ಕುಂದಗೋಳದಲ್ಲಿ ವಿಶಿಷ್ಟ ಕಾರಹುಣ್ಣಿಮೆ

­ಬ್ರಹ್ಮದೇವರ ಅಗ್ರಪೂಜೆಯೊಂದಿಗೆ ಆಚರಣೆ ­ರಾಜ್ಯ-ವಿವಿಧ ರಾಜ್ಯಗಳಿಂದ ಜನರ ಆಗಮನ

Team Udayavani, Jun 14, 2022, 12:59 PM IST

8-2

ಕುಂದಗೋಳ: ರೈತರ ವಿಶಿಷ್ಟ ಹಬ್ಬ ಕಾರಹುಣ್ಣಿಮೆ ಉತ್ತರ ಕರ್ನಾಟಕದಲ್ಲಿ ವಿಶಿಷ್ಟ ಹಬ್ಬವೆನಿಸಿದೆ. ಅದರಲ್ಲೂ ಕುಂದಗೋಳದಲ್ಲಿ ನಡೆಯುವ ಕಾರಹುಣ್ಣಿಮೆಯನ್ನು ಶ್ರೀ ಬ್ರಹ್ಮದೇವರ ಅಗ್ರಪೂಜೆಯೊಂದಿಗೆ ವಿಶಿಷ್ಟ ಸಂಪ್ರದಾಯದಂತೆ ಆಚರಿಸಲಾಗುತ್ತದೆ.

ಹಿರಿಯರು ಹೇಳುವಂತೆ ಈಗ ಬ್ರಹ್ಮದೇವರ ಗುಡಿ ಇರುವ ಸ್ಥಳದ ಸುತ್ತಲೂ ದಟ್ಟವಾದ ಅರಣ್ಯವಿತ್ತು. ಅಲ್ಲಿ ವಾಸವಾಗಿದ್ದ ರಾಕ್ಷಸನೊಬ್ಬ ಇಲ್ಲಿಯ ಜನರಿಗೆ ಮೇಲಿಂದ ಮೇಲೆ ತೊಂದರೆ ಕೊಡುತ್ತಿದ್ದ. ಅವನ ಉಪಟಳ ತಾಳಲಾರದೆ ಸಂವಾರಕ್ಕಾಗಿ ಗ್ರಾಮಸ್ಥರು ಪಣ ತೊಟ್ಟು, ಗ್ರಾಮದ 14 ಜನ ವೀರ ಯುವಕರು ಎರಡು ಬಂಡಿಗಳಲ್ಲಿ ಬ್ರಹ್ಮದೇವರ ಗುಡಿಗೆ ಬಂದು ಪ್ರಾರ್ಥಿಸಿ ದೈವಿಶಕ್ತಿ ಪಡೆದು ರಾಕ್ಷಸ ಸಂಹರಿಸಿದರು. ಅಂದಿನಿಂದ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಆರಂಭಿಸಲಾಗಿದೆ ಎಂಬ ಪ್ರತೀತಿಯಿದೆ. ಇಲ್ಲಿಯ ಕಾರಹುಣ್ಣಿಮೆ ಹಬ್ಬ ನೋಡಲು ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರ ರಾಜ್ಯದಿಂದಲೂ ಜನರು ಆಗಮಿಸುತ್ತಾರೆ.

ಕುಂದಗೋಳದ ಕಾರಹುಣ್ಣಿಮೆ ಕರಿಬಂಡಿ ಉತ್ಸವದಲ್ಲಿ ಎರಡು ಕರಿಬಂಡಿಗಳು ಭಾಗವಹಿಸುತ್ತವೆ ಒಂದು ಬಂಡಿಯನ್ನು ಗೌಡರ ಬಂಡಿ, ಇನ್ನೊಂದು ಶ್ಯಾನಭೋಗರ ಬಂಡಿ ಎಂದೂ ಗುರುತಿಸುತ್ತಾರೆ. ಈಗಲೂ ಒಂದು ಬಂಡಿ ಅಲ್ಲಾಪೂರ ಮನೆತನದವರದು, ಮತ್ತೂಂದನ್ನು ಬಿಳೆಬಾಳ ಮನೆತನದ ವರದು. ಶ್ರೀ ಬ್ರಹ್ಮಲಿಂಗ ದೇವರಿಗೆ ವಿಶೇಷ ಹೋಮ-ಹವನ, ಪೂಜೆಗಳೊಂದಿಗೆ ಬಂಡಿ ಉತ್ಸವ ಜರುಗುತ್ತದೆ.

ಎರಡು ಬಂಡಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಬ್ರಹ್ಮದೇವರ ನಾಮಸ್ಮರಣೆ ಮಾಡುತ್ತ ಮಡಿ ಉಟ್ಟು ತಲೆಗೆ ವಿಶಿಷ್ಟವಾದ ಪೇಟಾ ತೊಟ್ಟು ಕೈಯಲ್ಲಿ ಬಿಚ್ಚುಗತ್ತಿ ಹಿಡಿದು ಝಳಪಿಸುತ್ತಾ “ಜಯಬ್ಯಹ್ಮ ಲಿಂಗೊಂ, ಲಕ್ಷ್ಮೀನರಸಿಂಹೊಂ’ ಎಂದು ಘೋಷಣೆಗಳೊಂದಿಗೆ ವೀರಗಾರರು ಬಂಡಿ ಹತ್ತಿ ಬ್ರಹ್ಮದೇವರ ದೇವಸ್ಥಾನಕ್ಕೆ ಬರುವುದನ್ನು ನೊಡಲು ಸಾವಿರಾರು ಜನರು ಕಾತುರದಿಂದ ಕಾಯುತ್ತ ಘೋಷಣೆ ಕೂಗುತ್ತಾರೆ.

ನಂತರ ರಾತ್ರಿ ಕರೋಗಲ್‌ ಮನೆಯಿಂದ ವೀರಗಾರರು ಪಂಜಿನ ಬೆಳಕಲ್ಲಿ ಶ್ರೀ ಬ್ರಹ್ಮದೇವರ ಗುಡಿಗೆ ನಡೆದುಕೊಂಡು ಆಗಮಿಸುವಾಗ ರಸ್ತೆಯುದ್ದಕ್ಕೂ ಭಕ್ತಾಧಿಗಳು ಭಕ್ತಿ ಭಾವದಿಂದ ದೀಡ ನಮಸ್ಕಾರ ಮಾಡುತ್ತ ಬ್ರಹ್ಮದೇವರ ಗುಡಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ವೀರಗಾರರು ಹೊರಗೆ ಬಂದ ನಂತರ ಜನರು ಅವರಿಗೆ ಸಕ್ಕರಿ ಹಂಚಿ ಭಕ್ತಿಭಾವದಿಂದ ನಮಿಸುತ್ತಾರೆ.

ಕುಂದಗೋಳ ಪಟ್ಟಣ ಐತಿಹಾಸಿಕವಾಗಿದ್ದು, ಸಂಗೀತ, ಕಲೆ, ಸೇರಿದಂತೆ ಕಾರಹುಣ್ಣಿಮೆ ಬಂಡಿ ಉತ್ಸವವು ಪ್ರಖ್ಯಾತಿ ಹೊಂದಿದೆ. ಇಲ್ಲಿಗೆ ಬರುವ ಜನರಿಗೆ ಉಳಿಯಲು ಸ್ಥಳ ಹಾಗೂ ಮೂಲಸೌಕರ್ಯ ಕೊರತೆಯಿಂದ ಕುಂದಗೋಳ ಹಿಂದೆ ಉಳಿಯುವಂತಾಗಿದೆ. ಈ ಭಾಗದ ಶಾಸಕರು, ಸಂಸದರು, ಜನಪ್ರತಿನಿ ಧಿಗಳು ಇಲ್ಲಿ ಯಾತ್ರಿನಿವಾಸ ನಿರ್ಮಿಸಿ, ಮೂಲಸೌಕರ್ಯ ಒದಗಿಸಿ ಪ್ರವಾಸಿ ತಾಣವಾಗಿ ಮಾಡಬೇಕು.  –ಸೋಮರಾವ್‌ ದೇಸಾಯಿ ಅಧ್ಯಕ್ಷ, ರೈತಸಂಘ ಶೀತಲ ಮುರಗಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.