“ಕುಮಾರನ ಅವತಾರ’ದಲ್ಲಿ ಶ್ರೀನಗರ ಕಿಟ್ಟಿ!
Team Udayavani, Jul 8, 2020, 9:22 AM IST
ನಿರ್ದೇಶಕ ಸಿಂಪಲ್ ಸುನಿ ಸದ್ಯ ಸ್ಯಾಂಡಲ್ವುಡ್ನಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸುತ್ತಿದ್ದು, ಶರಣ್ಗೆ “ಅವತಾರ್ ಪುರುಷ’ ಚಿತ್ರ ಮಾಡುತ್ತಿರೋದು ಗೊತ್ತೇ ಇದೆ. ಅಲ್ಲದೇ ಲಾಕ್ಡೌನ್ ಎಫೆಕ್ಟ್ನಿಂದ ಚಿತ್ರದ ಹಾಡು ಮತ್ತು ಫೈಟ್ಸ್ ಬಾಕಿ ಇದ್ದು, ತುಂಬಾ ಗ್ಯಾಪ್ನ ನಂತರ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಗೆಸ್ಟ್ ಅಪಿಯರೆನ್ಸ್ ಆಗಿ ಅಭಿನಯಿಸಿರುವುದು ಕೂಡಾ ಹಳೆಯ ವಿಚಾರ.
ಈ ನಡುವೆ ಚಿತ್ರದ ನಿರ್ದೇಶಕ ಸುನಿ ಚಿತ್ರದಲ್ಲಿ ಕುಮಾರನ ಅವತಾರದಲ್ಲಿ ನಟಿಸುತ್ತಿರುವ ಶ್ರೀನಗರ ಕಿಟ್ಟಿ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಹೌದು! ಇಂದು ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ಪ್ರಯುಕ್ತ, “ಫ್ಯಾನ್ಸ್ ಗಳೆಲ್ಲರನ್ನೂ ಸ್ನೇಹಿತರನ್ನಾಗಿ ಕಾಣುವ ಹೃದಯವಂತಿಕೆ ನಟ.. ಸ್ನೇಹಜೀವಿ “ಇಂತಿ ನಮ್ಮೆಲ್ಲರ ಪ್ರೀತಿಯ” ಶ್ರೀನಗರ ಕಿಟ್ಟಿರವರಿಗೆ ಹುಟ್ಟುಹಬ್ಬದ ಶುಭಾಶಯಗಳು .. ‘ ಎಂದು ಸುನಿ ಚಿತ್ರದ ಪೋಸ್ಟರ್ವೊಂದನ್ನು ಹಂಚಿಕೊಂಡಿದ್ದು, ಶುಭಾಶಯವನ್ನು ಕೋರಿದ್ದಾರೆ.
ಫ್ಯಾನ್ಸ್ ಗಳೆಲ್ಲರನ್ನೂ ಸ್ನೇಹಿತರನ್ನಾಗಿ ಕಾಣುವ ಹೃದಯವಂತಿಕೆ ನಟ..ಸ್ನೇಹಜೀವಿ “ಇಂತಿ ನಮ್ಮೆಲ್ಲರ ಪ್ರೀತಿಯ” ಶ್ರೀನಗರ ಕಿಟ್ಟಿ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ..#ಅವತಾರಪುರುಷ #ಮಾಂತ್ರಿಕ pic.twitter.com/mZwLSC6prK
— ಸುನಿ/SuNi (@SimpleSuni) July 7, 2020
ಇನ್ನು ಶ್ರೀನಗರ ಕಿಟ್ಟಿ ಇಡೀ ಚಿತ್ರಕ್ಕೆ ಟ್ವಿಸ್ಟ್ ಕೊಡುವ ಪ್ರಮುಖ ಪಾತ್ರ ಮಾಡುತ್ತಿದ್ದು, ಬ್ಲ್ಯಾಕ್ ಮ್ಯಾಜಿಷಿಯನ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ನೈಜ ಘಟನೆಗಳನ್ನು ಬೆರೆಸಿ ಅವರ ಪಾತ್ರವನ್ನು ಸೃಷ್ಟಿಸಲಾಗಿದ್ದು, ಪುಷ್ಕರ್ ಫಿಲಂಸ್ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ “ವೀರಂ’ ಚಿತ್ರದಲ್ಲಿಯೂ ಕಿಟ್ಟಿ ಅವರು ಹಿಂದೆಂದೂ ಕಾಣದಂತ ರಾ ಪಾತ್ರ ಮಾಡುತ್ತಿದ್ದು, ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್