ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಗೆ ತೀವ್ರ ಗಾಯ
Team Udayavani, Oct 14, 2019, 7:56 PM IST
ಗಂಗಾವತಿ: ಟ್ರಾನ್ಸ್ ಫಾರ್ಮರ್ ತಂತಿ ತಗುಲಿದ ಪರಿಣಾಮವಾಗಿ ಬಾಲಕನೊರ್ವನ ಎಡಗೈ ಹಾಗೂ ತಲೆಗೆ ತೀವ್ರವಾಗಿ ಗಾಯವಾದ ಘಟನೆ ನಗರದ ಎಚ್ಆರ್ ಎಸ್ ಆಶ್ರಯ ಕಾಲೋನಿಯಲ್ಲಿ ನಡೆದಿದೆ.
ಗಾಯಗೊಡಿರುವ ಬಾಲಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮನೆ ಹತ್ತಿರ ಗೆಳೆಯರ ಜತೆ ಕ್ರಿಕೆಟ್ ಆಟವಾಡುವ ಸಂದರ್ಭದಲ್ಲಿ ಟ್ರಾನ್ಸಪಾರ್ಮಾರ್ ಹತ್ತಿರ ಹೋಗಿದ್ದ ಚೆಂಡನ್ನು ತರಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ವಿದ್ಯುತ್ ಸ್ಪರ್ಶವಾದ ತಕ್ಷಣ ಸ್ಥಳೀಯರು ಗಮನಿಸಿ ಕಟ್ಟಿಗೆಯಿಂದ ಬಾಲಕನನ್ನು ಸಂರಕ್ಷಿಸುವ ಕಾರ್ಯ ಮಾಡಿದ್ದರಿಂದ ಹೆಚ್ಚಿನ ಅನಾವುತ ಸಂಭವಿಸಿಲ್ಲ.
ಕೊಪ್ಪಳ ಚಳಗೇರಿ, ಹುಲಿಗಿಯಲ್ಲಿ ಜರುಗಿದ ವಿದ್ಯುತ್ ಅವಘಡದಲ್ಲಿ ಸಾವು ನೋವು ಸಂಭವಿಸಿ ಇಡೀ ದೇಶವೇ ಬೆಚ್ಚಿಬೀಳುವಂತಾದ ಘಟನೆ ಮಾಸುವ ಮುಂಚೆ ಗಂಗಾವತಿಯಲ್ಲಿ ಈ ಅವಘಡ ಸಂಭವಿಸಿದೆ.
ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸ ಮಾಡುವ ಆಶ್ರಯ ಕಾಲೋನಿಯಲ್ಲಿ ಅಳವಡಿಸಿರುವ ಟ್ರಾನ್ಸಫಾರ್ಮಾರ್ ಗೆ ಸುತ್ತಲೂ ತಂತಿ ಬೇಲಿ ಹಾಕುವಂತೆ ಇಲ್ಲಿಯ ನಿವಾಸಿಗಳು ಹಲವು ವರ್ಷಗಳಿಂದ ನಗರಸಭೆ ಮತ್ತು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು