ತ.ನಾಡಿಗೆ 5,600 ಕೋಟಿ ರೂ. ಪರಿಹಾರ ನೀಡಬಹುದೇ?
ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ
Team Udayavani, Aug 22, 2021, 10:50 PM IST
ನವದೆಹಲಿ: 1962ರ ನಂತರ ಲೋಕಸಭೆಯಲ್ಲಿ ತಮಿಳುನಾಡು ರಾಜ್ಯಕ್ಕೆ ಸಿಗಬೇಕಾದ ಪ್ರಾತಿನಿಧ್ಯ ಸಿಗದೇ ಇರುವುದರಿಂದ ಆ ರಾಜ್ಯಕ್ಕೆ 5,600 ಕೋಟಿ ರೂ. ಪರಿಹಾರವನ್ನು ನೀಡಬಹುದೇ ಎಂದು ಕೇಂದ್ರ ಸರ್ಕಾರವನ್ನು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ.
ಆ.17ರಂದು ನಡೆದ ವಿಚಾರಣೆ ವೇಳೆ, ತಮ್ಮಲ್ಲಿ ಜನಸಂಖ್ಯೆ ನಿಯಂತ್ರಿಸಿ, ದೇಶದ ಅಭಿವೃದ್ಧಿಗೆ ಸಹಾಯ ಮಾಡಿದ ದಕ್ಷಿಣ ಭಾರತದ ರಾಜ್ಯಗಳಿಗೆ, ಅದರಲ್ಲೂ ವಿಶೇಷವಾಗಿ ತಮಿಳುನಾಡು, ಆಂಧ್ರಪ್ರದೇಶಗಳಿಗೆ ಲೋಕಸಭೆಯಲ್ಲಿ ಸಂಸದರ ಸ್ಥಾನ ಕಡಿಮೆ ಮಾಡಲಾಗಿದೆ. ಆದರೆ, ಜನಸಂಖ್ಯೆ ಕಡಿಮೆ ಮಾಡಿಕೊಳ್ಳದ ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ ರಾಜ್ಯಗಳಿಗೆ ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ನೀಡಲಾಗಿದೆ ಎಂದು ನ್ಯಾ. ಕಿರುಬಾಕರನ್ ಹಾಗೂ ನ್ಯಾ. ಬಿ. ಪುಗಳೇಂದಿ ಅವರುಳ್ಳ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಭಾರತೀಯರಿನ್ನು ಯುಎಇಗೆ ಪ್ರವಾಸ ಹೋಗಬಹುದು
“ತಮಿಳುನಾಡು ಹಾಗೂ ಆಂಧ್ರಪ್ರದೇಶ ಸರ್ಕಾರಗಳು, ದಶಕಗಳ ಹಿಂದೆಯೇ ತಮ್ಮ ರಾಜ್ಯಗಳಲ್ಲಿ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದಿವೆ. ಅದರಂತೆ, 1962ರಲ್ಲಿ ಲೋಕಸಭೆಯಲ್ಲಿ ತಮಿಳುನಾಡಿಗೆ ಇದ್ದ 41 ಸಂಸದರ ಕೋಟಾವನ್ನು 1967ರ ಹೊತ್ತಿಗೆ 39ಕ್ಕೆ ಇಳಿಸಲಾಗಿದೆ. ಐದು ವರ್ಷಗಳಲ್ಲಿ ಒಬ್ಬ ಸಂಸದನಿಂದ ರಾಜ್ಯಕ್ಕೆ ಸಿಗುವ ಸೌಕರ್ಯಗಳನ್ನು 200 ಕೋಟಿ ರೂ. ಎಂದಿಟ್ಟುಕೊಂಡರೆ, ಎರಡು ಸಂಸದರ ಸ್ಥಾನ ಖೋತಾ ಅನುಭವಿಸಿದ ತಮಿಳುನಾಡಿಗೆ ಐದು ವರ್ಷದಲ್ಲಿ 400 ಕೋಟಿ ರೂ. ನಷ್ಟವಾಗುತ್ತದೆ. 1967ರಿಂದ ಇಲ್ಲಿಯವರೆಗೆ ಲೆಕ್ಕಹಾಕಿದರೆ, 5,600 ಕೋಟಿ ರೂ. ನಷ್ಟವನ್ನು ತಮಿಳುನಾಡು ಅನುಭವಿಸಿದ್ದು, ಅಷ್ಟು ಹಣವನ್ನು ಕೇಂದ್ರ ಪರಿಹಾರವಾಗಿ ನೀಡಬಹುದೇ” ಎಂದು ನ್ಯಾಯಪೀಠ ಕೇಳಿದೆ.
ಇದಲ್ಲದೆ, ಎರಡು ಸಲಹೆಗಳನ್ನೂ ಕೇಂದ್ರದ ಮುಂದಿಟ್ಟಿರುವ ಹೈಕೋರ್ಟ್, ಲೋಕಸಭೆಯಲ್ಲಿ ಹೀಗೆ ಇಳಿಕೆ ಮಾಡಿದ ಸೀಟುಗಳನ್ನು ರಾಜ್ಯಸಭೆಯಲ್ಲಿ ತುಂಬಿಸಿಕೊಡಲು ಅವಕಾಶ ಕಲ್ಪಿಸಬಹುದು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯಗಳ ಲೋಕಸಭಾ ಸಂಸದರ ಸ್ಥಾನಗಳನ್ನು ಪರಿಷ್ಕರಿಸಲು ಅವಕಾಶ ಕಲ್ಪಿಸುವ ಸಂವಿಧಾನದ 81ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಬಹುದು ಎಂದೂ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ