ಸಂಸದ ಅಂಗಡಿಯವರಿಂದ ರೈಲ್ವೆ ಮಾರ್ಗದ ಪ್ರಗತಿ ಪರಿಶೀಲನೆ
Team Udayavani, Sep 3, 2019, 5:55 PM IST
ಬೆಳಗಾವಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸಂಸದ ಸುರೇಶ ಅಂಗಡಿ ಮಂಗಳವಾರ ಬೆಳಗಾವಿ ರೈಲ್ವೆ ನಿಲ್ದಾಣದಿಂದ ಗೋವಾವರೆಗಿನ ಮಾರ್ಗದ ಪ್ರಗತಿ ಪರಿಶೀಲನೆಯನ್ನು ರೈಲಿನಲ್ಲೇ ಆರಂಭಿಸಿದರು.
ಬೆಳಗಾವಿಯಿಂದ ವಿಶೇಷ ರೈಲಿನಲ್ಲಿ ಅಧಿಕಾರಿಗಳ ಜೊತೆ ಗೋವಾಕ್ಕೆ ಪ್ರಯಾಣಿಸಿದ ಅವರು ರೈಲಿನಲ್ಲೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆ ಪ್ರಧಾನ ಮುಖ್ಯ ಅಭಿಯಂತರ ವಿಜಯಕುಮಾರ ಅಗರವಾಲ್, ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್, ರೈಲ್ವೆ ಇಲಾಖೆ ವಿಶೇಷ ಅಧಿಕಾರಿ ಅನಿಷ್ ಹೆಗಡೆ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.