ಸೊಹೈಲ್‌ ವಿಕೆಟ್‌ ಬೇಟೆಯನ್ನು ನೆನಪಿಸಿಕೊಂಡ ಪ್ರಸಾದ್‌

ಭಾರತ-ಪಾಕಿಸ್ಥಾನ ವಿಶ್ವಕಪ್‌ ಪಂದ್ಯದ "ಫೇಮಸ್‌ ಸೆಂಡ್‌ಆಫ್' ಘಟನೆ

Team Udayavani, Jun 13, 2020, 6:18 AM IST

ಸೊಹೈಲ್‌ ವಿಕೆಟ್‌ ಬೇಟೆಯನ್ನು ನೆನಪಿಸಿಕೊಂಡ ಪ್ರಸಾದ್‌

ಬೆಂಗಳೂರು: ಭಾರತ- ಪಾಕಿಸ್ಥಾನ ನಡುವಿನ ಕ್ರಿಕೆಟ್‌ ಪಂದ್ಯದ ಜೋಶ್‌ ಹೇಗಿರುತ್ತದೆಂಬುದನ್ನು ಬಣ್ಣಿ ಸುವ ಅಗತ್ಯವಿಲ್ಲ. ಬಿಗಿ ವಾತಾವರಣದಲ್ಲಿ ನಡೆಯುವ ಈ ಮುಖಾಮುಖಿ ಒಂದಲ್ಲ ಒಂದು ಪ್ರಕರಣಕ್ಕೆ, ಕಹಿ ಘಟನೆಗೆ ಸಾಕ್ಷಿ ಯಾಗಿದ್ದನ್ನೂ ಮರೆಯುವಂತಿಲ್ಲ. ಇದರಲ್ಲಿ 1996ರ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪಂದ್ಯದ ಪ್ರಸಾದ್‌-ಸೊಹೈಲ್‌ “ಫೇಮಸ್‌ ಸೆಂಡ್‌ಆಫ್’ ಪ್ರಕರಣವೂ ಒಂದು. 24 ವರ್ಷಗಳ ಬಳಿಕ “ವೆಂಕಿ’ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆಗ ವಿಕೆಟಿಗೋಸ್ಕರ ತನ್ನ ರಕ್ತ ಕುದಿಯುತ್ತಿತ್ತು ಎಂದು ಹೇಳಿದ್ದಾರೆ.

ಅಮಿರ್‌ ಸೊಹೈಲ್‌ ಕಿರಿಕ್‌
1996ರ ಮಾ. 9ರಂದು ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ಥಾನ 288 ರನ್‌ ಚೇಸ್‌ ಮಾಡಲಿಳಿದಿತ್ತು. ವೆಂಕಟೇಶ ಪ್ರಸಾದ್‌ ಅವರ ಎಸೆತವನ್ನು ಬೌಂಡರಿಗೆ ಅಟ್ಟಿದ ಆರಂಭಕಾರ ಅಮಿರ್‌ ಸೊಹೈಲ್‌, ನಿಮ್ಮ ಮುಂದಿನ ಎಸೆತವನ್ನೂ ಬೌಂಡರಿಗೆ ಅಟ್ಟುತ್ತೇನೆ ಎಂದು ಬ್ಯಾಟ್‌ ಮೂಲಕ ಸನ್ನೆ ಮಾಡಿದರು. ಆಗ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆಯಿತು. ಭಾರೀ ರೋಷದಲ್ಲಿದ್ದ ಪ್ರಸಾದ್‌ ಮುಂದಿನ ಎಸೆತದಲ್ಲೇ ಸೊಹೈಲ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ್ದರು!

ರಕ್ತ ಕುದಿಯುತ್ತಿತ್ತು!
“ಅಭಿಮಾನಿಗಳು ಆ ಘಟನೆಯನ್ನು ಜ್ಞಾಪಿಸದ ದಿನಗಳಿಲ್ಲ. 24 ವರ್ಷಗಳ ಬಳಿಕವೂ ಯಾರಾದರೊಬ್ಬರು ಈ ಬಗ್ಗೆ ನನ್ನಲ್ಲಿ ಕೇಳುತ್ತಲೇ ಇರುತ್ತಾರೆ. ಅಂದೇನು ನಡೆಯಿತು ಎಂಬುದನ್ನು ಇಡೀ ದೇಶವೇ ಗಮನಿಸಿದೆ. ನಮಗೆ ಆಗ ವಿಕೆಟ್‌ ಅಗತ್ಯವಿತ್ತು. ಇದಕ್ಕಾಗಿ ನನ್ನ ರಕ್ತ ಕುದಿಯುತ್ತಿತ್ತು…’ ಎಂದು ಪ್ರಸಾದ್‌ ಯೂ ಟ್ಯೂಬ್‌ ವೀಡಿಯೋದಲ್ಲಿ ಹೇಳಿದ್ದಾರೆ.ಈ ಒಂದು ವಿಕೆಟ್‌ಗೊಸ್ಕರ ಪ್ರಸಾದ್‌ ಮನೆಯಲ್ಲಿ ಉಡುಗೊರೆಯ ರಾಶಿಯೇ ಬಿದ್ದದ್ದು ಅಭಿಮಾನಿಗಳ ಮಹಾಸಂಭ್ರಮಕ್ಕೆ ಸಾಕ್ಷಿಯಾಗಿತ್ತು!

ಶಿಕ್ಷೆಯಿಂದ ಪಾರಾದೆ!
“ನನ್ನ ವರ್ತನೆ ಐಸಿಸಿ ನಿಯಮಕ್ಕೆ ವಿರುದ್ಧವಾಗಿತ್ತು. ಆಗ ನಾನು ಶಿಕ್ಷೆಯಿಂದ ಪಾರಾದದ್ದೇ ಆಶ್ಚರ್ಯ. ಅಂಪಾಯರ್‌ ಡೇವಿಡ್‌ ಶೆಫ‌ರ್ಡ್‌, ನಾಯಕ ಅಜರುದ್ದೀನ್‌, ಶ್ರೀನಾಥ್‌, ಸಚಿನ್‌ ಎಲ್ಲರೂ ಬಂದು ನನ್ನನ್ನು ಸಮಾಧಾನಗೊಳಿಸಿದರು. ಇಲ್ಲವಾದರೆ ನನಗೆ ದಂಡವೋ, ನಿಷೇಧವೋ ಎದುರಾಗುತ್ತಿತ್ತು’ ಎಂದು ಪ್ರಸಾದ್‌ ಹೇಳಿದರು.

ಟಾಪ್ ನ್ಯೂಸ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.