ಶನಿವಾರದ ಸಂತೆ ವ್ಯಾಪಾರ ಹೆದ್ದಾರಿಯ ಪಕ್ಕಕ್ಕೆ ಸ್ಥಳಾಂತರ
ಕುಂದಾಪುರ: ವ್ಯಾಪಾರಿಗಳಲ್ಲಿ ಹಿಗ್ಗಿದ ಖುಷಿ
Team Udayavani, May 31, 2020, 5:54 AM IST
ಕೋಟೇಶ್ವರ: ಕುಂದಾಪುರ ವಾರದ ಸಂತೆಯು ಕಳೆದ 4 ವಾರಗಳಿಂದ ಕೋವಿಡ್-19 ನಿಮಿತ್ತ ಕೋಟೇಶ್ವರದ ಸರಕಾರಿ ಪದವಿ ಕಾಲೇಜಿನ ಮೈದಾನ ದಲ್ಲಿ ನಡೆಯುತ್ತಿದ್ದು, ಮೇ 30ರಂದು ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಗೆ ಸ್ಥಳಾಂತರಗೊಂಡಿದೆ.
ತಾತ್ಕಾಲಿಕ ವರ್ಗಾವಣೆ
ಕಳೆದ 3 ವಾರಗಳಿಂದ ಪ್ರತಿ ಶನಿವಾರ ವಾರದ ಸಂತೆಯು ಇಲ್ಲಿನ ಕಾಲೇಜಿನ ಮೈದಾನದಲ್ಲಿ ಉತ್ತಮವಾಗಿ ನಡೆಯುತ್ತಿತ್ತು. ಎಪಿಎಂಸಿಯ ಸೂಚನೆ ಯಂತೆ ಶನಿವಾರ ಸಂತೆಯನ್ನು ತಾತ್ಕಾಲಿಕ ನೆಲೆಯಲ್ಲಿ ಕೋಟೇಶ್ವರಕ್ಕೆ ವರ್ಗಾಯಿಸಲಾಗಿತ್ತು.
ಉತ್ತಮ ಲಾಭ
ಮೇ 30ರಂದು ಸರಕಾರಿ ಪದವಿ ಕಾಲೇಜಿನ ಕೊಠಡಿಗಳನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಿರುವ ಹಿನ್ನೆಲೆಯಲ್ಲಿ ವಾರದ ಸಂತೆ ವ್ಯಾಪಾರವನ್ನು ರಾಜ್ಯ ಹೆದ್ದಾರಿಯ ಬದಿಯಲ್ಲಿ ನಡೆಸಬೇಕಾಯಿತು. ವ್ಯಾಪಾರ ಉತ್ತಮವಾಗಿದ್ದು, ಲಾಭದಾಯಕ ವಾಗಿದೆ.
ಹೆಚ್ಚಿನ ವಹಿವಾಟು
ಕುಂದಾಪುರ, ಬೈಂದೂರು, ಕೋಟ, ಬ್ರಹ್ಮಾವರ, ಸಿದ್ದಾಪುರ, ಸಾಗರ, ಹೊಸನಗರ ಮೊದಲಾದ ಕಡೆಗಳಿಂದ ಆಗಮಿಸಿದ್ದ ವಿವಿಧ ತರಕಾರಿ, ಹಣ್ಣು ಹಂಪಲುಗಳ ವ್ಯಾಪಾರಿಗಳ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದಿದ್ದು, ಈ ವಾರ ವ್ಯವಹಾರದಲ್ಲಿ ಹೆಚ್ಚಿನ ಖುಷಿ ಕೊಟ್ಟಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ