ಶೆಟ್ಟರ ಪ್ರಸಾದ

ಲಾಕ್‌ಡೌನ್‌ನಲ್ಲಿ ಹಸಿವು ನೀಗಿಸಿದವನೇ ದೇವರು

Team Udayavani, Jun 30, 2020, 5:05 AM IST

shaettra-prasada

ಸಾಂದರ್ಭಿಕ ಚಿತ್ರ

ನಂಜನಗೂಡಿನಲ್ಲಿ ಕೋವಿಡ್‌ 19 ಕಂಟಕವಾಯಿತು. ಸೋಂಕು ಹರಡದಂತೆ ತಡೆಯಲು ಅಲ್ಲಿನ ಚೆಕ್‌ಪೋಸ್ಟ್‌ ಬಳಿ ವಿವಿಧ ಇಲಾಖೆಗಳ ನೌಕರರು ಕೆಲಸಕ್ಕೆ ನಿಂತರು. ಅವರಿಗೆಲ್ಲಾ ಊಟ-ತಿಂಡಿ ಬೇಕಲ್ಲವೇ? ಈ ಸಂದರ್ಭದಲ್ಲಿ ತಕ್ಷಣ ನೆರವಿಗೆ ಬಂದವರು ಜಿತೇಂದ್ರ ಶೆಟ್ಟರು, ಗುರುಪ್ರಸಾದರು. ಸುಮಾರು 60 ದಿನಗಳ ಕಾಲ, ಉಚಿತವಾಗಿ ಪುಷ್ಕಳ ಭೋಜನ ಬಡಿಸಿದರು..

ಮಾರ್ಚ್‌ ತಿಂಗಳ ಕೊನೆಯಲ್ಲಿ ಕೋವಿಡ್‌ 19 ನಂಜನಗೂಡನ್ನು ಅಪ್ಪಳಿಸಿ, ಬೊಬ್ಬಿರಿಯುತ್ತಿದ್ದಾಗ ಅಲ್ಲಿನ ಸಾವಿರಾರು ಜನ ಆತಂಕಕ್ಕೆ ಒಳಗಾಗಿದ್ದು ಸಹಜ. ಅಂಥ ಸಂದರ್ಭದಲ್ಲೇ ಜೀವಮಾನದಲ್ಲೇ ಕಂಡು ಕಾಣದ ಲಾಕ್‌ಡೌನ್‌  ಜಾರಿಯಾಯಿತು. ಪರಿಣಾಮ, ಯಾರೂ, ಎಲ್ಲೂ ಹೋಗದಂತೆ ನಿರ್ಬಂಧ ಹೇರಲಾಗಿತ್ತು. ಇಂಥ ಸಂದಿಗಟಛಿ ಸಮಯದಲ್ಲಿ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಬಹ ಳಷ್ಟು ಜನ ಉಳ್ಳವರು, ಓಡೋಡಿ ಬಂದು ನಿರ್ಗತಿಕರ ನೆರವಿಗೆ ನಿಂತರು.

ಅದರಲ್ಲಿ ಈ ಗುರುಪ್ರಸಾದ್‌ ಕೂಡ ಒಬ್ಬರು. ಇವರು ಆಯ್ಕೆ ಮಾಡಿಕೊಂಡ ಜಾಗ ಚೆಕ್‌ಪೋಸ್ಟ್‌ ಇವರು ಜಿತೇಂದ್ರ ಶೆಟ್ಟಿ ಒಡೆತನದ ಭರಣಿ ಕೇಟರಿಂಗ್‌ ಗ್ರೂಫ್ನ ಮ್ಯಾನೇಜರ್‌. ಲಾಕ್‌ಡೌನ್‌ ಆದಾಗ ಒಂದಷ್ಟು ಅಧಿಕಾರಿಗಳು ಬಂದು,  ನಿಮ್ಮಲ್ಲಿ ಊಟ ಏನಾದರೂ ಸಿಗಬಹುದಾ ಅಂತ ಕೇಳಿದಾಗ ಗುರುಪ್ರಸಾದ್‌, ತಕ್ಷಣ ಬೆಂಗಳೂರಲ್ಲಿರುವ ಮಾಲೀಕರಿಗೆ ಫೋನು ಮಾಡಿ ಸಮಸ್ಯೆ ವಿವರಿಸಿದರು. ಆ ಕಡೆಯಿಂದ ಶೆಟ್ಟರು, “ಒಂದು ರೂ. ಪಡೆಯದೆ ಊಟ ಕೊಡಿ’ ಅಂದರು.

ಆನಂತರದಲ್ಲಿ ಮಾಲೀಕರು ಹೇಳಿದಂತೆ ಒಂದು ರೂಪಾಯಿ ಕೂಡ ಪಡೆಯದೇ ಊಟ ನೀಡುವ ಕಾರ್ಯ ಆರಂಭವಾಯಿತು. ಈ ವಿಚಾರ ಮೆಲ್ಲಗೆ ನಂಜನಗೂಡಿನಾದ್ಯಂತ ಹರಡಿತು. ತಾಂಡವಪುರ ಚೆಕ್‌ಪೋಸ್ಟ್‌ನಲ್ಲಿ ಕಾವಲಿಗೆ ನಿಂತ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್‌, ಆರೋಗ್ಯ ಹಾಗೂ ಗ್ರಾಮ ಪಂಚಾಯಿತಿಯ ಸುಮಾರು 30 ರಿಂದ 40 ಸಿಬ್ಬಂದಿಗಳಿಗೆ ಪ್ರತಿದಿನ ಬೆಳಗಿನಿಂದ ರಾತ್ರಿಯವರಿಗೂ ಉಚಿತವಾಗಿ ಊಟ, ತಿಂಡಿ, ಕಾಫಿ-ಟೀ, ಕುಡಿಯಲು ಬಿಸ್ಲೇರಿ  ನೀರಿನ ವ್ಯವಸ್ಥೆ ಆಯಿತು.

ದಿನಕ್ಕೆ ಏನಿಲ್ಲ ಅಂದರೂ ನೂರು ಊಟ, 30 ತಿಂಡಿ, ನೂರಾರು ಕಾಫಿ-ಟೀ ನ ಸಮಾರಾಧನೆ ನಡೆಯುತ್ತಲೇ ಇತ್ತು. “ಅಷ್ಟೂ ಜನ ಸಿಬ್ಬಂದಿ, ನಮ್ಮೂರಿನ ಜನರಿಗೆ ಸೋಂಕು ಬರಬಾರದು ಅಂತ ಹಗಲು ರಾತ್ರಿ  ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಇಂಥ ಸೇವೆಗೆ ನಮ್ಮದೇನಾದರೂ ಕಿಂಚಿತ್‌ ಕಾಣಿಕೆ ಇರಲಿ ಅಂತ ಊಟ ಕೊಟ್ಟೆವು ಅಷ್ಟೇ’ ಅಂತಾರೆ ಗುರುಪ್ರಸಾದ್‌. ಇಷ್ಟೇ ಅಲ್ಲ, ಲಾಕ್‌ಡೌನ್‌ನಿಂದ ಬಸ್‌ಗಳು ರದ್ದಾದಾಗ ನಡೆಯುತ್ತಲೇ ಹೊರಟ  ಬಡವರು, ದಾರಿ ಹೋಕ ರಿಗೂ ಸಹ ಊಟ ನೀಡಿದ್ದಾರೆ.

ಚೆಕ್‌ಪೋಸ್ಟ್‌ಗಳಿಗೆ ಪರರಾಜ್ಯದ ವಾಹನಗಳು ಬಂದರೆ ಸುಮ್ಮನೆ ಬಿಡೋಲ್ಲ. ಒಂದಷ್ಟು ಹೊತ್ತು ಕಾಯಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಮಕ್ಕಳು ಇರುವ ಪ್ರಯಾಣಿಕರ  ಪಾಡೇನು? ಮಕ್ಕಳಿಗೆ ನೀರು ಹಾಗೂ ಹಾಲಿನ ವ್ಯವಸ್ಥೆ ಮಾಡಿದ್ದೂ ಗುರುಪ್ರಸಾದರ ಹೆಗ್ಗಳಿಕೆ. ಭರಣಿ ಕೇಟರಿಂಗ್‌, ಸುತ್ತಮುತ್ತಲ ಫ್ಯಾಕ್ಟರಿಗಳಿಗೆ ಊಟ ಒದಗಿಸುತ್ತದೆ. ಹೀಗಾಗಿ, ಲಾಕ್‌ಡೌನ್‌ ಇದ್ದರೂ, ಊಟ, ತಿಂಡಿ ಮಾಡಲೇಬೇಕಾಗಿತ್ತು.  ಇದರ ಜೊತೆಗೆ, ಕೋವಿಡ್‌ 19 ವಾರಿಯರ್ಸ್‌ಗೂ ಕೂಡ ಅಡುಗೆ ತಯಾರಿಸಿಕೊಟ್ಟರು.

ಸುಮಾರು 60 ದಿನಗಳ ಕಾಲ ಪುಷ್ಕಳ ಭೋಜನಕ್ಕೆ ವ್ಯವಸ್ಥೆ ಮಾಡಿದ ಭರಣಿ ಮಾಲೀಕರನ್ನು ಕರೆಸಿ, ಸನ್ಮಾನಿಸಿದ್ದೂ ಆಯಿತು. “ಹಸಿದವರಿಗೆ ಅನ್ನ,  ಆಹಾರ ದಾನ ಮಾಡುವುದು ನಮ್ಮ ಸಂಸ್ಕೃತಿ. ಗುರುಪ್ರಸಾದರ ಟೀಂ ಇದನ್ನೇ ಮಾಡಿದೆ. ಲಾಭವನ್ನು ಲೆಕ್ಕಹಾಕುವ ಈ ಕಾಲದಲ್ಲಿ, ದಿನಕ್ಕೆ ಕನಿಷ್ಠ ಮೂರು, ನಾಲ್ಕು ಸಾವಿರ ಮೊತ್ತದಷ್ಟು ಊಟ ಬಡಿಸಿದ್ದು, ಕೋವಿಡ್‌ 19 ಕಾಲದಲ್ಲಿ  ಮಾಡಿರುವ ಬಹು ದೊಡ್ಡ ಕಾರ್ಯ. ಅದನ್ನು ಯಾರೂ ಮರೆಯುವಂತಿಲ್ಲ’ ಎನ್ನುತ್ತಾರೆ ಛತ್ರ ಹೋಬಳಿಯ ಉಪತಹಶೀಲ್ದಾರ ಬಾಲಸುಬ್ರಮಣ್ಯಂ.

* ಶ್ರೀಧರ್‌ ಆರ್‌. ಭಟ್‌

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.