ಮಳೆರಾಯನ ಎರಡು ಮುಖಗಳು


Team Udayavani, Jun 6, 2021, 9:00 AM IST

ಮಳೆರಾಯನ ಎರಡು ಮುಖಗಳು

ಧರೆಗಿಳಿಯಲು ಮುತ್ತಿನ ಮಣಿಗಳಂತೆ ತಯಾರಾದ ಮಳೆ ಹನಿಗಳನ್ನು ತಡೆಯಲು ಸೂರ್ಯನು ಪ್ರಯತ್ನಪಟ್ಟಂತಿತ್ತು ಆ ವಾತಾವರಣ. ಬೆಚ್ಚಗಿನ ಗೂಡಲ್ಲಿ ನೆಚ್ಚಿನ ಊಟ ಸವಿಯಲು ಗೂಡು ಸೇರ ಹೊರಟ ಹಕ್ಕಿಗಳು, ಸಣ್ಣ ಸಣ್ಣ ಇರುವೆಗಳು ಸಾಲುಗಟ್ಟಿ ಶರವೇಗದಲ್ಲಿ ತನ್ನ ಮನೆಯನ್ನು ಸೇರುವ ತವಕ, ಆಗಸ ಒಡೆದು ಭೂಮಿಯ ತಂಪಾಗಿಸುವ ಸೂಚನೆಯನ್ನು ಮಿಂಚು-ಗುಡುಗಿನ ಒಡನಾಟದ ತಾಳಮೇಳಗಳು ಬಡಿದಾಗಲೇ ಕಾಲೇಜಿನ ಬೆಂಚು ಬಿಸಿ ಮಾಡುತ್ತಿದ್ದ ನಾನು ಕೂಡ ನನ್ನ ಮನೆಯೆಡೆಗೆ ಪಾದ ಬೆಳೆಸಲು ತಯಾರಾದೆ.

ಹೆಗಲಿಗೆ ಬ್ಯಾಗ್‌ ಸಿಕ್ಕಿಸಿಕೊಂಡು ಕಪ್ಪು ಬಿಳುಪು ಚುಕ್ಕಿ ಚಿತ್ತಾರದ ಕೊಡೆಯನ್ನು ಹಿಡಿದು ಮೈದಾನಕ್ಕಿಳಿದಾಗ ಶಾಂತರೂಪದ ಮಳೆ ಮೈ ಮನಸ್ಸು ತಂಪಾಗಿಸಲು ಧರೆಗಿಳಿದೇ ಬಿಟ್ಟಿತು. ಕೊಡೆಯಂಚಿನಲಿ ಸುರಿಯುತ್ತಿದ್ದ ಮಳೆ ಹನಿಯನ್ನು ಕೈಯಲ್ಲಿ ಸೆರೆಹಿಡಿಯುತ್ತಾ ಕಣ್ಣಿನ ರೆಪ್ಪೆಗಳಿಗೆ ಅಲಂಕಾರವಾಗಿ ಮಾಡುತ್ತಾ ನೆಲದ ಕೇಸರಿ ನೀರನ್ನು ಚಪ್ಪಲಿ ಮಹಾಶಯನ ಸಹಾಯದಿಂದ ಸಮವಸ್ತ್ರದಲ್ಲಿ ಚಿತ್ತಾರ ಬಿಡಿಸುತ್ತಾ ಮುಂದೆ ಮುಂದೆ ಸಾಗುತ್ತಿದ್ದಂತೆ….. ಮಳೆ ಕೋಪಗೊಂಡು ಸುರಿದಂತೆ ರಭಸದಿಂದ ಸುರಿಯಲಾರಂಭಿಸಿತು.

ನೋಡ ನೋಡುತ್ತಿದ್ದಂತೆ ವಾಯು ಮಹಾರಾಜನ ಸಹಾಯ ಪಡೆದು ನನ್ನ ಕೊಡೆಯನ್ನು ಬಾವಲಿಯನ್ನಾಗಿಸುವ ಪ್ರಯತ್ನ ಮಾಡಿತು. ಮೈ ನಡುಗಿಸಲು ಚಳಿ ಮಹಾರಾಜನ ಸಹಾಯ ಪಡೆದು ನೀರೆರಚಲು ಪ್ರಾರಂಭ ಮಾಡಿತು.

ಮುಂದೆ ಸಾಗುತಿದ್ದಂತೆ ಎಲ್ಲ ಕಡೆ ಕೊಳಕು ಕೆಂಪು ನೀರನ್ನು ಹರಿಸಿ ಮುಂದೆ ಹೆಜ್ಜೆ ಇಡದಂತೆ ಕಣ್ಣು ಕತ್ತಲಾಗಿಸಿತು. ರಭಸದಲ್ಲಿ ಸಾಗುತ್ತಿದ್ದ ನೀರಿನ ಜತೆ ನಾನೂ ಸಾಗಿ  ಮನೆ ತಲುಪಬೇಕು ಎಂದು ಹೋಗುತಿದ್ದಾಗ,  ಮಾರುದ್ದ ಬೆಳೆದಿದ್ದ ಮರ ಮಕಾಡೆ ಮಲಗಿಬಿಟ್ಟಿತ್ತು. ಅಲ್ಲಿಗೆ… ಮನೆಗೆ ಹೋಗುವಂತೆಯೂ ಇಲ್ಲ ಮಳೆ ನಿಲ್ಲಿಸುವಂತೆಯೂ ಇಲ್ಲ. ಮಳೆರಾಯನ ಎರಡು ಮುಖಗಳನ್ನು ಒಟ್ಟಿಗೆ ಕಂಡಂತಹ ಆ ದಿನ ಮರ ಸರಿಸಿ ಮನೆ ಸೇರುವ ತನಕ ಯೋಚಿಸುವಂತೆ ಮಾಡಿತು.

 

-  ಸಮೀಕ್ಷಾ ಎಸ್‌.ಡಿ.ಎಂ. ಕಾಲೇಜು ಉಜಿರೆ

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.