ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇಗುಲದ ಹುಂಡಿಯಲ್ಲಿ 1.7 ಲಕ್ಷ ರೂ.
Team Udayavani, Jan 7, 2021, 3:16 PM IST
ಹನೂರು: ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ಹುಂಡಿಯಲ್ಲಿ 1.69 ಲಕ್ಷ ರೂ. ಸಂಗ್ರಹವಾಗಿದೆ.
ಕಿಚ್ಚುಗುತ್ತು ಮಾರಮ್ಮ ದೇವಾಲಯದ ಹಿಂಭಾಗದ ಭಕ್ತಾದಿಗಳ ತಂಗುದಾಣದ ಹಿಂಭಾಗದಲ್ಲಿ ಜರುಗಿದ ಹುಂಡಿಎಣಿಕೆ ಪ್ರಕ್ರಿಯೆ ತಹಶೀಲ್ದಾರ್ ನಾಗರಾಜು ಅಧ್ಯಕ್ಷತೆಯಲ್ಲಿ ಜರುಗಿತು.
ಹುಂಡಿ ಎಣಿಕೆಯಲ್ಲಿ 1,69,600 (ಒಂದು ಲಕ್ಷದ ಅರವತ್ತೂಂಭತ್ತು ಸಾವಿರದ ಆರುನೂರು) ರೂ. ನಗದು ಸಂಗ್ರಹವಾಗಿದೆ.
ಹುಂಡಿಗಳಲ್ಲಿ ಸಂಗ್ರಹವಾಗಿದ್ದ ನಗದನ್ನು ಎಣಿಕೆ ಪ್ರಕ್ರಿಯೆಯ ಬಳಿಕ ಮಾರ್ಟಳ್ಳಿ ಗ್ರಾಮದ ಕಾವೇರಿ ಕಲ್ಪತರು ಗ್ರಾಮೀಣ
ಬ್ಯಾಂಕಿನಲ್ಲಿ ಜಮೆ ಮಾಡಲಾಗಿದೆ. ಹುಂಡಿ ಎಣಿಕೆ ಪ್ರಕ್ರಿಯೆಗೆ ರಾಮಾಪುರ ಪೊಲೀಸರಿಂದ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಸುರೇಖಾ, ಆರ್ಐ ರಂಗಸ್ವಾಮಿ, ಗ್ರಾಮಲೆಕ್ಕಿಗರಾದ ವಿನೋದ್, ರಂಗಸ್ವಾಮಿ, ಶಿವ
ಕುಮಾರ್, ನಾರಾಯಣಸ್ವಾಮಿ, ಶಿವರಾಜು, ದಿನೇಶ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಇದನ್ನೂ ಓದಿ:ಗುಂಡ್ಲುಪೇಟೆ: ಅಡವಿಮಠಕ್ಕೆ ಬಂದಿದ್ದ ಜಿಂಕೆ ಮರಳಿ ಕಾಡಿಗೆ
ಕಿಚ್ಚುಗುತ್ತು ಮಾರಮ್ಮ ದೇವಾಲಯವು ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಟ್ಟ ಜರುಗುತ್ತಿರುವ 2ನೇ ಬಾರಿಯ ಹುಂಡಿ ಎಣಿಕೆ ಮತ್ತು ವಿಷಮಿಶ್ರಿತ ಪ್ರಸಾದ ಪ್ರಕರಣದ ಬಳಿಕ ಸಾರ್ವಜನಿಕ ದರ್ಶನಕ್ಕೆ ಲಭ್ಯವಾದ ಬಳಿಕ ನಡೆದ ಚೊಚ್ಚಲ ಹುಂಡಿ ಎಣಿಕೆಯಾಗಿದೆ. ದೇವಾಲಯದಲ್ಲಿ ಕುಕೃತ್ಯ ನಡೆದ ಬಳಿಕ 22 ತಿಂಗಳುಗಳ ಕಾಲ ಬಂದ್ ಮಾಡಲಾಗಿತ್ತು. ಈ ವೇಳೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಿಕೊಂಡ ಬಳಿಕ ಸೆಪ್ಟೆಂಬರ್ 30ರಂದು ಹುಂಡಿ ಎಣಿಕೆಯು ಜರುಗಿತ್ತು. ಇದಾದ ಬಳಿಕ ಅಕ್ಟೋಬರ್ 24ರಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು