ಕಾವ್ಯ ಮಲ್ಲಿಗೆ : ಮುಂಗಾರ ಕೆಲಸಕ್ಕೆ ಅಣಿಯಾಗಿಹರು
Team Udayavani, Jul 27, 2021, 2:00 PM IST
ಮುಂಗಾರ ಕೆಲಸಕ್ಕೆ ಅಣಿಯಾಗಿಹರು..
ಮೋಡವು ಕವಿದಿದೆ ಮಳೆಯದು ಸುರಿಯುತಿದೆ
ಮುಂಗಾರ ಆರಂಭ ಕೃಷಿ ಕೆಲಸದಾರಂಭ.
ರಾಗಿ ಅಂಬಲಿ ಗಂಜಿ ಊಟವನು ಮಾಡಿಹರು
ಕಂಬಳಿಯ ಹೊದ್ದಿಹರು ಹೊಲಕೆ ನಡೆದಿಹರು.
ಜಡಿಮಳೆಯ ಹೊಡೆತದ ನೀರಲಿ ತೊಯ್ದಿಹರು
ಗಡಗಡ ನಡುಗುತ್ತ ದಿನವಿಡೀ ದುಡಿಯುವರು.
ಎಲೆ ಅಡಿಕೆ ಜಗಿಯುತ್ತ ಬೀಡಿಯ ಸೇದುತ್ತ
ಸುಡುತಿಹ ಚಹವನ್ನು ಗುಟುಕು ಕುಡಿಯುತ್ತ.
ಮೈಯ ಬಿಸಿ ಏರಿದೆ ಚಳಿ ನಡುಕ ತಂದಿದೆ
ಮತ್ತೆ ದುಡಿಯುವ ತುಡಿತ ಉಲ್ಲಾಸ ಬಂದಿದೆ.
ಪಾಡªನವ ಹಾಡುತ್ತ ನೇಜಿಯನು ನೆಡುತಿಹರು
ಎಲ್ಲರೂ ಒಗ್ಗೂಡಿ ಮೈ ಬಗ್ಗಿ ದುಡಿತಿಹರು.
ಸೂರ್ಯಾಸ್ತದ ಸಮಯ ಬಚ್ಚಲಲಿ ಬೆಂಕಿ ಉರಿ ಬಿಸಿನೀರ ಸ್ನಾನದಲಿ ದಣಿವನಾರಿಸುವವರು.
ಸಿರಿತನದ ವೈಭವವು ಇವರಿಗದು ಬೇಕಿಲ್ಲ
ನಾಳೆಯ ಚಿಂತೆ ಅವರಿಗೆಂದೂ ಇಲ್ಲ
ಬಿಸಿಬಿಸಿ ಗಂಜಿಯನು ಸಂಜೆಯೇ ಉಣ್ಣುವರು
ಸುಖದ ನಿದ್ದೆಯ ಮಾಡಿ ನಾಳೆಗಣಿಯಾಗುವರು
-ಭಾರತಿ ಡಿ ತಾಮ್ಹನ್ ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು