ಅತಿಯಾದ ಲೈಂಗಿಕ ಗೀಳು: ಸ್ತ್ರೀ ಹಾರ್ಮೋನ್ ಚುಚ್ಚಿಸಿಕೊಂಡ ಸ್ಪೇನ್‌ನ ಮಾಜಿ ರಾಜ !


Team Udayavani, Oct 24, 2021, 5:03 PM IST

1-2-aa’

ದುಬೈ : ಸ್ಪೇನ್‌ನ ಮಾಜಿ ರಾಜ ಜುವಾನ್ ಕಾರ್ಲೋಸ್‌ ಅತೀವವಾದ ಲೈಂಗಿಕ ಗೀಳನ್ನು ಕಡಿಮೆ ಮಾಡಿಕೊಳ್ಳಲು ಸ್ತ್ರೀ ಹಾರ್ಮೋನುಗಳನ್ನು ಚುಚ್ಚಿಸಿಕೊಂಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

”ಸ್ಪೇನ್‌ನ ರಹಸ್ಯ ಸೇವೆಯಿಂದ ಜುವಾನ್ ಕಾರ್ಲೋಸ್‌ ತನ್ನ ಅತಿರೇಕದ ಲೈಂಗಿಕ ಗೀಳನ್ನು ನಿಯಂತ್ರಿಸಲು ಸ್ತ್ರೀ ಹಾರ್ಮೋನುಗಳ ಚುಚ್ಚುಮದ್ದನ್ನು ಹಾಕಿಸಿಕೊಂಡಿದ್ದಾರೆ ” ಎಂದು ಮಾಜಿ ಪೊಲೀಸ್ ಮುಖ್ಯಸ್ಥರೊಬ್ಬರು ಸಂವೇದನಾಶೀಲವಾಗಿ ಹೇಳಿಕೊಂಡಿದ್ದಾರೆ.

ಬ್ಲ್ಯಾಕ್ ಮೇಲ್ ಆರೋಪದ ಮೇಲೆ ಪ್ರಸ್ತುತ ವಿಚಾರಣೆಯಲ್ಲಿರುವ ಮಾಜಿ ಪೊಲೀಸ್ ಆಯುಕ್ತರಾಗಿರುವ ಜೋಸ್ ಮ್ಯಾನುಯೆಲ್ ವಿಲ್ಲಾರೆಜೊ, ಬುಧವಾರ ನಡೆದ ಸಂಸತ್ತಿನ ವಿಚಾರಣೆಯಲ್ಲಿ ”83 ವರ್ಷದ ಗಡಿಪಾರಾಗಿರುವ ರಾಜ, ಕಾಮಾಸಕ್ತಿ ಕಡಿಮೆ ಮಾಡಲು ಸ್ತ್ರೀ ಹಾರ್ಮೋನುಗಳು ಮತ್ತು ಟೆಸ್ಟೋಸ್ಟೆರಾನ್ ಪ್ರತಿರೋಧಕಗಳನ್ನು ಚುಚ್ಚಿಸಿಕೊಂಡಿದ್ದರು” ಎಂದು ಹೇಳಿದ್ದಾರೆ.

ಕಾರ್ಲೋಸ್‌ ರ ವಿಪರೀತ ಚಟದ ಕಾರಣಗಳನ್ನು ನೀಡುತ್ತಾ, ಲೈಂಗಿಕ ಗೀಳು “ದೇಶಕ್ಕೆ ಸಮಸ್ಯೆ” ಎಂದು ಪರಿಗಣಿಸಲಾಗಿತ್ತು, ಏಕೆಂದರೆ ಅವರು “ಉತ್ಕಟ ಭಾವೋದ್ರಿಕ್ತ ವ್ಯಕ್ತಿ” ಎಂದು ವಿಲ್ಲಾರೆಜೊ ಅವರು ಹೇಳಿರುವುದಾಗಿ ಸ್ಪ್ಯಾನಿಷ್ ಮಾಧ್ಯಮವೊಂದು ವರದಿ ಮಾಡಿದೆ.

ವಿಚಾರಣೆಯ ಸಮಯದಲ್ಲಿ, ”ಜುವಾನ್ ಕಾರ್ಲೋಸ್ ಹಾನಿಕರವಲ್ಲದ ಗಡ್ಡೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಮಾಡಿದ ಸ್ಕ್ಯಾನ್‌ಗಳಿಗೆ ಸಂಬಂಧಿಸಿದ ವೈದ್ಯಕೀಯ ವರದಿಗಳನ್ನು ಮರುಪಡೆಯಲು ತನಗೆ ಹೇಳಲಾಗಿತ್ತು” ಎಂದು ಮಾಜಿ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ಸ್ಪ್ಯಾನಿಷ್ ಲೇಖಕ ಮತ್ತು ಮಿಲಿಟರಿ ಇತಿಹಾಸಕಾರ ಅಮಾಡಿಯೋ ಮಾರ್ಟಿನೆಜ್ ಇಂಗಲ್ಸ್ ಅವರು ‘ಜುವಾನ್ ಕಾರ್ಲೋಸ್: ದಿ ಕಿಂಗ್ ಆಫ್ 5,000 ಲವರ್ಸ್’ ಎಂಬ ಪುಸ್ತಕವನ್ನು ಬರೆದಿದ್ದರು,ಲೈಂಗಿಕ ಇತಿಹಾಸದ ಪುರಾವೆಗಳನ್ನು ವಿವರಿಸಿ ರಾಜನನ್ನು “ಪ್ರಚಲಿತ ಲೈಂಗಿಕ ವ್ಯಸನಿ” ಎಂದು ಕರೆದಿದ್ದರು.

ಕಾರ್ಲೋಸ್ ಅವರು ಪತ್ನಿ ರಾಣಿ ಸೋಫಿಯಾ ಮಾತ್ರವಲ್ಲದೆ, ಡ್ಯಾನಿಶ್-ಜರ್ಮನ್ ನ ಉದಾರ ದಾನಿಯಾಗಿದ್ದ ಕೊರಿನ್ನಾ ಲಾರ್ಸೆನ್, ಸ್ಪ್ಯಾನಿಷ್ ಗಾಯಕಿ ಸಾರಾ ಮೊಂಟಿಯೆಲ್, ಬೆಲ್ಜಿಯನ್ ಗವರ್ನೆಸ್ ಲಿಲಿಯನ್ ಸರ್ಟಿಯು ಮತ್ತು ಇಟಾಲಿಯನ್ ರಾಜಕುಮಾರಿ ಮಾರಿಯಾ ಗೇಬ್ರಿಯೆಲಾ ಡಿ ಸಬೋಯಾ ಸೇರಿದಂತೆ 5,000 ಕ್ಕೂ ಹೆಚ್ಚು ಮಹಿಳೆಯರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಊಹಿಸಲಾಗಿದೆ.

ವಿಲ್ಲಾರೆಜೊ ಅವರ ವಿಚಾರಣೆ ವೇಳೆ ಅವರು ಗಣ್ಯರೊಂದಿಗೆ ರಹಸ್ಯವಾಗಿ ರೆಕಾರ್ಡ್ ಮಾಡಿದ ಸಂಭಾಷಣೆಗಳನ್ನು ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದ ಅಥವಾ ಇತರ ಪ್ರಬಲ ಕ್ಲೈಂಟ್‌ಗಳ ಪರವಾಗಿ ಕಾರ್ಲೋಸ್‌ ರ ಖ್ಯಾತಿಯನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

‘ಜುವಾನ್ ಕಾರ್ಲೋಸ್‌ ರ ಕುಖ್ಯಾತ ಲೈಂಗಿಕ ಗೀಳನ್ನು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿ ನಾನು ಭಾಗಿಯಾಗಿಲ್ಲ ಎಂದು ಹೇಳಿದರು ಮತ್ತು ಈಗ ಲಂಡನ್‌ನಲ್ಲಿ ವಾಸಿಸುತ್ತಿರುವ ಮಾಜಿ ರಾಜನ ಮಾಜಿ ಪ್ರೇಮಿ ಕೊರಿನ್ನಾ ಲಾರ್ಸೆನ್‌ನಿಂದ ಅದರ ಬಗ್ಗೆ ತಿಳಿದುಕೊಂದಿರುವುದಾಗಿ ಹೇಳಿದರು.

ಮಾಜಿ ರಾಜ ಕಾರ್ಲೋಸ್‌ 1975 ರಿಂದ 2014 ರವರೆಗೆ ಆಳ್ವಿಕೆ ನಡೆಸಿದ್ದರು. ತನ್ನ ಮಗನಿಗಾಗಿ ತನ್ನ ಸಿಂಹಾಸನವನ್ನು ತ್ಯಜಿಸಿದ ನಂತರ ಬಹು-ಮಿಲಿಯನ್ ಡಾಲರ್ ಭ್ರಷ್ಟಾಚಾರ ಹಗರಣದ ಆರೋಪ ಕೇಳಿ ಬಂದ ಬಳಿಕ ಕಳೆದ ವರ್ಷ ಅಬುಧಾಬಿಗೆ ಸ್ಪೇನ್ ನಿಂದ ಪಲಾಯನ ಮಾಡಿದ್ದರು.

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.