ಹುಬ್ಬಳ್ಳಿ: ಗಮನ ಸೆಳೆದ ನಗರ ಸ್ವಚ್ಛತೆ ಕುರಿತ ಜನಜಾಗೃತಿ ಕಿರುಚಿತ್ರ
Team Udayavani, Oct 5, 2020, 1:03 PM IST
ಹುಬ್ಬಳ್ಳಿ: ಸ್ವಚ್ಛತಾ ಅಭಿಯಾನದ ಕುರಿತು, ನಗರದಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನವೀನ ಶೆಟ್ಟರ ಅವರ ಪರಿಕಲ್ಪನೆ – ನಿರ್ದೇಶನದಲ್ಲಿ ತಯಾರಾದ ಕಿರುಚಿತ್ರ ಗಮನ ಸೆಳೆದಿದೆ.
ನಗರ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ತರ ವಾಗಿದ್ದು, ಅವರ ಸೇವೆಯನ್ನಿಲ್ಲಿ ಸ್ಮರಿಸಲಾಗಿದೆ. ಜೊತೆಗೆ ಜನರು ಯಾವ ರೀತಿಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು? ಕಸದ ವಾಹನ ಬಂದಾಗ ಮನೆಯ ಕಸವನ್ನು ಯಾವ ರೀತಿಯಲ್ಲಿ ವಿಂಗಡಿಸಿ ನೀಡಬೇಕು? ಎಂಬುದರ ಜೊತೆಗೆ ಪ್ಲಾಸ್ಟಿಕ್ ಬಳಕೆ ತ್ಯಜಿಸುವುದು, ಚಿಕ್ಕ ವಯಸ್ಸಿನಿಂದಲೇ ನೈರ್ಮಲ ಜಾಗೃತಿ ಮೂಡಿಸುವುದರ ಕುರಿತು ಹೇಳಲಾಗಿದೆ. ನವಋತು ಕ್ರಿಯೇಶನ್ಸ್ ನಿಂದ ಸಿದ್ಧವಾಗಿರುವ ಮೂರು ನಿಮಿಷಗಳ ಕಿರುಚಿತ್ರ ಯೂಟ್ಯೂಬ್ ಚಾನೆಲ್ನಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿಯಂದು ಬಿಡುಗಡೆ ಗೊಂಡಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ :ಹತ್ರಾಸ್ ಭೇಟಿ: ಭೀಮ್ ಆರ್ಮಿಯ ಮುಖ್ಯಸ್ಥ ಸೇರಿದಂತೆ 400ಕ್ಕೂ ಹೆಚ್ಚು ಜನರ ಮೇಲೆ FIR ದಾಖಲು
ವಿದ್ಯಾನಗರದ ಅಕ್ಷಯ ಕಾಲೋನಿ 4ನೇ ಫೇಸ್ ಜನರ ಸಹಕಾರದೊಂದಿಗೆ ವಿಡಿಯೋ ಮೂಡಿಬಂದಿದೆ. ಪೌರಕಾರ್ಮಿಕರಾದ ಶರಣಬಸಪ್ಪ ಅಮರಾವತಿ, ನವೀನ, ಹನುಮವ್ವ ಪೊಲೀಸ್ಪಾಟೀಲ ಅಭಿನಯಿಸಿದ್ದಾರೆ.
ಅಲ್ಲದೇ ಪ್ರಭು ಕಲ್ಲಯ್ಯನವರ, ವಿಜಯಕುಮಾರ ಬಾರಕೇರ, ಪ್ರಥಮ ಕಲ್ಲಯ್ಯನವರ, ಬೇಬಿ ಶ್ರಾವಣಿ, ಅಪೇಕ್ಷಾ ಮೈಸೂರ್, ವಾಣಿ ಬಾರಕೇರ ಪಾತ್ರ ನಿರ್ವಹಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ವಿಜಯ ಇಬ್ರಾಹಿಂಪುರ ಅವರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ