ಉಕ್ರೇನ್ನಿಂದ ಭಾರತಕ್ಕೆ ವಾಪಸು ಮರಳಿದವರ ಬಗ್ಗೆ ಕ್ರಮ: ಭರವಸೆ
Team Udayavani, Mar 21, 2022, 10:15 PM IST
ನವದೆಹಲಿ: ಯುದ್ಧಪೀಡಿತ ರಾಷ್ಟ್ರವಾದ ಉಕ್ರೇನ್ನಿಂದ ಭಾರತಕ್ಕೆ ವಾಪಸು ಮರಳಿರುವ ವಿದ್ಯಾರ್ಥಿಗಳಿಗೆ ಭಾರತದಲ್ಲಿ ವಿದ್ಯಾಭ್ಯಾಸ ಮುಂದುವರಿಸುವುದಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಹೀಗೆಂದು ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್ಗೆ ಸೋಮವಾರ ಅರಿಕೆ ಮಾಡಿಕೊಂಡಿದ್ದಾರೆ.
ವಕೀಲರಾಗಿರುವ ವಿಶಾಲ್ ತಿವಾರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರ್ಕಾರವು ಈ ಮಾಹಿತಿ ನೀಡಿದೆ. “ಸರ್ಕಾರ ಅದರ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ:ಸ್ವಾರಮ್ಮನ ಜಾತ್ರಾ ಮಹೋತ್ಸವ : ನಾನಾ ಹರಕೆ ಹೊತ್ತು ತಂದ ಭಕ್ತರು
ಈ ವಿಚಾರವನ್ನು ಸರ್ಕಾರಕ್ಕೇ ಬಿಡಬೇಕು’ ಎಂದು ವಕೀಲ ವೇಣುಗೋಪಾಲ್ ಅವರು ನ್ಯಾಯಾಲಯಕ್ಕೆ ಕೇಳಿಕೊಂಡಿದ್ದಾರೆ. ಅದನ್ನು ಪರಿಗಣಿಸಿರುವ ನ್ಯಾಯಾಲಯ ವಿಶಾಲ್ ತಿವಾರಿ ಅವರ ಅರ್ಜಿಯನ್ನು ಕೈ ಬಿಟ್ಟಿದ್ದಾರೆ.