ಸಚಿನ್‌ ಗುರುತಿಸಿದ ಟಾಪ್‌-5 ಆಲ್‌ರೌಂಡರ್

ಕಪಿಲ್‌, ಇಮ್ರಾನ್‌, ಹ್ಯಾಡ್ಲಿ, ಮಾರ್ಷಲ್‌ ಮತ್ತು ಬೋಥಂ

Team Udayavani, Apr 26, 2020, 8:23 AM IST

ಸಚಿನ್‌ ಗುರುತಿಸಿದ ಟಾಪ್‌-5 ಆಲ್‌ರೌಂಡರ್

ಮುಂಬಯಿ: ಶುಕ್ರವಾರವಷ್ಟೇ ತಮ್ಮ 47ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡ ಕ್ರಿಕೆಟ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌, ತಾನು ಕಂಡ ಜಾಗತಿಕ ಕ್ರಿಕೆಟಿನ ಅಗ್ರ ಐವರು ಶ್ರೇಷ್ಠ ಆಲ್‌ರೌಂಡರ್‌ಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇವರಲ್ಲಿ ಭಾರತಕ್ಕೆ ಮೊದಲ ಸಲ ವಿಶ್ವಕಪ್‌ ಕಿರೀಟ ತೊಡಿಸಿದ ಕಪಿಲ್‌ದೇವ್‌ ಕೂಡ ಸೇರಿದ್ದಾರೆ.

ಅದೇ ರೀತಿ ಪಾಕಿಸ್ಥಾನದ ವಿಶ್ವಕಪ್‌ ವಿಜೇತ ತಂಡದ ಕಪ್ತಾನ ಇಮ್ರಾನ್‌ ಖಾನ್‌ ಕೂಡ ಸಚಿನ್‌ ಯಾದಿಯನ್ನು ಅಲಂಕರಿಸಿದ್ದಾರೆ. ಅವರು ಗುರುತಿಸಿದ ಉಳಿದ ಮೂರು ಮಂದಿ ಶ್ರೇಷ್ಠ ಸವ್ಯಸಾಚಿಗಳೆಂದರೆ ನ್ಯೂಜಿಲ್ಯಾಂಡಿನ ರಿಚರ್ಡ್‌ ಹ್ಯಾಡ್ಲಿ, ವೆಸ್ಟ್‌ ಇಂಡೀಸಿನ ಮಾಲ್ಕಂ ಮಾರ್ಷಲ್‌ ಮತ್ತು ಇಂಗ್ಲೆಂಡಿನ ಇಯಾನ್‌ ಬೋಥಂ. ಈ ಐವರೂ ಸಮಕಾಲೀನ ಕ್ರಿಕೆಟಿಗರಾಗಿದ್ದರೆಂಬುದು ವಿಶೇಷ. ಇವರ ಆಟವನ್ನು ಕಾಣುತ್ತಲೇ ತಾನು ಕ್ರಿಕೆಟ್‌ನಲ್ಲಿ ಮೇಲೇರತೊಡಗಿದೆ ಎಂದು ತೆಂಡುಲ್ಕರ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅಪೂರ್ವ ಅವಕಾಶ
“ಇವರಲ್ಲಿ ನಾನು ಕಪಿಲ್‌ದೇವ್‌ ಜತೆ ಆಡುವ ಅವಕಾಶ ಪಡೆದರೆ, 1989ರ ಮೊದಲ ಪಾಕಿಸ್ಥಾನ ಪ್ರವಾಸದ ವೇಳೆ ಇಮ್ರಾನ್‌ ಖಾನ್‌ ದಾಳಿಯನ್ನು ಎದುರಿಸಿದೆ. ಬಳಿಕ ನ್ಯೂಜಿಲ್ಯಾಂಡಿಗೆ ಎರಡನೇ ಸಲ ಪ್ರವಾಸಗೈದಾಗ ಹ್ಯಾಡ್ಲಿ ವಿರುದ್ಧ ಆಡಿದೆ. ಆಸ್ಟ್ರೇಲಿಯದಲ್ಲಿ ಮಾರ್ಷಲ್‌ ಮತ್ತು ಬೋಥಂ ಬೌಲಿಂಗ್‌ ಎದುರಿಸುವ ಅವಕಾಶ ಸಿಕ್ಕಿತು’ ಎಂಬುದಾಗಿ ತೆಂಡುಲ್ಕರ್‌ ಹೇಳಿದ್ದಾರೆ.

“ಈ ಐದು ಮಂದಿ ನನ್ನ ಪಾಲಿನ ಸರ್ವಶ್ರೇಷ್ಠ ಆಲ್‌ರೌಂಡರ್‌ಗಳು. ಇವರ ಆಟವನ್ನು ವೀಕ್ಷಿಸುತ್ತಲೇ ಇದ್ದ ನನಗೆ, ಬಳಿಕ ಇವರ ವಿರುದ್ಧವೇ ಆಡುವ ಅವಕಾಶ ಸಿಕ್ಕಿತು’ ಎಂದು ಸಚಿನ್‌ ಖುಷಿಯಿಂದ ಹೇಳಿಕೊಂಡಿದ್ದಾರೆ.

ಸಚಿನ್‌ ಶ್ರೇಷ್ಠ ಇನ್ನಿಂಗ್ಸ್‌
ಇದೇ ವೇಳೆ ಸಚಿನ್‌ ತೆಂಡುಲ್ಕರ್‌ ಜನ್ಮದಿನದ ಪ್ರಯುಕ್ತ, ಇವರ ಅತ್ಯುತ್ತಮ ಇನ್ನಿಂಗ್ಸ್‌ ಯಾವುದು ಎಂಬ ಕುರಿತು ಐಸಿಸಿ ಸಮೀಕ್ಷೆಯೊಂದನ್ನು ನಡೆಸಿತ್ತು. ಇದರ ಫಲಿತಾಂಶವೀಗ ಲಭ್ಯವಾಗಿದೆ. ಶಾರ್ಜಾದಲ್ಲಿ ನಡೆದ, ಆಸ್ಟ್ರೇಲಿಯ ವಿರುದ್ಧದ 1998ರ ಕೋಕಾಕೋಲ ಕಪ್‌ ಪಂದ್ಯದ ಶತಕಕ್ಕೆ ಈ ಗೌರವ ಲಭಿಸಿದೆ.

ಅಂದು ವಾರ್ನ್, ಫ್ಲೆಮಿಂಗ್‌, ಕ್ಯಾಸ್ಟ್ರೋವಿಚ್‌ ಅವರ ದಾಳಿಯನ್ನು ಧೂಳೀಪಟ ಮಾಡಿದ ಮಾಸ್ಟರ್‌ ಬ್ಲಾಸ್ಟರ್‌ 131 ಎಸೆತಗಳಿಂದ 143 ರನ್‌ ಸಿಡಿಸಿದ್ದರು (9 ಬೌಂಡರಿ, 5 ಸಿಕ್ಸರ್‌). ಆದರೆ ಮರುಳು ಗಾಳಿಯಿಂದಾಗಿ ಭಾರತ ಈ ಪಂದ್ಯದಲ್ಲಿ ಸೋಲು ಕಾಣಬೇಕಾಯಿತು.

2003ರ ವಿಶ್ವಕಪ್‌ ಕೂಟದಲ್ಲಿ ಪಾಕಿಸ್ಥಾನ ವಿರುದ್ಧ ಬಾರಿಸಿದ 98 ರನ್ನುಗಳ ಇನ್ನಿಂಗ್ಸ್‌ಗೆ ಈ ಸಮೀಕ್ಷೆಯಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.