ರಷ್ಯಾದಿಂದ ನರಕವಾದ ಮರಿಯುಪೋಲ್
Team Udayavani, Mar 12, 2022, 8:15 AM IST
ಉಕ್ರೇನ್ನ ಮರಿಯುಪೋಲ್ ಈಗ ರಷ್ಯಾ ಪಡೆಗಳ ಪ್ರಮುಖ ಟಾರ್ಗೆಟ್ ಆಗಿದ್ದು, ನಿರಂತರವಾಗಿ ನಡೆಯುತ್ತಿರುವ ದಾಳಿಯಿಂದಾಗಿ ಅಲ್ಲಿನ ಜನರು ಭೂಲೋಕದಲ್ಲೇ ನರಕವನ್ನು ಕಾಣುವಂತಾಗಿದೆ.
ಶೆಲ್ಗಳು, ಗ್ರ್ಯಾಡ್-ಸ್ಮರ್ಚ್ ರಾಕೆಟ್ಗಳು, ಕ್ಷಿಪಣಿಗಳು ಇಲ್ಲಿನ ಪ್ರತಿಯೊಂದು ಕಟ್ಟಡಗಳಿಗೂ ಅಪ್ಪಳಿಸುತ್ತಲೇ ಇವೆ. ರಾತ್ರಿ-ಹಗಲೆನ್ನದೇ ವೈಮಾನಿಕ ದಾಳಿಗಳು ನಡೆಯುತ್ತಿವೆ. ಇಲ್ಲಿರುವ ಪ್ರತಿಯೊಂದು ಐತಿಹಾಸಿಕ ಕೇಂದ್ರಗಳೂ ನಾಮಾವಶೇಷಗೊಂಡಿವೆ.
1.35 ಲಕ್ಷ ಮಂದಿ ನೆಲೆಸಿರುವ ಮರಿಯುಪೋಲ್ ಲೆಫ್ಟ್ ಬ್ಯಾಂಕ್ ಎಷ್ಟರಮಟ್ಟಿಗೆ ಹಾನಿಗೀಡಾಗಿದೆಯೆಂದರೆ, ಇನ್ನು ಮುಂದೆ ಅಲ್ಲಿ ಯಾರೂ ಬದುಕಲು ಅಸಾಧ್ಯವಾದಂಥ ಸ್ಥಿತಿಗೆ ತಲುಪಿದೆ.
ಮೃತದೇಹಗಳೆಲ್ಲ ರಸ್ತೆಗಳಲ್ಲಿ ಅನಾಥವಾಗಿ ಬಿದ್ದಿವೆ. 1200ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ.
ನಗರದ ಹೊರವಲಯದಲ್ಲಿ ಸಾಮೂಹಿಕ ಸಮಾಧಿಗಾಗಿ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಲಾಗಿದೆ. ಮರಿಯುಪೋಲ್ ನಗರದಾದ್ಯಂತ ವಿದ್ಯುತ್ ವ್ಯತ್ಯಯವಾಗಿದೆ. ಕುಡಿಯಲು ನೀರೂ ಇಲ್ಲ, ಅಡುಗೆ ಮಾಡಲು ಗ್ಯಾಸ್ ಕೂಡ ಸಿಗುತ್ತಿಲ್ಲ. ರಷ್ಯಾದ ಪಡೆಯು ಸುಮಾರು 3.50 ಲಕ್ಷ ಮಂದಿಯನ್ನು ಒತ್ತೆಯಲ್ಲಿಟ್ಟುಕೊಂಡಿದೆ. 5 ದಿನಗಳ ಹಿಂದೆಯೇ ಅಂಗಡಿಗಳು, ಫಾರ್ಮಸಿಗಳನ್ನು ಲೂಟಿ ಮಾಡಲಾಗಿದೆ. ರಷ್ಯಾದ ಆಕ್ರಮಣವು ಸುಂದರ ನಗರವೊಂದರಲ್ಲಿ ಅರಾಜಕತೆ ಸೃಷ್ಟಿಸಿದೆ.
ಜನರು ಆಹಾರಕ್ಕಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಮತ್ತೂಬ್ಬರ ಕಾರಿನ ಗಾಜನ್ನು ಒಡೆದು ಪೆಟ್ರೋಲ್ ಕದಿಯುತ್ತಿದ್ದಾರೆ. ಧ್ವಂಸಗೊಂಡ ಮನೆಗಳಿಗೆ ನುಗ್ಗಿ ಕಟ್ಟಿಗೆಗಳೇನಾದರೂ ಇದೆಯೇ ಎಂದು ಹುಡುಕಾಡುತ್ತಿದ್ದಾರೆ. ಸಿಕ್ಕರೆ ಅದನ್ನು ತಂದು, ಬೆಂಕಿ ಕಾಯಿಸಿ ಮಂಜುಗಡ್ಡೆಗಳನ್ನು ಕರಗಿಸಿ ಕುಡಿಯಲು ಬಳಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!