ವಲಸೆ ಕಾರ್ಮಿಕರಿಗೆ ಆಹಾರ ನೀಡಿದ ಸೆಹವಾಗ್
Team Udayavani, Jun 1, 2020, 7:10 AM IST
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ ಕುಟುಂಬ ಸಹಿತ ತಮ್ಮ ನಿವಾಸದಲ್ಲಿ ತಾವೆ ಅಡುಗೆ ಮಾಡಿ ವಲಸೆ ಕಾರ್ಮಿಕರಿಗೆ ಆಹಾರ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಸೆಹವಾಗ್, “ನಿಮ್ಮ ಸ್ವಂತ ಮನೆಗಳಲ್ಲಿ ಇರುವ ಸೌಕರ್ಯವನ್ನು ಬಳಸಿಕೊಂಡು ಆಹಾರ ತಯಾರಿಸುವುದು ಹಾಗೂ ಅದನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಅಗತ್ಯವಿರುವ ವಲಸೆ ಕಾರ್ಮಿಕರಿಗೆ ತಲುಪಿಸಿ. ಮಾತ್ರವಲ್ಲ ನೂರು ಜನರಿಗೆ ಒಳ್ಳೆಯದನ್ನು ಬಯಸಿ ನೀವು ಕೊಡುಗೆ ನೀಡಲು ಬಯಸುವುದಾದರೆ ಸೆಹವಾಗ್ ಫೌಂಡೇಶನ್ ಜತೆಗೆ ಕೈಜೋಡಿಸಿ’ ಎಂದು ತಮ್ಮ ಅಧಿಕೃತ ಟ್ವಿಟರ್ನಲ್ಲಿ ತಿಳಿಸಿದ್ದಾರೆ.