ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಪಾದಾಚಾರಿ ಮಹಿಳೆ ಸಾವು
Team Udayavani, Jan 10, 2022, 6:33 PM IST
ರಬಕವಿ-ಬನಹಟ್ಟಿ : ಕಳೆದ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಬನಹಟ್ಟಿಯ ಗುಂಡಯ್ಯಸ್ವಾಮಿ ದೇವಸ್ಥಾನ ಹತ್ತಿರ ವೇಗವಾಗಿ ಬಂದ ಬೈಕ್ ಸವಾರ ಪಾದಚಾರಿಯೋರ್ವಳಿಗೆ ಡಿಕ್ಕಿ ಪರಿಣಾಮ ಗಂಭೀರ ಗಾಯಗೊಂಡು ವಿಜಯಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ರಾತ್ರಿ ಮೃತಪಟ್ಟ ಘಟನೆ ನಡೆದಿದೆ.
ಬನಹಟ್ಟಿಯ ಸೋಮವಾರ ಪೇಟೆ ನಿವಾಸಿ ಶೈಲಾ ಮಲ್ಲೇಶಪ್ಪ ಉಮದಿ(51) ಮೃತ ದುರ್ದೈವಿಯಾಗಿದ್ದಾರೆ. ಮಾರುಕಟ್ಟೆಯಿಂದ ತಮ್ಮ ಮನೆಗೆ ನಡೆದುಕೊಂಡು ಹೋಗುವಾಗ ಬೈಕ್ ಸವಾರನ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದ್ದು, ಈ ಕುರಿತು ರವಿವಾರ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಸುರೇಶ ಮಂಟೂರ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿಗಳಿಂದ ಘೋಷಣೆ ಹಾಕಿಸಿದ ಡಿಕೆಶಿ ! – ಭಾರೀ ವಿವಾದ ಸೃಷ್ಟಿ