ಆನ್ಲೈನ್ನಲ್ಲಿ ಪಿಯು ಪರೀಕ್ಷೆ ದೈನಂದಿನ ಮಾಹಿತಿ
Team Udayavani, Mar 2, 2020, 3:07 AM IST
ಮಂಗಳೂರು: ಇದೇ ಮೊದಲ ಬಾರಿಗೆ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳ ದೈನಂದಿನ ಸಮಗ್ರ ಮಾಹಿತಿಯು ಪರೀಕ್ಷೆ ಮುಗಿದ ಕೂಡಲೇ ಆನ್ಲೈನ್ನಲ್ಲಿ ಲಭಿಸಲಿದೆ. ಈ ಸಂಬಂಧ ರಾಜ್ಯದ 1,016 ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ಪರೀಕ್ಷೆಗಳನ್ನು ಇನ್ನಷ್ಟು ಪಾರದರ್ಶಕಗೊಳಿಸುವುದು ಇದರ ಉದ್ದೇಶ.
ಪ್ರತಿ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಆಯಾ ದಿನದ ಹಾಜರಾತಿ ಇತ್ಯಾದಿ ಮಾಹಿತಿಯನ್ನು ನಿಗದಿತ ಕೇಂದ್ರಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು ಕೈಬರಹದಲ್ಲಿ ಜಿಲ್ಲಾ ಮಟ್ಟಕ್ಕೆ ಕಳುಹಿಸಬೇಕಿತ್ತು. ಆ ನಂತರ ಅದು ಬೆಂಗಳೂರಿನಲ್ಲಿರುವ ಇಲಾಖೆ ಮುಖ್ಯ ಕಚೇರಿಗೆ ರವಾನೆಯಾಗುತ್ತಿತ್ತು. ಈ ಪ್ರಕ್ರಿಯೆಗೆ ಕನಿಷ್ಠ 3 ದಿನ ಬೇಕಾಗುತ್ತಿತ್ತು. ಈ ಬಾರಿ ಪರೀಕ್ಷೆ ಮುಗಿದ ಕೂಡಲೇ ಸಂಬಂಧಿತ ಮಾಹಿತಿ ಲಭ್ಯವಾಗುವಂತೆ ಆನ್ಲೈನ್ ಅಪ್ಡೇಟ್ ಪ್ರಕ್ರಿಯೆ ಅನುಷ್ಠಾನಗೊಳಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.
ತತ್ಕಾಲಕ್ಕೆ 5 ರೀತಿಯ ಮಾಹಿತಿ: ಈ ಬಾರಿ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಪ್ರತಿ ಪರೀಕ್ಷಾ ಕೇಂದ್ರದ 5 ರೀತಿಯ ದೈನಂದಿನ ಮಾಹಿತಿ ಇಲಾಖೆ ವೆಬ್ಸೈಟ್ನಲ್ಲೇ ಅಪ್ಡೇಟ್ ಆಗಲಿವೆ. ಪ್ರಶ್ನೆ ಪತ್ರಿಕೆ ಪರೀಕ್ಷಾ ಕೇಂದ್ರಗಳಿಗೆ ತಲುಪಿದ ಸಮಯ, ವಿದ್ಯಾರ್ಥಿಗಳ ಒಟ್ಟು ಸಂಖ್ಯೆ, ಹಾಜರು, ಗೈರುಹಾಜರು ಸಂಖ್ಯೆ, ಪರೀಕ್ಷಾ ಅಕ್ರಮ ನಡೆದಿದ್ದರೆ ಆ ಮಾಹಿತಿ, ಪರೀಕ್ಷಾ ಕೇಂದ್ರಗಳಲ್ಲಿರುವ ಅಧಿಕಾರಿಗಳ ಹೆಸರು, ಉಪಯೋಗಿಸಿದ ಪ್ರಶ್ನೆ ಪತ್ರಿಕೆಗಳ ಸಂಖ್ಯೆ ಇತ್ಯಾದಿಗಳನ್ನು ಆಯಾ ದಿನದ ಪರೀಕ್ಷೆ ಮುಗಿದ ಕೂಡಲೇ ಅಧಿಕಾರಿಗಳು ಅಪ್ಡೇಟ್ ಮಾಡಬೇಕು.
ಪಾರದರ್ಶಕತೆ ಮತ್ತು ಕ್ಷಿಪ್ರವಾಗಿ ಮಾಹಿತಿ ಪಡೆಯುವ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
6.79 ಲಕ್ಷ ವಿದ್ಯಾರ್ಥಿಗಳು:”ಮಾ.4ರಿಂದ 23ರವರೆಗೆ 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ವಿಜ್ಞಾನ ವಿಭಾಗದ 2.17 ಲಕ್ಷ, ವಾಣಿಜ್ಯ ವಿಭಾಗದ 2.61 ಲಕ್ಷ, ಕಲಾ ವಿಭಾಗದ 2.01 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ ಪಾರದರ್ಶಕ ವ್ಯವಸ್ಥೆ ಮತ್ತು ತಕ್ಷಣದ ಮಾಹಿತಿ ಸಿಗುವಂತಾಗಲು ಇದೇ ಮೊದಲ ಬಾರಿಗೆ ಪರೀಕ್ಷೆ ಮಾಹಿತಿಯನ್ನು ಅಪ್ಡೇಟ್ ಮಾಡಲು ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಎಲ್ಲಾ ಜಿಲ್ಲಾ ಕೇಂದ್ರಗಳ ಎಲ್ಲಾ ಸೆಂಟರ್ಗಳಿಂದ ಮಾಹಿತಿಗಳು ಇಲಾಖೆ ವೆಬ್ಸೈಟ್ನಲ್ಲೇ ಅಪ್ಡೇಟ್ ಆಗಲಿವೆ. ಇದರಿಂದ ಕೇಂದ್ರ ಕಚೇರಿಗೆ ಸಕಾಲಕ್ಕೆ ಮಾಹಿತಿ ಸಿಗಲಿದೆ.
-ಕಲ್ಲಯ್ಯ, ಜಂಟಿ ನಿರ್ದೇಶಕರು (ಪರೀಕ್ಷಾಂಗ), ಪ.ಪೂ. ಶಿಕ್ಷಣ ಇಲಾಖೆ, ಬೆಂಗಳೂರು.
* ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್