ಮನಿ Money ಕಥೆ
Team Udayavani, Jul 6, 2020, 4:53 AM IST
ಊರಿನಲ್ಲಿರುವ ಹೆತ್ತವರು ಆರ್ಥಿಕವಾಗಿ ಸಬಲರಾಗಿರಬೇಕು ಎನ್ನುವ ಆಶಯ ಎಲ್ಲಾ ಮಕ್ಕಳದೂ ಆಗಿರುತ್ತದೆ. ಅದಕ್ಕಾಗಿ ಏನೇನು ಮಾಡಬಹುದು?
ನಮ್ಮಲ್ಲನೇಕರು ಲಾಕ್ಡೌನ್ ಘೋಷಣೆಯಾದ ನಂತರ ಕೆಲಸ ಮಾಡುತ್ತಿದ್ದ ಊರನ್ನು ತೊರೆದು ಸ್ವಂತ ಊರಿಗೆ ತೆರಳಿದ್ದರು. ಊರಿಗೆ ತೆರಳದೆ ತಾವಿದ್ದಲ್ಲಿಯೇ ಉಳಿದವರು ಹಲವರು. ನಾವೆಲ್ಲೇ ಇದ್ದರೂ ನಮ್ಮ ಗಮನ, ಕಾಳಜಿ ಹೆತ್ತವರ ಬಗ್ಗೆ ಇದ್ದೇ ಇರುತ್ತದೆ. ಊರಿನಲ್ಲಿರುವ ಹೆತ್ತವರು ಆರ್ಥಿಕವಾಗಿ ಸಬಲರಾಗಿರಬೇಕು ಎನ್ನುವ ಆಶಯ ಎಲ್ಲಾ ಮಕ್ಕಳದೂ ಆಗಿರುತ್ತದೆ. ಅದಕ್ಕಾಗಿ ಏನೇನು ಮಾಡಬಹುದು ಗೊತ್ತೆ?
ಕ್ಯಾಷ್ಲೆಸ್ ಪೇಮೆಂಟ್: ಪೇಟಿಎಂ, ಫೋನ್ ಪೇನಂಥ ಇ ವ್ಯಾಲೆಟ್ಗಳು, ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್- ಇವೆಲ್ಲಾ ಡಿಜಿಟಲ್ ವ್ಯವಹಾರಗಳು ಇನ್ನುಮುಂದೆ ಸಾಮಾನ್ಯ ಎನ್ನುವಂತಾಗಲಿದೆ. ಹಿರಿಯರಿಗೆ, ವಯಸ್ಸಾದವರಿಗೆ ಡಿಜಿಟಲ್ ತಂತ್ರಜ್ಞಾನದ ಬಳಕೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಹೀಗಾಗಿ ಅವರಿಗೆ ಹಣಕಾಸು ಪೇಮೆಂಟ್ ಮಾಡಲು ತರಬೇತಿ ನೀಡಬೇಕು. ಡಿಜಿಟಲ್ ಪೇಮೆಂಟ್ ವ್ಯವಸ್ಥೆಗಳ ಕುರಿತು ಅವರಿಗೆ ತಿಳಿವಳಿಕೆ ಮೂಡಿಸಬೇಕು.
ಆರೋಗ್ಯ ವಿಮೆ: ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ, ಆರೋಗ್ಯದ ಚಿಂತೆ ಮೂಡುವುದು ಸಹಜ. ನಾಳೆ ಹೇಗೋ ಏನೋ ಎಂಬುದನ್ನು ಬಲ್ಲವರಿಲ್ಲ. ಈ ಸಂದರ್ಭದಲ್ಲಿ ಹೆತ್ತವರಿಗೆ ಆರೋಗ್ಯ ವಿಮೆ ಮಾಡಿಸುವುದು ಸೂಕ್ತ. ಕ್ಯಾಶ್ಲೆಸ್ ಆರೋಗ್ಯ ವಿಮೆಯನ್ನೇ ಆರಿಸಿಕೊಳ್ಳುವುದು ಉತ್ತಮ. ಎಮರ್ಜೆನ್ಸಿ ಮತ್ತು ಎಮರ್ಜೆನ್ಸಿ ಅಲ್ಲದ ಮೆಡಿಕಲ್ ಖರ್ಚುಗಳನ್ನು ಕವರ್ ಮಾಡುವ ವಿಮೆಯನ್ನೇ ಆರಿಸಿಕೊಂಡರೆ ಇನ್ನೂ ಒಳ್ಳೆಯದು.
ಆಡ್ ಆನ್ ಕಾರ್ಡ್: ಪೋಷಕರ ಬ್ಯಾಂಕ್ ಖಾತೆಗಳಿಗೆ ಪದೇಪದೆ ಹಣ ಹಾಕುವುದು ತ್ರಾಸದಾಯಕ ಎನಿಸಿದಲ್ಲಿ, ಈಗಾಗಲೇ ಕ್ರೆಡಿಟ್ ಕಾರ್ಡ್ ಹೊಂದಿದ್ದವರು ಆಡ್ ಆನ್ ಕಾರ್ಡುಗಳನ್ನು ಒದಗಿಸುವಂತೆ ಬ್ಯಾಂಕ್, ಹಣಕಾಸು ಸಂಸ್ಥೆಗಳನ್ನು ವಿನಂತಿಸಿಕೊಳ್ಳ ಬಹುದು. ಆಡ್ ಆನ್ ಕಾರ್ಡ್ ಎನ್ನುವುದು, ಕ್ರೆಡಿಟ್ ಕಾರ್ಡ್ದಾರನ ಕುಟುಂಬಸ್ಥರಿಗೆ ನೀಡುವ ಕಾರ್ಡ್ ಆಗಿದೆ. ಅದು ಕೂಡಾ ಕ್ರೆಡಿಟ್ ಕಾರ್ಡ್ ಮಾದರಿ ಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಆಡ್ ಆನ್ ಕಾರ್ಡುಗಳು, ಅದರ ಮೂಲ ಕ್ರೆಡಿಟ್ ಕಾರ್ಡ್ಗೆ ಲಿಂಕ್ ಆಗಿರುತ್ತವೆ.
ಕೈಗೆ ನೇರ ಕ್ಯಾಶ್: ಎಸ್ಬಿಐ, ಎಚ್ಡಿಎಫ್ಸಿ, ಕೋಟಕ್ ಮಹಿಂದ್ರಾ, ಆಕ್ಸಿಸ್ ಮುಂತಾದ ಬ್ಯಾಂಕುಗಳು ತಮ್ಮ ಗ್ರಾಹಕರ ಕೈಗೇ ಕ್ಯಾಶ್ ತಲುಪಿಸುವ ವ್ಯವಸ್ಥೆ ರೂಪಿಸಿವೆ. ಡೋರ್ ಸ್ಟೆಪ್ ಬ್ಯಾಂಕಿಂಗ್ ಸವಲತ್ತಿನಡಿ ಈ ವ್ಯವಸ್ಥೆಯನ್ನು ಒದಗಿಸುತ್ತಿವೆ. ಈ ಸವಲತ್ತು ಒದಗಿಸಲು ಕನಿಷ್ಠ ಶುಲ್ಕವನ್ನು ವಿಧಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ