ದಿನ ಬಳಕೆಯ ವಸ್ತುಗಳ ಬೆಲೆ ದಿಢೀರ್‌ ಏರಿಕೆ


Team Udayavani, Feb 26, 2021, 5:45 AM IST

ದಿನ ಬಳಕೆಯ ವಸ್ತುಗಳ ಬೆಲೆ ದಿಢೀರ್‌ ಏರಿಕೆ

ಮಂಗಳೂರು/ಉಡುಪಿ: ಮಾರುಕಟ್ಟೆಯಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ದಿಢೀರನೆ ಏರಿಕೆಯಾಗಿದೆ. ಈರುಳ್ಳಿ, ಮೆಣಸು, ಖಾದ್ಯ ತೈಲದ ಜತೆಗೆ ಬೀನ್ಸ್‌, ಬೆಂಡೆ ಮತ್ತಿತರ ಕೆಲವು ತರಕಾರಿಗಳೂ ದುಬಾರಿಯಾಗಿವೆ.

ಈರುಳ್ಳಿ ಬೆಲೆ 15 ದಿನಗಳಲ್ಲಿ 8ರಿಂದ 10 ರೂ. ಹೆಚ್ಚಳವಾಗಿದೆ. ಬೀನ್ಸ್‌ ಮತ್ತು ಬೆಂಡೆ ತಲಾ 10 ರೂ. ತುಟ್ಟಿಯಾಗಿವೆ. ಕರಾವಳಿಯಲ್ಲಿ 2020 ಜೂನ್‌ ತಿಂಗಳಲ್ಲಿ ಇದ್ದ ಬೆಲೆಗಳಿಗೆ ಹೋಲಿಸಿದರೆ 7 ತಿಂಗಳಲ್ಲಿ ದೈನಂದಿನ ಬಳಕೆಯ ಆಹಾರ ವಸ್ತುಗಳ ಬೆಲೆ ಗಮನಾರ್ಹ ಏರಿಕೆಯಾಗಿದೆ.

ಕುಚ್ಚಲಕ್ಕಿ 3ರಿಂದ 4 ರೂ., ಬೆಳ್ತಿಗೆ ಅಕ್ಕಿ 2 ರೂ.; ಮೈದಾ 7 ರೂ., ತೊಗರಿ ಬೇಳೆ 14 ರೂ., ಉದ್ದ (ಬ್ಯಾಡಗಿ) ಮೆಣಸು 30-35 ರೂ., ಗಿಡ್ಡ ಮೆಣಸು 40 ರೂ., ತೆಂಗಿನೆಣ್ಣೆ 40 ರೂ., ಏಲಕ್ಕಿ 60 ರೂ., ಕಿತ್ತಳೆ 25 ರೂ. ಜಾಸ್ತಿಯಾಗಿದೆ.

ಪ್ರಸ್ತುತ ಉದ್ದ ಮೆಣಸು 300-320 ರೂ., ಗಿಡ್ಡ ಮೆಣಸು 280 ರೂ, ಉದ್ದು 128 ರೂ., ತೆಂಗಿನ ಎಣ್ಣೆ 206 ರೂ. ಸನ್‌ಫÉವರ್‌ ಎಣ್ಣೆ 136 ರೂ. ಎಳ್ಳೆಣ್ಣೆ 120 ರೂ. ಇದೆ.

ಈರುಳ್ಳಿ 50 ರೂ., ತೆಂಗಿನ ಕಾಯಿ 48- 50 ರೂ., ಸ್ಥಳೀಯ ಬೆಂಡೆ 80 ರೂ., ಸ್ಥಳೀಯ ಹೀರೆ 80 ರೂ., ಸ್ಥಳೀಯ ಮುಳ್ಳು ಸೌತೆ 60- 70 ರೂ., ಕ್ಯಾರೆಟ್‌ 40 ರೂ. ದ್ರಾಕ್ಷಿ ಸೀಡ್‌ಲೆಸ್‌ 80 ರೂ., ಕಪ್ಪು ಸೀಡ್‌ಲೆಸ್‌ 140 ರೂ., ಕಿತ್ತಳೆ 75 ರೂ, ಕದಳಿ ಬಾಳೆ ಹಣ್ಣು 60 ರೂ., ನೇಂದ್ರ ಬಾಳೆ ಹಣ್ಣು 50 ರೂ. ಇದೆ. ವಾರದ ಅವಧಿಯಲ್ಲಿ ಕಿತ್ತಳೆ 25 ರೂ. ಹಾಗೂ ನೇಂದ್ರ ಬಾಳೆ ಹಣ್ಣು 15 ರೂ. ಏರಿಕೆಯಾಗಿದೆ.

ತೆಂಗಿನ ಕಾಯಿ ಸಗಟು ಮಾರಾಟ ದರ 45 ರೂ. ಹಾಗೂ ರಿಟೇಲ್‌ ದರ 50 ರೂ. ಇದೆ. 1 ತಿಂಗಳಿಂದ ಇದೇ ದರ ಇದೆ.
ಈ ವರ್ಷ ಫಸಲು ಕಡಿಮೆ. ಹಾಗಾಗಿ ಸ್ಥಳೀಯ ತೆಂಗಿನಕಾಯಿ ಶೇ. 50 ರಷ್ಟು ಕಡಿಮೆಯಾಗಿದೆ. ಬಯಲು ಸೀಮೆಯ ತೆಂಗಿನ ಕಾಯಿ ಆವಕ ಕೂಡ ಕಡಿಮೆಯಾಗಿದೆ. ಕೊರೊನಾ ಕಾರಣ ದೇವಸ್ಥಾನಗಳಲ್ಲಿ ಊಟದ ವ್ಯವಸ್ಥೆ ಇಲ್ಲದ ಕಾರಣ ದೇಗುಲಗಳಿಗೆ ತೆಂಗಿನ ಕಾಯಿ ಪೂರೈಕೆ ಕಡಿಮೆ ಆಗಿದ್ದರೂ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಸರಬರಾಜು ಸಾಕಷ್ಟಿಲ್ಲ. ಅಲ್ಲದೆ ಬೊಂಡಕ್ಕೆ ಬೆಲೆ ಜಾಸ್ತಿ ಇರುವುದರಿಂದ ಹೆಚ್ಚಿನ ತೆಂಗು ಬೆಳೆಗಾರರು ಕಾಯಿ ಆಗಲು ಬಿಡದೆ ಬೊಂಡಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ. ಹಾಗಾಗಿ ಕಾಯಿ ಬೆಲೆ ಏರಿಕೆ ಆಗಿರುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಪ್ರವೀಣ್‌ ಉದಯವಾಣಿಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.