಿಸಲಿದೆ “ನ್ಯೂಯಾರ್ಕ್‌ ಕಮ್ಯೂನಿಟಿ’

ಅಮೆರಿಕಕ್ಕೆ ಉತ್ತರ ಕೊರಿಯ ನೇರ ಸವಾಲು

ಅಮೆರಿಕಕ್ಕೆ ಉತ್ತರ ಕೊರಿಯ ನೇರ ಸವಾಲು

ಮಲಗುವ ಸಮಯದಲ್ಲಿ ವಿಡಿಯೋ ಗೇಮ್: ನಿದ್ರೆ ಮಾಡದೇ 17 ಗಂಟೆ ಗೇಮ್‌ ಆಡುವ ಶಿಕ್ಷೆ ಕೊಟ್ಟ ತಂದೆ.!

ಮಲಗುವ ಸಮಯದಲ್ಲಿ ವಿಡಿಯೋ ಗೇಮ್: ನಿದ್ರೆ ಮಾಡದೇ 17 ಗಂಟೆ ಗೇಮ್‌ ಆಡುವ ಶಿಕ್ಷೆ ಕೊಟ್ಟ ತಂದೆ.!

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.