ಜೀವಜಲಕ್ಕೆ ಹೆಬ್ಬಾರರ ಕೊಡುಗೆ :ಅತ್ತ ಕೆರೆಗಳ ಅಭಿವೃದ್ದಿ,ಇತ್ತ ಕಳ್ಳರ ಪತ್ತೆಗೂ ಹೈಟೆಕ್ CCTV
Team Udayavani, Jan 10, 2022, 6:55 PM IST
ಶಿರಸಿ : ಜೀವ ಜಲದ ಸಂರಕ್ಷಣೆ, ಗೋವಿನ ಮೇಲೆ ಪ್ರೇಮ ಇಟ್ಟು ಕೆಲಸ ಮಾಡುತ್ತಿರುವ ಶಿರಸಿ ಜೀವ ಜಲಕಾರ್ಯಪಡೆ ಈಗ ಇನ್ನೊಂದು ವಿಶಿಷ್ಟ ಕಾಯಕಕ್ಕೆ ಮುಂದಾಗಿದೆ. ನಗರದ ಆರ್ ಟಿಓ ಕಚೇರಿ ಸಮೀಪ ಇರುವ ಪ್ರಾಚೀನ ಕೆರೆಗಳಲ್ಲಿ ಒಂದಾದ ಬಶೆಟ್ಟಿ ಕೆರೆ ಅಭಿವೃದ್ದಿ ಹಾಗೂ ನಗರದ ಚಿಪಗಿ ಬಳಿ ಅಳವಡಿಸಲಾದ ಅತ್ಯಾಧುನಿಕ ಸಿಸಿಟಿವಿ.. ಇದರ ಅಳವಡಿಕೆಯಿಂದ ಚೋರರಿಗೂ ಬಿಸಿತುಪ್ಪವಾಗಿ ಪರಿಣಮಿಸಿದೆ.
ಬಶೆಟ್ಟಿಕೆರೆಯ ದಂಡೆಯ ಸ್ವಚ್ಛವನ್ನು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರು ಮಾಡಿಸುತ್ತಿದ್ದು, ನೀರು ಕಡಿಮೆ ಆದ ಬಳಿಕ ಅದರ ಹೂಳೆತ್ತಲೂ ಚಿಂತಿಸಿದ್ದಾರೆ.
ಇತ್ತ ಜಿಲ್ಲೆಯಲ್ಲಿಯೇ ಮೊದಲ ಬಾರಿ ಹೆಬ್ಬಾರ್ ಅವರ ಕೊಡುಗೆಯಿಂದ ಪೊಲೀಸ್ ಇಲಾಖೆಯಿಂದ ಹೊಸ ಪ್ರಯೋಗ ಅಕೋಮೆಟಿಕ್ ನಂಬರ್ ಪ್ಲೇಟ್ ರೆಕಾರ್ಡಿಂಗ್ ಕ್ಯಾಮರಾ ಅಳವಡಿಸಿದೆ. ನಗರದ ಚಿಪಗಿ ನಾಕಾ ಬಳಿ ಎರಡುವರೆ ಲಕ್ಷ ರೂ. ಮೌಲ್ಯದ ಅಕೋಮೆಟಿಕ್ ನಂಬರ್ ಪ್ಲೇಟ್ ರೆಕಾರ್ಡಿಂಗ್ ಕ್ಯಾಮರಾವನ್ನು ಅಳವಡಿಕೆ ಮಾಡಲಾಗಿದೆ.
ಕ್ಯಾಮರಾದ ವಿಶೇಷತೆಗಳು
ಈ ಕ್ಯಾಮರಾವು ಯಾವುದೇ ವಾಹನ ಸುಮಾರು 80 ಕಿ.ಮಿ ವೇಗದಲ್ಲಿ ಹೋದರೂ ಸಹ ಸ್ವಯಂ ಚಾಲಿತವಾಗಿ ನಂಬರ್ ಪ್ಲೇಟ್ ಗುರುತಿಸುವಿಕೆಯನ್ನು ಮಾಡಿ, ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತದೆ. ವಾಹನ ಚಾಲಕನ ಛಾಯಾಚಿತ್ರ ಸಹ ಸಂಗ್ರಹಿಸುವ ವಿಶಿಷ್ಟ ಚಾಕಚಕ್ಯತೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ
ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?
ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ
ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ
ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ನವರೇ ಭಾರತ್ ಛೋಡೋ..; ಬಿಜೆಪಿ ಟೀಕೆ