ಶಂಕರನಾರಾಯಣ ಪೊಲೀಸ್ಗೆ ಕೋವಿಡ್, 18 ಸಿಬಂದಿಗೆ ಕ್ವಾರಂಟೈನ್; ಠಾಣೆ ಸ್ಥಳಾಂತರ
Team Udayavani, Jun 2, 2020, 5:03 AM IST
ಸಿದ್ದಾಪುರ: ಶಂಕರನಾರಾಯಣ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗೆ ಕೋವಿಡ್ ದೃಢವಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಪೊಲೀಸ್ ಠಾಣೆಯನ್ನು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಜತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 18 ಸಿಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಕೋಟತಟ್ಟು ಸೀಲ್ಡೌನ್
ಕೋಟ: ಸಮೀಪ ಕೋಟತಟ್ಟುವಿನ ನಿವಾಸಿ ಮಹಿಳಾ ಕಾನ್ಸ್ಟೆಬಲ್ಗೆ ಕೋವಿಡ್ ಬಾಧಿಸಿರುವ ಹಿನ್ನೆಲೆಯಲ್ಲಿ ಅವರ ಮನೆಯ ಪರಿಸರದ 50 ಮೀಟರ್ ವ್ಯಾಪ್ತಿಯ ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ ಹಾಗೂ ಸ್ಥಳೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಕುಂದಾಪುರ, ಬೈಂದೂರು: ವಿವಿಧೆಡೆ ಸೀಲ್ಡೌನ್
ಕುಂದಾಪುರ: ಕ್ವಾರಂಟೈನ್ ಅವಧಿ ಮುಗಿದು ಗಂಟಲ ದ್ರವ ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಮರಳಿದ ಕೆಲವರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆ ಮನೆಗಳ ಸುಮಾರು 200 ಮೀ. ಪ್ರದೇಶವನ್ನು ಸೀಲ್ಡೌನ್ ಮಾಡುವ ಕ್ರಮ ಸೋಮವಾರವೂ ಮುಂದುವರಿದಿದೆ.
ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚುಂಗಿಗುಡ್ಡೆ, ಆಲೂರು ಪಂಚಾ ಯತ್ ವ್ಯಾಪ್ತಿಯ ಸೆಳಕೋಡು, ಹರ್ಕೂರು, ದೊಂಬೆ ಶಿರೂರು, ಯಡ್ತರೆ, ಕೆರ್ಗಾಲ್ ಗ್ರಾಮಗಳಲ್ಲಿನ ಒಟ್ಟು 6 ಕಡೆಗಳಲ್ಲಿ ಒಟ್ಟು 15 ಪ್ರಕರಣಗಳು ಕಂಡು ಬಂದಿದ್ದು ಕಂಟೈನ್ಮೆಂಟ್ ಝೋನ್ ಎಂದು ಸೀಲ್ಡೌನ್ ಮಾಡಲಾಗಿದೆ. ಶಂಕರನಾರಾಯಣ ಠಾಣೆಗೆ ಸೋಂಕಿತರೊಬ್ಬರು ಭೇಟಿ ನೀಡಿದ್ದಾರೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಠಾಣೆಯನ್ನು ಸ್ಯಾನಿಟೈಸೇಶನ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್