ಬದುಕು ಮಕ್ಕಳ ಮರಳಿನಾಟ


Team Udayavani, Jan 22, 2021, 7:15 AM IST

ಬದುಕು ಮಕ್ಕಳ ಮರಳಿನಾಟ

ಮಕ್ಕಳು ಸಮುದ್ರದ ಬದಿ ಅಥವಾ ಹೊಳೆಯ ಬದಿ ಮರಳಿನಲ್ಲಿ ಆಟ ವಾಡುವುದನ್ನು ಎಂದಾದರೂ ನೀವು ಗಮನವಿರಿಸಿ ನೋಡಿದ್ದೀರಾ ಅಥವಾ ಅವರ ಆಟದಲ್ಲಿ ಪಾಲುಗೊಂಡಿದ್ದೀರಾ? ಹೌದಾದರೆ ಈ ಕಥೆಯ ಹೂರಣ ನಿಮಗೆ ಬಹಳ ಚೆನ್ನಾಗಿ ಮನದಟ್ಟಾ ಗಬಹುದು.

ಗೌತಮ ಬುದ್ಧ ಒಮ್ಮೆ ದೀರ್ಘ‌ ಯಾತ್ರೆಯ ಬಳಿಕ ತನ್ನ ಶಿಷ್ಯ ಆನಂದ ಮತ್ತು ಇತರರ ಜತೆಗೆ ಒಂದು ಹಳ್ಳಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ. ಹಳ್ಳಿಯ ಹತ್ತಿರಕ್ಕೆ ಸಾಗಿ, ಹೆಬ್ಟಾಗಿ ಲನ್ನು ದಾಟಿ ಒಳಪ್ರ ವೇಶಿಸುತ್ತಿರಬೇಕಾದರೆ ಮಕ್ಕಳ ಗುಂಪೊಂದು ಮರಳಿನಲ್ಲಿ ಆಟವಾಡು ವುದು ಕಾಣಿಸಿತು. ಬುದ್ಧ ಅಲ್ಲೇ ಅರಳಿ ಕಟ್ಟೆಯ ಮೇಲೆ ಕುಳಿತು ಮಕ್ಕಳಾಟವನ್ನು ಬಹಳ ಆಸಕ್ತಿ ವಹಿಸಿ ತದೇಕಚಿತ್ತನಾಗಿ ಗಮನಿಸಿದ. ಶಿಷ್ಯರೆ ಲ್ಲರೂ ಅಲ್ಲೇ ಸುತ್ತಮುತ್ತ ಕುಳಿತರು.

ಮಕ್ಕಳ ಆಟ ಬಹಳ ಮಜವಾಗಿ ಸಾಗಿತ್ತು. ಎಲ್ಲರೂ ಮರಳಿನಲ್ಲಿ ಮನೆ ಕಟ್ಟುವುದರಲ್ಲಿ ನಿಮಗ್ನರಾಗಿದ್ದರು. ಇಬ್ಬರು-ಮೂವರು ಪುಟಾಣಿಗಳು ಜತೆ ಸೇರಿದ್ದರು. ಪ್ರತೀ ತಂಡದ್ದೂ ಒಂದೊಂದು ಪ್ರತ್ಯೇಕ ಮರಳಿನ ಮನೆ.

ಆಟವಾಡುತ್ತಿದ್ದುದು ಸಣ್ಣ ಪ್ರದೇಶ ದಲ್ಲಿ, ಮಕ್ಕಳು ಹಲವರಿದ್ದರು. ಯಾರಾ ದರೂ ಇನ್ನೊಬ್ಬರ ಮರಳಿನ ಮನೆಗೆ ತೊಂದರೆ ಕೊಟ್ಟರೆ ಕೂಗಾಟ, ಚೀರಾಟ ನಡೆದೇ ಇತ್ತು.

ನಿಮಗೆ ಗೊತ್ತಲ್ಲ, ಮರಳಿನ ಮನೆ ಯನ್ನು ಕೆಡಿಸುವುದು ಬಹಳ ಸುಲಭ. ಒಂದು ಸಣ್ಣ ಕಲ್ಲು ಎಸೆದರೆ ಸಾಕು ಅಥವಾ ಹತ್ತಿರವೇ ನಿಂತು ಪಾದವನ್ನು ಬಲವಾಗಿ ನೆಲಕ್ಕೆ ಬಡಿದರೆ ಸಾಕು; ಮರಳಿನ ಮನೆ ಕುಸಿಯುತ್ತದೆ.

ಒಂದಿಬ್ಬರು ಮಕ್ಕಳು ಇನ್ನೊಂದು ತಂಡದ ಮರಳಿನ ಮನೆಯನ್ನು ಕೆಡವಿ ದರು. ಜಗಳವಾಯಿತು. ಇನ್ನೊಂದು ತಂಡದ ಮನೆ ಸಂಪೂರ್ಣವಾದಾಗ ಹರ್ಷೋದ್ಘಾರ ಕೇಳಿಬಂತು. ಬುದ್ಧ ಮೌನವಾಗಿ ಎಲ್ಲವನ್ನೂ ಗಮನಿಸು ತ್ತಲೇ ಇದ್ದ. ಅವನ ಪದ್ಮಸದೃಶ ಮುಖ ದಲ್ಲಿ ಮುಗುಳ್ನಗು ರಾರಾಜಿಸುತ್ತಿತ್ತು.

ಅಷ್ಟರಲ್ಲಿ ಸೂರ್ಯ ಮುಳುಗಿ ಕತ್ತಲು ಆವರಿಸಲಾರಂಭಿಸಿತು. ಹತ್ತಿ ರವೇ ಇದ್ದ ಹಳ್ಳಿಯ ಮನೆಗಳಿಂದ ಮಕ್ಕಳು ತಾಯಂದಿರ ಕೂಗು ಕೇಳಿಬಂತು, “ಬನ್ನಿರೋ, ಆಟ ಸಾಕು. ಕತ್ತಲಾಯಿತು. ಕೈಕಾಲು ತೊಳಕೊಂಡು ಬನ್ನಿ…’

ಎಲ್ಲ ಮಕ್ಕಳು ಆಟ ನಿಲ್ಲಿಸಿದರು. ಕೆಲವು ಮನೆಗಳು ಅರೆವಾಸಿ ಪೂರ್ಣಗೊಂಡಿದ್ದವು, ಇನ್ನು ಕೆಲವು ಸಂಪೂ ರ್ಣವಾಗಿದ್ದವು. . ಮಕ್ಕಳು ಅವುಗಳ ಮೇಲೆಯೇ ಥಕಥೈ ಕುಣಿದರು. ಕೆಲವು ಕ್ಷಣಗಳ ಹಿಂದೆ ಹಲವು ಮರಳಿನ ಮನೆಗಳಿದ್ದ ಜಾಗ ಈಗ ಮಟ್ಟಸ ವಾಗಿತ್ತು. ಸ್ವಲ್ಪ ಸಮಯ ಹಿಂದೆ ತಾವು ಕಟ್ಟಿದ ಮನೆಗಳನ್ನು ಯಾರಾದರೂ ಕೆಡಿಸಿದರೆ ಇದೇ ಮಕ್ಕಳು ಚೀರುತ್ತಿ ದ್ದರು. ಆದರೆ ಈಗ ಅವರೇ ಅವುಗ ಳನ್ನೆಲ್ಲ ಕೆಡವಿದರು. ಬಳಿಕ ಮಕ್ಕಳೆಲ್ಲ ತಾವು ಆಟವಾಡಿದ ಜಾಗದತ್ತ ಹಿಂದಿ ರುಗಿಯೂ ನೋಡದೆ ತಮ್ಮ ತಮ್ಮ ಮನೆಗಳತ್ತ ಧಾವಿಸಿದರು.

ಈಗ ಬುದ್ಧ ಮೌನ ಮುರಿದು ತನ್ನ ಶಿಷ್ಯರನ್ನು ಉದ್ದೇಶಿಸಿ ಹೇಳಿದ, “ನಮ್ಮ ಬದುಕು ಈ ಮಕ್ಕಳು ಆಡಿದ ಮರಳಿನಾಟಕ್ಕಿಂತ ಹೆಚ್ಚಿನದೇನಲ್ಲ…’

ಹೌದೋ ಅಲ್ಲವೋ, ಗಮನಿಸಿ ನೋಡಿ. ಹುಟ್ಟುತ್ತೇವೆ, ದೊಡ್ಡವರಾಗು ತ್ತೇವೆ. ಕಲಿಯುತ್ತೇವೆ. ಉದ್ಯೋಗ ಹಿಡಿಯುತ್ತೇವೆ. ಮಡದಿ, ಮಕ್ಕಳು, ಮನೆ, ಕಾರು, ಅಂತಸ್ತು ಒಂದೊಂದಾಗಿ ಒಂದೊಂದಾಗಿ ಕಟ್ಟಿಕೊಳ್ಳುತ್ತ ಹೋಗು ತ್ತೇವೆ. ಕೊನೆಗೊಂದು ದಿನ ಆಟ ನಡೆ ಯುತ್ತಲೇ ಇರುವಾಗ ಕರೆ ಬರುತ್ತದೆ. ಆಟವನ್ನು ಅಲ್ಲಿಯೇ ನಿಲ್ಲಿಸಿ ಹೋಗ ಬೇಕಾಗುತ್ತದೆ, ಹಿಂದಿರುಗಿಯೂ ನೋಡದೆ!
ಹಾಗೆಂದು ಆಟವಾಡುವ ಸಂಭ್ರಮ ವನ್ನು ತಪ್ಪಿಸಿಕೊಳ್ಳಬಾರದು. ಪ್ರತೀ ಕ್ಷಣದಲ್ಲಿಯೂ ಸಂಪೂರ್ಣವಾಗಿ ತೊಡಗಿಸಿಕೊಂಡು ಖುಷಿ ಪಡುತ್ತ ಚೆನ್ನಾಗಿ ಆಟವಾಡಬೇಕು.

-(ಸಾರ ಸಂಗ್ರಹ)

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.