ಕೆಕೆಆರ್ ಕ್ರಿಕೆಟಿಗರ ಪರಿಸರ ಕಾಳಜಿ: ಗಿಡ ನೆಡುವ ಯೋಜನೆ
Team Udayavani, May 29, 2020, 6:14 AM IST
ಕೋಲ್ಕತಾ: ಐಪಿಎಲ್ ಅನಿಶ್ಚಿತತೆಯ ನಡುವೆಯೂ ಕೋಲ್ಕತಾ ನೈಟ್ರೈಡರ್ ತಂಡ ಬೇರೊಂದು ಕಾರಣದಿಂದ ಸುದ್ದಿಯಾಗಿದೆ. ಇತ್ತೀಚೆಗಷ್ಟೇ ಅಂಫಾನ್ ಚಂಡಮಾರುತದಿಂದ ತತ್ತರಿಸಿದ ಕೋಲ್ಕತಾದಲ್ಲಿ 5 ಸಾವಿರ ಗಿಡಗಳನ್ನು ನೆಡಲು ಫ್ರಾಂಚೈಸಿ ಮುಂದಾಗಿದೆ. ಇದು ಕೆಕೆಆರ್ ಕ್ರಿಕೆಟಿಗರ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ.
ಸ್ಥಳೀಯ ಆಡಳಿತದೊಂದಿಗೆ ಕೈ ಜೋಡಿಸಿ ಕೋಲ್ಕತಾದ ವಿವಿಧ ಭಾಗಗಳಲ್ಲಿ ಸುಮಾರು 5 ಸಾವಿರದಷ್ಟು ಗಿಡಗಳನ್ನು ನೆಡುವುದು ನಮ್ಮ ಯೋಜನೆಯಾಗಿದೆ ಎಂಬ ಫ್ರಾಂಚೈಸಿಯ ಹೇಳಿಕೆಯನ್ನು “ಫಸ್ಟ್ ಪೋಸ್ಟ್’ ಪ್ರಕಟಿಸಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೊಡ್ಡ ಮೊತ್ತವೊಂದನ್ನು ನೀಡುವುದು ಕೂಡ ಕೆಕೆಆರ್ ಫ್ರಾಂಚೈಸಿಯ ಯೋಜನೆಗಳಾಗಿವೆ.