ಸೆಲ್ಕೋ ಸೌರಶಕ್ತಿ ಬಳಸಿ ಮೊಬೈಲ್ ಕ್ಯಾಂಟೀನ್!
Team Udayavani, Nov 18, 2021, 7:55 PM IST
ಶಿರಸಿ : ಸಂಚಾರಿ ಕ್ಯಾಂಟೀನ್ ಗೆ ಸಂಜೆ ಆದರೆ ಬೆಳಕು ಹೇಗೆ ಎಂಬುದು ಚಿಂತೆ. ತಿಂಡಿ ಸಿದ್ದತೆಗೆ ಮಿಕ್ಸರ್ ವಿದ್ಯುತ್ ಇಲ್ಲದೆ ಬಳಕೆ ಹೇಗೆ ಎಂಬುದು ಇನ್ನೊಂದು ತಲೆನೋವು.
ಆದರೆ, ಈ ಸಂಚಾರಿ ಕ್ಯಾಂಟೀನ್ ಗೆ ಇದಾವುದರ ತಲೆ ನೋವಿಲ್ಲ!
ರಸ್ತೆ ಬದಿಯಲ್ಲಿ ನಿಲ್ಲುವ ಈ ಸಂಚಾರಿ ಕ್ಯಾಂಟೀನ್ ಗೆ ಬೇಕಾಗುವ ವಿದ್ಯುತ್ ಸೌರ ಶಕ್ತಿಗಳನ್ನು ಸೆಲ್ಕೋ ಸಂಸ್ಥೆ ಕಾನಸೂರು ಮಹೇಶ ಅವರಿಗೆ ನೆರವಾಗಿ ಜೊತೆಯಾಗಿದೆ. ಸೆಲ್ಕೋ ಯಶಸ್ವಿಯಾಗಿದೆ .
ಎಂಟನೂರು ವ್ಯಾಟ್ಸ ಸಾಮರ್ಥ್ಯದ ಸೌರ ಫಲಕಗಳನ್ನು ವಾಹನದ ಮೇಲೆ ಅಳವಡಿಸಲಾಗಿದ್ದು, ಒಳಭಾಗದಲ್ಲಿ ಬ್ಯಾಟರಿ ,ಇನ್ವರ್ಟರ್ ಅಳವಡಿಸಲಾಗಿದೆ. ಇದರ ಮೂಲಕ ಮಿಕ್ಸರ್ ಮತ್ತು ಲೈಟುಗಳನ್ನು ಬಳಸಬಹುದಾಗಿದೆ. ಬೇಸಿಗೆ ಕಾಲದಲ್ಲಿ ತಿಂಡಿ ತಿನಿಸುಗಳ ಜೊತೆಗೆ ಹೆಚ್ಚಾಗಿ ತಂಪು ಪಾನೀಯ ಗಳನ್ನು ಗ್ರಾಹಕರು ಕೇಳುತ್ತಾರೆ. ಅದಕ್ಕಾಗಿ ನೂರು ಲೀಟರ್ ಸಾಮರ್ಥ್ಯದ ಸೋಲಾರ್ ರೆಫ್ರಿಜಿರೇಟರ್ ನ್ನು ಕೂಡ ಸೆಲ್ಕೋ ಇಲ್ಲಿ ಅಳವಡಿಸಿದೆ.
ಸುಮಾರು ಒಂದೂವರೆ ಲಕ್ಷ ಸೋಲಾರ್ ಘಟಕಕ್ಕೆ ಮತ್ತು ಎರಡೂವರೆ ಲಕ್ಷ ವಾಹನ ಮತ್ತು ಅದರ ಮಾರ್ಪಾಡಿಗೆ ತಗುಲಿದ್ದು, ಸೆಲ್ಕೋ ಒಂದೂವರೆ ಲಕ್ಷ ಸಹಕಾರ ನೀಡಿದೆ.
ಇದನ್ನೂ ಓದಿ : ಪ್ರಕಾಶ್ ಪಡುಕೋಣೆಗೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಜೀವಮಾನ ಸಾಧನೆ ಪ್ರಶಸ್ತಿ
ಗುರುವಾರ ಸೋಲಾರ ಸಂಚಾರಿ ಕ್ಯಾಂಟೀನಗೆ ಚಾಲನೆ ನೀಡಿದ ಸೆಲ್ಕೋ ದ ಏರಿಯಾ ಮ್ಯಾನೇಜರ್ ಮಂಜುನಾಥ್ ಭಾಗವತ್, ಕೋವಿಡ್ ಸಂದರ್ಭದಲ್ಲಿ ಅನೇಕ ಜನ ಒಂದು ವೃತ್ತಿಯಿಂದ ಇನ್ನೊಂದು ಹೊಸವೃತ್ತಿಯತ್ತ ಒಲವು ತೋರುತ್ತಿದ್ದಾರೆ. ಇಂಥವರಿಗೆ ಮಾದರಿಯಾಗಬಲ್ಲ ಸೌರ ಶಕ್ತಿಯ ಮೂಲಕ ಮಾಡುವ ಹೊಸ ಹೊಸ ಆವಿಷ್ಕಾರಗಳಿಗೆ ನೆರವಿಗೆ ಸೆಲ್ಕೋ ಸಹಕಾರ ನೀಡುತ್ತಿದೆ.
ಪರಿಸರಕ್ಕೆ ಹಾನಿ ಮಾಡದೇ , ಸ್ವಾವಲಂಬಿಯಾಗಿ ವಿದ್ಯುತ್ ತಯಾರಿಸುವುದು ಸೌರ ಶಕ್ತಿಯಿಂದ ಮಾತ್ರ ಸಾಧ್ಯ. ಅದರಲ್ಲೂ ಇಂತಹ ಸಂಚಾರಿ ವಾಹನಗಳಿಗೆ ವಿದ್ಯುತ್ ಅಳವಡಿಸುವುದು ಸಾಧ್ಯವಿಲ್ಲವಾದ್ದರಿಂದ ಸಾಕಷ್ಟು ಜನ ಪೆಟ್ರೋಲ್ ಡಿಸೇಲ್ ಗಳನ್ನೇ ಅವಲಂಬಿಸಿದ್ದಾರೆ. ಇದರಿಂದ ಅವರಿಗೆ ಬರುವ ಆದಾಯದಲ್ಲಿ ಅರ್ಧದಷ್ಟು ಇಂಧನಕ್ಕೆ ಖರ್ಚಾಗುತ್ತಿದೆ ಎಂದೂ ಸಮಸ್ಯೆ ಕೂಡ ತಿಳಿಸಿದರು.
ಈ ವೇಳೆ ಸೆಲ್ಕೋ ದ ಶಾಖಾ ವ್ಯವಸ್ಥಾಪಕ ಸುಬ್ರಾಯ್ ಹೆಗಡೆ, ಮಾಲೀಕ ಮಹೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ
ಮುಂಗಾರು ಪೂರ್ವ ಬಿತ್ತನೆ ಚಟುವಟಿಕೆ ಆರಂಭ : ರೋಹಿಣಿ ಮಳೆಯ ನಿರೀಕ್ಷೆಯಲ್ಲಿ ರೈತ
ಮದುವೆಗೆ ಅಡ್ಡಿಯಾದ ಪ್ರಿಯತಮೆಯ ಮಗುವನ್ನೇ ಅನಾಥವೆಂದು ಬಿಂಬಿಸಿ ಪೊಲೀಸರಿಗೊಪ್ಪಿಸಿದ ಪ್ರಿಯಕರ!
ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ
ಸೊರಬ: ನೂತನ ಗ್ರಾಮ ಪಂಚಾಯ್ತಿ ಸ್ಥಾಪನೆಗೆ ಒತ್ತಾಯಿಸಿ ಯಲಸಿ ಗ್ರಾಮಸ್ಥರಿಂದ ಮನವಿ
MUST WATCH
ಹೊಸ ಸೇರ್ಪಡೆ
ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ
ನಾಲತವಾಡ: ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೆಗೆ ಅದ್ಧೂರಿ ಆರಂಭ
ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್
ಮಂಡ್ಯ: 5 ರೂಪಾಯಿ ವೈದ್ಯ ಡಾ.ಶಂಕರೇಗೌಡರಿಗೆ ಹೃದಯಾಘಾತ