ಚಿಮಿಣಿ ದೀಪದ ಬದಲಿಗೆ ಸೋಲಾರ್‌ ವ್ಯವಸ್ಥೆ

ಎರಡು ಕುಟುಂಬಗಳಿಗೆ ಬೆಳಕು ನೀಡಿದ ತಹಶೀಲ್ದಾರ್‌

Team Udayavani, Jun 30, 2020, 5:46 AM IST

ಚಿಮಿಣಿ ದೀಪದ ಬದಲಿಗೆ ಸೋಲಾರ್‌ ವ್ಯವಸ್ಥೆ

ಪುತ್ತೂರು: ಚಿಕ್ಕಮುಟ್ನೂರು ಗ್ರಾಮದ ಬನ್ನೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಬೀರಿಗ ಮತ್ತು ಕುಂಬ್ರೊಗದಲ್ಲಿ ಚಿಮಿಣಿ ಬೆಳಕಲ್ಲಿ ಕತ್ತಲು ಕಳೆಯುತ್ತಿದ್ದ ಎರಡು ಬಡ ಕುಟುಂಬಗಳಿಗೆ ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು ಅವರು ತನ್ನ ವೇತನದ ಒಂದಂಶವನ್ನು ಬಳಸಿ ಸೌರ ಶಕ್ತಿಯ ಮೂಲಕ ಬೆಳಕು ಹರಿಸಿದ್ದು, ಜೂ. 29ರಂದು ಅದನ್ನು ಹಸ್ತಾಂತರಿಸಿದರು.

ಜನಶಿಕ್ಷಣ ಟ್ರಸ್ಟ್‌, ತಾ| ಪತ್ರಕರ್ತರ ಸಂಘ, ಸೆಲ್ಕೊ ಸೋಲಾರ್‌ ಸಹಯೋಗದ ಯೋಜನೆಯಲ್ಲಿ ತಹಶೀ ಲ್ದಾರ್‌ ಅವರು ವಿಶೇಷ ಆಸಕ್ತಿ ವಹಿಸಿ ಸೋಲಾರ್‌ ದೀಪ ಅಳವಡಿಸಲು ಆರ್ಥಿಕ ನೆರವು ನೀಡಿದರು. ಮೂರು ತಿಂಗಳ ಹಿಂದೆ ಪುತ್ತೂರಿಗೆ ಬಂದ ಅಧಿಕಾರಿಯ ಮಾನವೀಯ ನಡೆಗೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

ಚಿಮಿಣಿ ದೀಪವೇ ಬೆಳಕಾಗಿತ್ತು
ಬೀರಿಗದ ಕಲ್ಯಾಣಿ ಅವರು ಪುತ್ರ, ಸೊಸೆ, ಇಬ್ಬರು ಪುಟ್ಟ ಮೊಮ್ಮಕ್ಕಳೊಂದಿಗೆ ಗುಡಿಸಲಿನಂಥ ಮನೆಯಲ್ಲಿ ವಾಸವಾಗಿದ್ದರು. ಇದೇ ಪರಿಸರದ ಇನ್ನೊಂದು ದಿಕ್ಕಿನ ಕುಂಬ್ರೊಗದಲ್ಲಿ ಕಮಲಾಕ್ಷಿ, ನಾರಾಯಣ ದಂಪತಿ, ಇಬ್ಬರು ಮಕ್ಕಳು ಸಿಮೆಂಟ್‌ ಶೀಟ್‌ ಹಾಸಿದ ಮನೆಯಲ್ಲಿ ದ್ದರು. ಎರಡೂ ಕುಟುಂಬಗಳು ಚಿಮಿಣಿ ದೀಪವನ್ನೇ ಬಳಸುತ್ತಿದ್ದವು. ಈಗ ಸೌರ ವ್ಯವಸ್ಥೆ ಮಾಡಲಾಗಿದ್ದು, ಎರಡು ಬಲ್ಬ್ ಮತ್ತು ಒಂದು ಫ್ಯಾನ್‌ ಬಳಸಬಹುದಾಗಿದೆ. ಇದೇ ಸಂದರ್ಭ ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಒಂದು ಮನೆಗೆ ಆರ್ಥಿಕ ನೆರವು ನೀಡಿದರು.

ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಶೀನ ಶೆಟ್ಟಿ ಅವರು, ಪ್ರತಿ ಮನೆಯಲ್ಲೂ ಬೆಳಕು ಕಾಣಬೇಕು ಎಂಬುದು ನಮ್ಮ ಉದ್ದೇಶ. ಇಂತಹ ಕಟ್ಟಕಡೆಯ ಕುಟುಂಬದಿಂದಲೇ ಸೌರಶಕ್ತಿ ಬೆಳಕು ಕಾಣಲು ಸಾಧ್ಯ. ಒಬ್ಬ ಅಧಿಕಾರಿ ಸಹಕಾರ ನೀಡಿ ಗುಡಿಸಲ ಮುಂದೆ ಬಂದು ನಿಂತಿರುವುದೇ ವಿಶೇಷ ಎಂದು ಹೇಳಿದ್ದಾರೆ.

ಅಧಿಕಾರಿ ಯಾವ ರೀತಿ ಕಾರ್ಯ ನಿರ್ವಹಿಸಬಹುದು ಎನ್ನುವುದನ್ನು ಇಂತಹ ಸಾಮಾಜಿಕ ಚಟುವಟಿಕೆಯಿಂದ ಅರಿಯಲು ಸಾಧ್ಯ ಎಂದು ತಾ.ಪಂ. ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಹೇಳಿದರು.

ಪುತ್ತೂರಿನಲ್ಲಿ ಈ ಹಿಂದೆ ತಹಶೀಲ್ದಾರ್‌ ಆಗಿದ್ದ ಕೋಚಣ್ಣ ರೈ ಇದೇ ರೀತಿ ಬಡವರಿಗೆ ನೆರವಾಗುತ್ತಿದ್ದರು. ಈಗ ಅಂಥದ್ದೇ ಕೆಲಸವನ್ನು ರಮೇಶ್‌ ಬಾಬು ಮಾಡುತ್ತಿದ್ದಾರೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್‌ ಸಂಪ್ಯ ಅವರು ಹೇಳಿದ್ದಾರೆ.

ಬನ್ನೂರು ಗ್ರಾ.ಪಂ. ಸದಸ್ಯ ರತ್ನಾಕರ ಪ್ರಭು, ಸೆಲ್ಕೋ ಸೋಲಾರ್‌ನ ರಂಜಿತ್‌, ಬನ್ನೂರು ಗ್ರಾ.ಪಂ. ಸದಸ್ಯೆ ಗಿರಿಜಾ, ಸಾಮಾಜಿಕ ಕಾರ್ಯಕರ್ತೆ ಗೀತಾ, ಸೆಲ್ಕೋ ಸೋಲಾರ್‌ನ ಸುಧಾಕರ್‌ ಉಪಸ್ಥಿತರಿದ್ದರು. ಅಂಗನನಾಡಿ ಕಾರ್ಯಕರ್ತೆ ಅರುಣಾ ವಂದಿಸಿದರು. ಜನಶಿಕ್ಷಣ ಟ್ರಸ್ಟ್‌ ಜಿಲ್ಲಾ ನಿರ್ದೇಶಕ ಕೃಷ್ಣ ಮೂಲ್ಯ ನಿರೂಪಿಸಿದರು.

 ಆತ್ಮತೃಪ್ತಿಯ ಕೆಲಸ
ಬಡವರ ಮಕ್ಕಳೂ ಬೆಳಕಿನ ದೀಪದಿಂದ ಶಿಕ್ಷಣ ಪಡೆದು ಉನ್ನತ ವ್ಯಕ್ತಿಗಳಾಗಿ ಸಮಾಜದಲ್ಲಿ ಬಾಳ್ವೆ ನಡೆಸಬೇಕು. ಹೀಗಾಗಿ ಸೌರ ಬೆಳಕು ನೀಡುವ ಯೋಜನೆಗೆ ಬೆಂಬಲ ನೀಡಿದ್ದೇನೆ.
-ರಮೇಶ್‌ ಬಾಬು,
ತಹಶೀಲ್ದಾರ್‌ ಪುತ್ತೂರು

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.