ಶಿಕಾರಿಪುರ: ಸಾಲೂರು ಕೆರೆಯಲ್ಲಿ ಈಜಲು ಹೋಗಿ ಯುವಕ ಸಾವು..!
Team Udayavani, Oct 13, 2019, 10:15 PM IST
ಶಿಕಾರಿಪುರ: ತಾಲೂಕಿನ ಸಾಲೂರು ಹಿರೇಕೇರೆಯಲ್ಲಿ ಈಜಲು ಹೋಗಿದ ಯುವಕ ಸಾವನ್ನಪ್ಪಿದ ಘಟನೆ ರವಿವಾರ ಸಂಜೆ ನಡೆದಿದೆ.
ಶಿಕಾರಿಪುರ ತಾಲೂಕಿನ ಚಿಕ್ಕ ಸಾಲೂರು ಗ್ರಾಮದ ಲಿಂಗರಾಜ್ ಬಿನ್ ಶಿವರಾಜಪ್ಪ (23) ಮೃತ ಯುವಕ ಎನ್ನಲಾಗಿದೆ.
ಶಿಕಾರಿಪುರ ಖಾಸಗಿ ಬಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ ಎನ್ನಲಾಗಿದ್ದು
ಇಬ್ಬರು ಸ್ನೇಹಿತರು ಇಂದು ಸಾಲೂರು ಮಠದ ಪಕ್ಕದಲ್ಲಿ ಇರುವ ಹೀರೆಕೆರೆಯಲ್ಲಿ ಈಜಲು ಹೋಗಿದಾಗ ಈ ದುರ್ಘಟನೆ ನಡೆದಿದೆ ಸ್ಥಳಕ್ಕೆ ಗ್ರಾಮಾಂತರ ಪಿ.ಎಸ್ ಐ ರವಿಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.