ಕಾಶ್ಮೀರದತ್ತ ರಕ್ಷಿತ್ ಹಿಮದ ಮಧ್ಯೆ ಕ್ಲೈಮ್ಯಾಕ್ಸ್
Team Udayavani, Nov 25, 2020, 4:30 PM IST
ರಕ್ಷಿತ್ ಶೆಟ್ಟಿ ಕಾಶ್ಮೀರದತ್ತ ಹೊರಟಿದ್ದಾರೆ. ಅಲ್ಲಿನ ಚುಮು ಚುಮು ಚಳಿ, ಹಿಮದ ನಡುವೆ ಸುತ್ತಾಡಲಿದ್ದಾರೆ. ಅವರ ಈ
ಸುತ್ತಾಟಕ್ಕೆಕಾರಣ “777 ಚಾರ್ಲಿ’ . ನಿಮಗೆ ಗೊತ್ತಿರುವಂತೆ ರಕ್ಷಿತ್ ನಟನೆಯ “777 ಚಾರ್ಲಿ’ ಚಿತ್ರ ಜರ್ನಿ ಕ್ಟ್. ಈ ಜರ್ನಿಯಲ್ಲಿ ಕಾಶ್ಮೀರಕೂಡಾ ಸೇರಿದೆ. ಈಗಾಗಲೇ ನಿರ್ದೇಶಕಕಿರಣ್ ರಾಜ್ ಲೊಕೇಶನ್ ನೋಡಿಕೊಂಡು ಬಂದಿದ್ದು, ನ.26ರಿಂದ ಕಾಶ್ಮೀರದಲ್ಲಿ ಐದು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರದ ಕ್ಲೈಮ್ಯಾಕ್ಸ್ಗೆ ಹಿಮದ ಬ್ಯಾಕ್ ಗ್ರೌಂಡ್ ಬೇಕಾಗಿರೋದರಿಂದಕಾಶ್ಮೀರದತ್ತ ಚಿತ್ರತಂಡ ತೆರಳಿದೆ.
ಇನ್ನು, “777 ಚಾರ್ಲಿ’ ಒಂದು ಜರ್ನಿ ಸಬ್ಜೆಕ್ಟ್ . ಅದೇ ಕಾರಣದಿಂದ ರಕ್ಷಿತ್ ಹಲವು ರಾಜ್ಯಗಳನ್ನು ಈ ರಕ್ಷಿತ್ ಸುತ್ತುತ್ತಿದ್ದಾರೆ. “777
ಚಾರ್ಲಿ’ ಒಂದು ಜರ್ನಿ ಸಬೆjಕ್ಟ್. ಹಾಗಾಗಿ, ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಿಕೊಂಡೇ ಬರಬೇಕಾದ ಅನಿವಾರ್ಯತೆ
ಕತೆಯಲ್ಲಿರುವಕಾರಣ ಚಿತ್ರೀಕರಣ ದಿನಗಳ ಕೂಡಾ ಹೆಚ್ಚಾಗುತ್ತಿವೆ ಎನ್ನುವುದು ರಕ್ಷಿತ್ ಶೆಟ್ಟಿ ಮಾತು. ಗೋವಾ, ಗುಜರಾತ್, ರಾಜಸ್ತಾನ್, ಪಂಜಾಬ್, ಹಿಮಾಚಲ ಪ್ರದೇಶ,ಕಾಶ್ಮೀರಗಳಲ್ಲಿ “777 ಚಾರ್ಲಿ’ ಚಿತ್ರೀಕರಣ ನಡೆಯಲಿದೆ. ಇದು ಮನುಷ್ಯ ಮತ್ತು ಶ್ವಾನವೊಂದರ ನಡುವಿನ ಬಾಂಧವ್ಯದ ಕಥೆಯ ಜೊತೆಗೆ ಹಲವು ಅಂಶಗಳನ್ನು ಹೊಂದಿರುವುದರಿಂದ ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಬೇಕಿದೆ.