ಶೀಘ್ರವೇ ನಿಮ್ಮ ಜೊತೆ ಇರ್ತೀವಿ: ನಟ ಅನಿರುದ್ಧ
Team Udayavani, May 29, 2020, 4:21 AM IST
ಸರಿ ಸುಮಾರು ಎರಡು ತಿಂಗಳ ಕಾಲ ಲಾಕ್ಡೌನ್ ಹಿನ್ನೆಲೆಯಲ್ಲಿ ಧಾರಾವಾಹಿಗಳೆಲ್ಲವೂ ಸ್ಥಗಿತ ಗೊಂಡಿದ್ದವು. ಇದೀಗ ಚಿತ್ರೀಕರಣಗಳು ಆರಂಭ ಗೊಂಡಿವೆ. ಈ ಹಿನ್ನೆಲೆಯಲ್ಲಿ ಜನಪ್ರಿಯ ಧಾರಾವಾಹಿಗಳೆಲ್ಲವೂ ಶುರುವಾಗಿವೆ. ಈಗಾಗಲೇ ಜನಮನಸೆಳೆದಿರುವ “ಜೊತೆ ಜೊತೆಯಲಿ’ ಧಾರಾವಾಹಿ ಕೂಡ ಶುರುವಾಗಿದ್ದು, ಆ ಧಾರಾವಾಹಿಯ ಮುಖ್ಯ ಆಕರ್ಷಣೆಯಾಗಿರುವ ನಟ ಅನಿರುದ್ಧ ಅವರು ತಮ್ಮ ಟ್ವೀಟ್ ಹಾಗೂ ಮುಖಪುಟದ ಮೂಲಕ ವೀಕ್ಷಕರಿಗೆ “ಜೊತೆ ಜೊತೆಯಲಿ’ ಧಾರಾವಾಹಿಯ ಕುರಿತು ಮಾತನಾಡಿದ್ದಾರೆ. ಆ ಬಗ್ಗೆ ಹೇಳಿಕೊಂಡಿರುವ ಅವರು, ” ಎಲ್ಲರಿಗೂ ನಮಸ್ಕಾರ.
ಎರಡು ತಿಂಗಳಿಗೂ ಹೆಚ್ಚು ಕಾಲ “ಜೊತೆ ಜೊತೆಯಲಿ’ ಧಾರಾವಾಹಿ ಸೇರಿದಂತೆ ಯಾವ ಧಾರಾವಾಹಿಗಳು ಪ್ರಸಾರಗೊಂಡಿರಲಿಲ್ಲ. ಈಗ ಲಾಕ್ ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಈಗ ಚಿತ್ರೀಕರಣ ಶುರುವಾಗಿದೆ. ನಿರ್ಮಾಪಕರು, ವಾಹಿನಿಯ ಮುಖ್ಯಸ್ಥರು ಎಲ್ಲರೂ ಕೂಡ ಮುನ್ನೆಚ್ಚರಿಕೆ ವಹಿಸಿ, ಸ್ಯಾನಿಟೈಸರ್ ವ್ಯವಸ್ಥೆ ಸೇರಿದಂತೆ ಎಲ್ಲಾ ಮುಂಜಾಗ್ರತೆ ಕ್ರಮ ವಹಿಸಿಕೊಂಡು ಚಿತ್ರೀಕರಣಕ್ಕೆ ಮುಂದಾಗಲು ಕಾರಣರಾಗಿದ್ದಾರೆ.
ಇನ್ನು ಮುಂದೆ ನಮ್ಮ “ಜೊತೆ ಜೊತೆಯಲಿ’ ಧಾರಾವಾಹಿಯ ಹೊಸ ಸಂಚಿಕೆಗಳು ಶುರುವಾಗಲಿವೆ. ಇಷ್ಟು ದಿನಗಳ ಕಾಲ ನೀವು ತೋರಿದ ಪ್ರೀತಿ, ವಿಶ್ವಾಸವನ್ನು ಇನ್ನು ಮುಂದೆಯೂ ಕೊಡಬೇಕು ಎಂದು ಅನಿರುದ್ಧ ಮನವಿ ಮಾಡಿದ್ದಲ್ಲದೆ, ಇಡೀ ಚಿತ್ರೀಕರಣದಲ್ಲಿ ಆಗಿರುವಂತಹ ನೀಟ್ ವ್ಯವಸ್ಥೆಯನ್ನು ಹೊಗಳಿದ್ದಾರೆ.
ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ಕಾರ್ಮಿಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಿರ್ಮಾಪಕರು ಸ್ಯಾನಿಟೈಸ್ ಮಾಡಿಸಿ, ಪ್ರತಿ ಉಪಕರಣಕ್ಕೂ, ಚಿತ್ರೀಕರಿಸುವ ಜಾಗಕ್ಕೆ ಸ್ಯಾನಿಟೈಸರ್ ಹಾಕಿಸುವ ಮೂಲಕ ಎಚ್ಚರಿಕೆ ವಹಿಸಿದ್ದಾರೆ. ಇಷ್ಟು ದಿನಗಳ ಕಾಲ ಯಾವ ಮಟ್ಟದಲ್ಲಿ ಖುಷಿಪಡಿಸಿತ್ತೋ ಅಷ್ಟೇ ಖುಷಿ ಇನ್ನು ಮುಂದೆಯೂ ವೀಕ್ಷಕರಿಗೆ ಸಿಗಲಿದೆ. ಎಲ್ಲರೂ ಮಿಸ್ ಮಾಡದೆ “ಜೊತೆ ಜೊತೆಯಲಿ’ ಧಾರಾವಾಹಿ ನೋಡಿ. ಈಗಷ್ಟೇ ಚಿತ್ರೀಕರಣ ಶುರುವಾಗಿದೆ. ಜೂನ್ನಲ್ಲಿ ಕಂತುಗಳು ಪ್ರಸಾರಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ