ಭಾರತದಿಂದ ಟಿ20 ವಿಶ್ವಕಪ್‌ ಸ್ಥಳಾಂತರ ಖಚಿತ? UAEಗೆ ಸ್ಥಳಾಂತರಿಸಲು ಐಸಿಸಿಗೆ ಆಂತರಿಕ ಮಾಹಿತಿ


Team Udayavani, Jun 6, 2021, 7:15 AM IST

ಭಾರತದಿಂದ ಟಿ20 ವಿಶ್ವಕಪ್‌ ಸ್ಥಳಾಂತರ ಖಚಿತ? UAEಗೆ ಸ್ಥಳಾಂತರಿಸಲು ಐಸಿಸಿಗೆ ಆಂತರಿಕ ಮಾಹಿತಿ

ಹೊಸದಿಲ್ಲಿ: ಪ್ರತಿಷ್ಠಿತ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾ ವಳಿ ಭಾರತದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದು ವರ್ಷಾಂತ್ಯ ಯುಎಇಯಲ್ಲಿ ನಡೆಯುವುದು ಬಹುತೇಕ ಖಚಿತಗೊಂಡಿದೆ. ಹೆಸರು ಹೇಳಬಯಸದ ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ಈ ಮಾಹಿತಿ ಒದಗಿಸಿದ್ದಾರೆ.

ಕಳೆದ ಐಸಿಸಿ ಸಭೆಯಲ್ಲಿ, ಟಿ20 ವಿಶ್ವಕಪ್‌ ಆತಿಥ್ಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಐಸಿಸಿ ಬಳಿ ಒಂದು ತಿಂಗಳ ಕಾಲಾವಕಾಶ ಕೇಳಿತ್ತು. ಆದರೆ ಅಂದೇ ಈ ಪಂದ್ಯಾವಳಿಯನ್ನು ಯುಎಇಯಲ್ಲಿ ನಡೆಸಲು ಸಿದ್ಧತೆ ಆರಂಭಿಸುವಂತೆ ಬಿಸಿಸಿಐ ಐಸಿಸಿಗೆ ಆಂತರಿಕ ಮಾಹಿತಿ ನೀಡಿದೆ ಎಂಬುದಾಗಿ ಅಧಿಕಾರಿ ತಿಳಿಸಿದರು.

ಯುಎಇ ಈ ಕೂಟದ ಮೀಸಲು ತಾಣವಾಗಿದೆ. ಇಲ್ಲಿನ ಶಾರ್ಜಾ, ದುಬಾೖ, ಅಬುಧಾಬಿ ಜತೆಯಲ್ಲೇ ಒಮಾನ್‌ ರಾಜಧಾನಿ ಮಸ್ಕತ್‌ನಲ್ಲೂ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂಬುದು ಮತ್ತೂಂದು ಬ್ರೇಕಿಂಗ್‌ ನ್ಯೂಸ್‌. ಅಕ್ಟೋಬರ್‌ ಕೊನೆಯ ವಾರ ಪಂದ್ಯಾವಳಿ ಆರಂಭಗೊಳ್ಳಲಿದೆ.

ಮಸ್ಕತ್‌ ನಾಲ್ಕನೇ ತಾಣ
“ಹೌದು, ಕಳೆದ ಐಸಿಸಿ ಮಂಡಳಿ ಸಭೆಯಲ್ಲಿ ಟಿ20 ವಿಶ್ವಕಪ್‌ ಆತಿಥ್ಯದ ನಿರ್ಧಾರವನ್ನು ಪ್ರಕಟಿಸಲು ಬಿಸಿಸಿಐ ಕಾಲಾವಕಾಶ ಕೇಳಿತ್ತು. ಆದರೆ ಆಯೋಜನೆಯ ಹಕ್ಕನ್ನಷ್ಟೇ ಉಳಿಸಿಕೊಂಡು ಯುಎಇ ಮತ್ತು ಒಮಾನ್‌ನಲ್ಲಿ ಕೂಟವನ್ನು ಆಯೋಜಿಸಲು ಅಭ್ಯಂತರವಿಲ್ಲ ಎಂದು ಆಂತರಿಕವಾಗಿ ಸೂಚಿಸಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

“ಯುಎಇ ಆವೃತ್ತಿಯ ಐಪಿಎಲ್‌ ಅಕ್ಟೋಬರ್‌ 10ಕ್ಕೆ ಮುಗಿಯಲಿದೆ. ಟಿ20 ವಿಶ್ವಕಪ್‌ ನವೆಂಬರ್‌ನಲ್ಲಿ ಮೊದಲ್ಗೊಳ್ಳುತ್ತದೆ. ನಡುವೆ 3 ವಾರಗಳ ಅವಧಿಯಷ್ಟೇ ಉಳಿಯುತ್ತದೆ. ವಿಶ್ವ ಮಟ್ಟದ ಕ್ರಿಕೆಟ್‌ ಕೂಟಕ್ಕೆ ಪಿಚ್‌ ನಿರ್ಮಿಸಲು, ಇನ್ನಿತರ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಸಮಯ ತಗಲುತ್ತದೆ. ಹೀಗಾಗಿ ಮಸ್ಕತ್‌ನಲ್ಲಿ ಮೊದಲ ವಾರದ ಪಂದ್ಯಗಳನ್ನು ಆಯೋಜಿಸುವ ಯೋಜನೆ ಇದೆ’ ಎಂದು ಅವರು ಹೇಳಿದರು.

ಕಾಡುತಿದೆ ಕೊರೊನಾ ಭೀತಿ
“ಕೊರೊನಾದಿಂದಾಗಿ ಭಾರತದಲ್ಲಿ ಈ ಪಂದ್ಯಾವಳಿ ನಡೆ ಸುವ ಬಗ್ಗೆ ಗ್ಯಾರಂಟಿ ನೀಡಲು ಬಿಸಿಸಿಐಗೆ ಖಂಡಿತ ಸಾಧ್ಯವಿಲ್ಲ. ಈಗಲೇ ನಮ್ಮಲ್ಲಿ 1,20,000ದಷ್ಟು ಪಾಸಿಟಿವ್‌ ಕೇಸ್‌ಗಳಿವೆ. ಹೀಗಿರುವಾಗ ಜೂನ್‌ 28ಕ್ಕೆ “ಯಸ್‌’ ಎಂದು ಹೇಳಲಾಗದು. ವರ್ಷಾಂತ್ಯ ಕೊರೊನಾ ಪರಿಸ್ಥಿತಿ ಹೇಗೆ ನಿಂತೀತು, 3ನೇ ಅಲೆ ಹುಟ್ಟಿಕೊಂಡೀತೇ ಎಂಬೆಲ್ಲ ಪ್ರಶ್ನೆಗಳಿರುವಾಗ ವಿಶ್ವಕಪ್‌ ಆತಿಥ್ಯದ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ?’ ಎಂದು ಅಧಿಕಾರಿ ಪ್ರಶ್ನಿಸಿದರು.

ವಿಶ್ವಕಪ್‌ ಐಪಿಎಲ್‌ನಂತಲ್ಲ…
“ಇಲ್ಲಿ ಇನ್ನೊಂದು ಮುಖ್ಯ ಸಂಗತಿ ಇದೆ. ಸೆಪ್ಟಂಬರ್‌ನಲ್ಲಿ 8 ತಂಡಗಳ ನಡುವಿನ ಐಪಿಎಲ್‌ ಕೂಟವನ್ನು ಭಾರತದಲ್ಲಿ ಮುಂದುವರಿಸಲು ಬಿಸಿಸಿಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಒಂದೇ ತಿಂಗಳ ಅವಧಿಯಲ್ಲಿ 16 ತಂಡಗಳ ವಿಶ್ವ ಮಟ್ಟದ ಕೂಟವನ್ನು ಆಯೋಜಿಸಲು ಸಾಧ್ಯವೇ?’ ಎಂದು ಅಧಿಕಾರಿ ಪ್ರಶ್ನಿಸಿದರು.

“ವಿಶ್ವಕಪ್‌ ಎನ್ನುವುದು ಐಪಿಎಲ್‌ನಂತಲ್ಲ. ಅಕಸ್ಮಾತ್‌ ತಂಡವೊಂದಕ್ಕೆ ಬಯೋಬಬಲ್‌ನಲ್ಲೂ ಕೊರೊನಾ ಕಂಟಕ ಎದುರಾದರೆ ಸುಲಭದಲ್ಲಿ ಬದಲಿ ಆಟಗಾರರ ವ್ಯವಸ್ಥೆ ಮಾಡಲಾಗದು. ದುರ್ಬಲ ತಂಡ ಇದರಿಂದ ತೀವ್ರ ಸಂಕಟಕ್ಕೆ ಸಿಲುಕಲಿದೆ’ ಎಂದರು.

ಟಾಪ್ ನ್ಯೂಸ್

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.