ಡಿಕೆಶಿ ಕಾಂಗ್ರೆಸ್ನ ಹರಕೆಯ ಕೋಣ,ಕಡಿದು ಹಾಕಿ : ರೇಣುಕಾಚಾರ್ಯ
ಪಂಚ್ ಡೈಲಾಗ್ಗಳ ಮೂಲಕ ತಿರುಗೇಟು ನೀಡಿದ ಡಿಕೆಶಿ
Team Udayavani, May 11, 2019, 5:25 PM IST
ಕುಂದಗೋಳ: ಸಚಿವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಹರಕೆಯ ಕೋಣ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ಧಾಳಿ ನಡೆಸಿದ್ದಾರೆ.
ಶನಿವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಕೋಣವನ್ನುಬಲಿ ನೀಡುವ ಮೊದಲು ಎಣ್ಣೆ ಹಚ್ಚುತ್ತೇವೆ. ಡಿ.ಕೆ.ಶಿವಕುಮಾರ್ ಹರಕೆಯ ಕೋಣ, ಇಲ್ಲಿ ಬಂದು ಕಣ್ಣೀರಿನ ನಾಟಕ ಮಾಡುತ್ತಾರೆ. ಆ ಕೋಣವನ್ನು ಕಡಿದು ಹಾಕಬೇಕು ಎಂದು ಕಿಡಿ ಕಾರಿದರು.
ಕುಂದಗೋಳಕ್ಕೆ ಒಳ್ಳೆಯದಾಗುವುದಾದರೆ ಬಲಿ ನೀಡಲಿ
ರೇಣುಕಾಚಾರ್ಯ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿದ ಸಚಿವ ಡಿ.ಕೆ.ಶಿವಕುಮಾರ್ , ಕುಂದಗೋಳ ಕ್ಷೇತ್ರಕ್ಕೆ ಒಳ್ಳೆಯದಾಗುವುದಾದರೆ ಬಲಿಗೆ ಸಿದ್ಧ ಎಂದರು.
ಅಕ್ಕನ ಚೀಲಕ್ಕೆ ಹಾಕುತ್ತೇನೆ
ಡಿ.ಕೆ.ಶಿವಕುಮಾರ್ ಹಣದ ಚೀಲ ಹಿಡಿದುಕೊಂಡು ಬಂದಿದ್ದಾರೆ ಎಂದು ಆರೋಪಿಸಿದ್ದ ಶೋಭಾ ಕರಂದ್ಲಾಜೆ ಅವರಿಗೆ ತಿರುಗೇಟು ನೀಡಿದ ಸಚಿವ ಡಿ.ಕೆ.ಶಿವಕುಮಾರ್ , ನಾನು ಹಣ ಇದ್ದರೆ ಆಕ್ಕನ ಚೀಲಕ್ಕೆ ಹಾಕುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.