ಮತ್ತೆ ಸೀಲ್ಡೌನ್ನತ್ತ ರಾಜ್ಯ? ಜನರಿಂದಲೇ ಸ್ವಯಂಪ್ರೇರಿತ ನಿರ್ಬಂಧ
Team Udayavani, Jun 22, 2020, 6:40 AM IST
ಬೆಂಗಳೂರು: ನಿತ್ಯ ಬೆಳಕಿಗೆ ಬರುತ್ತಿರುವ ಸೋಂಕು ಮತ್ತು ಸೋಂಕು ಪೀಡಿತರ ಸಾವು ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಇದರಿಂದ ರಾಜ್ಯವು ಮತ್ತೆ “ಅನಧಿಕೃತ ಸೀಲ್ಡೌನ್’ ನತ್ತ ಮುಖ ಮಾಡುತ್ತಿದೆ!
ಕೋವಿಡ್-19 ಹೆಚ್ಚು ದಾಖಲಾಗುತ್ತಿ ರುವ ಪ್ರದೇಶಗಳಲ್ಲಿ ಜನರೇ ಸ್ವಯಂ ಪ್ರೇರಿತವಾಗಿ ಸೀಲ್ಡೌನ್ ಮಾಡುತ್ತಿ ದ್ದಾರೆ. ಮನೆಗಳಿಂದ ಹೊರಬೀಳುವು ದನ್ನು ಕಡಿಮೆ ಮಾಡುತ್ತಿದ್ದಾರೆ. ಹೊರಗಿನವರು ಬಾರದಂತೆ ಕಾವಲು ಕಾಯುತ್ತಿದ್ದಾರೆ. ಬೆಂಗಳೂರು, ಕನಕ ಪುರ ಸೇರಿದಂತೆ ಹಲವು ಕಡೆಗಳಲ್ಲಿ ಇಂಥ ಬೆಳವಣಿಗೆ ಕಂಡುಬರುತ್ತಿದೆ.
ಇದುವರೆಗೆ ಜನ ಸುದೀರ್ಘ ಲಾಕ್ಡೌನ್ ಕಂಡಿದ್ದರು. ಅದು ತೆರವಾದ ಬೆನ್ನಲ್ಲೇ ದಾಖಲಾಗುತ್ತಿರುವ ಸೋಂಕು ಮತ್ತು ಸಾವಿನ ಪ್ರಕರಣಗಳ ಭಾರೀ ಹೆಚ್ಚಳ ಬೆಚ್ಚಿಬೀಳಿಸುತ್ತಿದೆ. ಲಾಕ್ಡೌನ್ ಅವಧಿಯಲ್ಲೇ ವಾತಾವರಣ ಉತ್ತಮ ವಾಗಿತ್ತು ಎಂಬ ಅಭಿಪ್ರಾಯ ಸಾರ್ವ ಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಒಂದು ವೇಳೆ ಸೋಂಕಿನ ಸರಣಿ ಇದೇ ವೇಗದಲ್ಲಿ ಸಾಗಿದರೆ ರಾಜ್ಯ ಮತ್ತೆ ಸೀಲ್ಡೌನ್ನತ್ತ ಮುಖ ಮಾಡಿದರೂ ಅಚ್ಚರಿ ಇಲ್ಲ.
9 ಸಾವಿರ ದಾಟಿದ ಸೋಂಕುಪೀಡಿತರು
ರಾಜ್ಯದಲ್ಲಿ ಕೋವಿಡ್-19 ಸೋಂಕುಪೀಡಿತರ ಸಂಖ್ಯೆ 9 ಸಾವಿರ ದಾಟಿದೆ. ರವಿವಾರ ಮತ್ತೆ 453 ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಸದ್ಯ 3,391 ಸಕ್ರಿಯ ಪ್ರಕರಣಗಳಿದ್ದು, 5,618 ಮಂದಿ ಗುಣಮುಖರಾಗಿದ್ದಾರೆ. ಅತ್ಯಂತ ಆಘಾತಕಾರಿ ಅಂಶವೆಂದರೆ, ರಾಜಧಾನಿ ಬೆಂಗಳೂರಿನಲ್ಲೇ ರವಿವಾರವೇ 196 ಪ್ರಕರಣಗಳು ಕಾಣಿಸಿಕೊಂಡಿವೆ.
ನಿತ್ಯ 300 ಪ್ರಕರಣ; 4 ಸಾವು!
ದೇಶಾದ್ಯಂತ ಜೂನ್ 8ರಿಂದ ಲಾಕ್ಡೌನ್ ತೆರವಾದರೆ ರಾಜ್ಯವು ಮೇ 18ರಿಂದಲೇ ನಿರ್ಬಂಧಗಳಿಂದ ತೆರವಾಗಿದೆ. ಆ ಬಳಿಕ ಸೋಂಕುಪೀಡಿತರ ಸಂಖ್ಯೆ ಕೈಮೀರುತ್ತಿದೆ. ರವಿವಾರ 453 ಪ್ರಕರಣಗಳು ದೃಢಪಟ್ಟಿದ್ದು, ಜೂ.1ರಿಂದ ಇದುವರೆಗೆ ಅಂದರೆ ಕೇವಲ 20 ದಿನಗಳ ಅಂತರದಲ್ಲಿ ರಾಜ್ಯದಲ್ಲಿ ಪ್ರತೀ ದಿನ ಸರಾಸರಿ 300 ಪ್ರಕರಣಗಳು ದಾಖಲಾಗಿದ್ದು, ನಿತ್ಯ 4ರಿಂದ 5 ಜನರು ಸಾವನ್ನಪ್ಪಿದ್ದಾರೆ.
15 ಸಾವಿರ ಹೆಚ್ಚಳ
ಹೊಸದಿಲ್ಲಿ: ದೇಶದ ಮಟ್ಟದಲ್ಲಿ ಶನಿವಾರ ಬೆಳಗ್ಗೆಯಿಂದ ರವಿವಾರ ಬೆಳಗ್ಗೆ 8 ಗಂಟೆಯ ವರೆಗೆ ಸೋಂಕುಪೀಡಿತರ ಸಂಖ್ಯೆ 15 ಸಾವಿರ ದಷ್ಟು ಹೆಚ್ಚಳವಾಗಿದೆ. ಇತ್ತೀಚೆಗೆ ದಿನವೂ 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ತೀರಾ ಆತಂಕ ಉಂಟು ಮಾಡಿದೆ.
ಈ ಮೊದಲು ಸೋಂಕುಪೀಡಿತ ಪ್ರಕರಣಗಳಲ್ಲಿ ಶೇ. 90ರಷ್ಟು ಹೊರಗಿನಿಂದ ಬಂದವರೇ ಆಗಿದ್ದರು. ಆದರೆ ಕಳೆದ ಒಂದು ವಾರದಿಂದ ಈ ವಲಸಿಗರಲ್ಲಿ ಸೋಂಕಿನ ಪ್ರಮಾಣ ಶೇ. 25ರಿಂದ 30ಕ್ಕೆ ಇಳಿಕೆಯಾಗಿದ್ದು, ಸ್ಥಳೀಯರಲ್ಲಿ ಸೋಂಕು ವ್ಯಾಪಿಸಿದೆ. ಜತೆಗೆ ಸೋಂಕುಪೀಡಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ