ಮಳೆಯು ಭೂಮಿಗೆ ಸೇರುವ ಪಯಣ…


Team Udayavani, Jun 7, 2021, 2:00 PM IST

ಮಳೆಯು ಭೂಮಿಗೆ ಸೇರುವ ಪಯಣ…

ಮೋಡದಿಂದ ಬಿಂದುವಿನ ರೂಪದಲ್ಲಿ ಮಳೆಯು ಭೂಮಿಗೆ ಸೇರುವ ಪಯಣ ಅಮೋಘವಾದದ್ದು,   ಮಲೆನಾಡಿನಲ್ಲಿ ಮಳೆಯ ಆಗಮನ ಒಂದು ಹಬ್ಬದಂತೆ ಭಾಸವಾಗುತ್ತದೆ. ಪ್ರಕೃತಿಯಲ್ಲಿ ಮಳೆಯ ಆಗಮನವಾದಾಗ ಏನೋ ಒಂದು ಲವಲವಿಕೆ, ಬಿಸಿಲಿನ ಬೇಗೆಯಿಂದ ತತ್ತರವಾದ ಬರಡು ಭೂಮಿ ಹಚ್ಚಹಸುರಾಗಿ ನಲಿಯುತ್ತದೆ. ಬಿರು ಬೇಸಗೆಯಲ್ಲಿ ಮಾಗಿದ ಮಾವಿನ ಹಣ್ಣನ್ನು ನೀಡಿದ ಮರ ಇಂದು    ವಸಂತನ ಆಗಮನಕ್ಕೆ ಚಿಗುರೊಡೆದು ಸಂತಸ ವ್ಯಕ್ತಪಡಿಸುತ್ತದೆ.

ಮಳೆಯೇ ಹಾಗೆ,  ವಾತಾವರಣದಲ್ಲಿ ಹಲವಾರು ಬಗೆಯ ಬದಲಾವಣೆಗಳನ್ನು ತರುತ್ತದೆ. ಮಲೆನಾಡ ಜನರಿಗೆ ಈ ಮಳೆಯಲ್ಲಿ ಹಲವು ವಿಧಗಳಿವೆ. ಮುಂಜಾನೆ ಬರುವ ಚುಮುಚುಮು ಮಳೆ,ಒಮ್ಮೆ ಬಂದು ಅರೆಕ್ಷಣ ನಿಂತು ಮತ್ತೆ ಬರುವ ಪಿರಿಪಿರಿ ಮಳೆ. ಧೋ ಎಂದು ಗಾಳಿಯೊಡನೆ ಬರುವಾಗ ಗಾಳಿಮಳೆ, ಧಾರಾಕಾರವಾಗಿ ಗುಡುಗು-ಸಿಡಿಲಿನೊಂದಿಗೆ ಬರುವ ಮಳೆ ಹೀಗೆ ಹಲವಾರು ವಿಧಗಳು.

ಮಳೆ ಬಂದಾಗಲೆಲ್ಲ ಭುವಿಯೂ ತಣ್ಣಗಿರಿಸುವುದರ ಜತೆ ಮನುಜರಲ್ಲಿ ತಮ್ಮ ಹಳೆಯ ನೆನಪುಗಳನ್ನು ನೆನಪಿಸುತ್ತಲೂ ಇರುತ್ತದೆ.

ಮಳೆ ಬಂದರೆ ಸಾಕು ನಾವೆಲ್ಲಾ ಭಾವನಾತ್ಮಕವಾಗಿ ನಮ್ಮ ಶಾಲಾ ಪ್ರಾರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತೇವೆ. ಬಣ್ಣಬಣ್ಣದ ಕೊಡೆಗಳ ನೋಟ, ಮುಂಜಾವಿನ ಮಳೆಯಿಂದ ಒದ್ದೆಯಾದ ಸಮವಸ್ತ್ರ, ರಸ್ತೆಯ ಹೊಂಡದ ನೀರನ್ನು ಗೆಳೆಯರಿಗೆ ರಟ್ಟಿಸಿ ಸಿಕ್ಕಿದ ಖುಷಿ.ಮಳೆಯೆಂದರೆ ಹೀಗೆ ನೆನಪಿನ ಬುತ್ತಿ ತೆರೆಯುತ್ತಾ ಹೋಗುತ್ತದೆ.  ಮಳೆ ಒಂದು ರೂಪಕ. ನಮ್ಮ ಜೀವನದಲ್ಲಿ ಬರುವ ಹೊಸತನವನ್ನು ಇದು ಸೂಚಿಸುತ್ತದೆ. ಬರಡು ಭೂಮಿಯಂತೆ ಉತ್ಸಾಹ ಕಳೆದುಕೊಂಡಿರುವ ನಮಗೆ ಮಳೆಯ ಆಗಮನ ಜೀವನೋತ್ಸಾಹ ಹೆಚ್ಚಿಸುತ್ತದೆ.  ಬದುಕುವಂತೆ ಪ್ರೇರೇಪಿಸುತ್ತದೆ.

 

ಕೀರ್ತಿ ಗೋಖಲೆ  

ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.