ಕೇಂದ್ರ ತಂಡಕ್ಕೆ ಮತ್ತೆ ದೀದಿ ಅವಮಾನ
Team Udayavani, Apr 26, 2020, 6:05 AM IST
ಕೋಲ್ಕತ್ತಾ: ಪಶ್ಚಿಮ ಬಂಗಾಲ ಮತ್ತು ಕೇಂದ್ರ ಸರಕಾರ ನಡುವಿನ “ಕೋವಿಡ್-19 ಗುದ್ದಾಟ’ ಮುಂದುವರಿದಿದೆ. ಕೇಂದ್ರದಿಂದ ಪರಿಶೀಲನೆಗೆ ಆಗಮಿಸುವ ತಂಡವನ್ನು ಸಿಎಂ ಮಮತಾ ಬ್ಯಾನರ್ಜಿ ನಿರ್ಲಕ್ಷ್ಯ ತೋರುತ್ತಿರುವುದು ಇದೀಗ ಗೃಹ ಸಚಿವ ಅಮಿತ್ ಶಾ ಅವರ ಮುನಿಸಿಗೆ ಕಾರಣವಾಗಿದೆ.
ಹಿರಿಯ ಐಎಎಸ್ ಅಧಿಕಾರಿ ಅಪೂರ್ವ ಚಂದ್ರ ನೇತೃತ್ವದಲ್ಲಿ ವೀಕ್ಷಣಾ ತಂಡ, ಬಿಎಸ್ಎಫ್ ಯೋಧರ ರಕ್ಷಣೆಯೊಂದಿಗೆ ಕೋಲ್ಕತ್ತಾಕ್ಕೆ ತೆರಳಿತ್ತು. ಆದರೆ ಕೇಂದ್ರ ತಂಡ ಮತ್ತು ಯೋಧರಿಗೆ ಗೆಸ್ಟ್ಹೌಸ್ ಹೊರಗೆ ಹೋಗಲೂ ರಾಜ್ಯ ಪೊಲೀಸರ ಅನುಮತಿ ಕಡ್ಡಾಯಗೊಳಿಸಿ, ಪ.ಬಂಗಾಲ ಕಟ್ಟಿಹಾಕಿತ್ತು ಎಂದು ಗೃಹ ಸಚಿವಾಲಯಕ್ಕೆ ತಂಡ ದೂರಿದೆ. ಕೇವಲ 6 ಗಂಟೆ ಮಾತ್ರವೇ ವಸ್ತುಸ್ಥಿತಿ ಪರಿಶೀಲನೆಗೆ ಅವಕಾಶ ಮಾಡಿಕೊಡಲಾಗಿತ್ತು. ದೀದಿ ಸರಕಾರದ ಈ ಕ್ರಮಕ್ಕೆ ಶಾ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕೇವಲ ಎರಡು ಕ್ಷೇತ್ರ, 1 ಕ್ವಾರಂಟೈನ್ ಕೇಂದ್ರಕ್ಕೆ ಮಾತ್ರವೇ ಭೇಟಿ ಕೊಡಲು ತಂಡಕ್ಕೆ ಸಾಧ್ಯವಾಗಿದೆ. ಒಂದು ದಿನದಲ್ಲಿ ಕೇವಲ 400 ಮಂದಿಯನ್ನು ಮಾತ್ರವೇ ಪರೀಕ್ಷೆಗೊಳಪಡಿಸುತ್ತಿರುವ ದೀದಿ ಸರಕಾರ, ಕೇಂದ್ರ ಅಪೇಕ್ಷಿಸಿರುವ ನಿತ್ಯ ಕನಿಷ್ಠ 900 ಶಂಕಿತರ ಪರೀಕ್ಷೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್