ಟ್ಯಾಗೋರರ ಶಾಂತಿನಿಕೇತನ ಮಾದರಿ ಶಾಲೆ ; ಸರ್ವಾಂಗೀಣ ಶಿಕ್ಷಣದ ಮಡಿಲು

ಬಾಲ ಬಳಗಕ್ಕೆ ಬೆಳ್ಳಿ ಲೇಪನ

Team Udayavani, Jun 23, 2022, 11:17 AM IST

2

ಧಾರವಾಡ: ಈ ಶಾಲೆಯ ಕೊಠಡಿಗಳಿಗೆ ಬಾಗಿಲು ಮತ್ತು ಕದಗಳೇ ಇಲ್ಲ. ಮನೆಗೆಲಸ ಮಾಡದ ಮಕ್ಕಳಿಗೆ ಹೊಡೆಯಲು ಇಲ್ಲಿ ಕೋಲಿಲ್ಲ. ಮಕ್ಕಳಿಗೆ ಶಿಕ್ಷಕರು ಕೊಡುವ ದೊಡ್ಡ ಶಿಕ್ಷೆ ಮುಗುಳ್ನಗೆ ಮತ್ತು ಚಟಾಕಿಗಳು. ಮಕ್ಕಳಿಗೆ ಸಮಸ್ತ್ರದ ಹಂಗಿಲ್ಲ, ಶಿಸ್ತಿನ ನೆಪದಲ್ಲಿ ನೀಡುವ ಶಿಕ್ಷೆಗಳ ಸಂಗವೂ ಇಲ್ಲ. ಆದರೆ ಖಾದಿ ಧರಿಸುವುದು ಮಾತ್ರ ಕಡ್ಡಾಯ. ಒಟ್ಟಿನಲ್ಲಿ ಇದು ಟ್ಯಾಗೋರರ ಶಾಂತಿ ನಿಕೇತನದ ತುಣುಕು.

ಹೌದು. ಎಲ್‌ಕೆಜಿಗೆ 50 ಸಾವಿರ ಡೋನೇಷನ್‌ ಕೇಳುವ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಾವಿರ ಸಾವಿರ ಹಣ ಪೀಕುವ ಖಾಸಗಿ ಶಾಲೆಗಳ ಬಗ್ಗೆ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಸರ್ವಾಂಗೀಣ ಶಿಕ್ಷಣ, ಮಕ್ಕಳ ಮನೋವಿಕಾಸ, ಹೊಸ ಆಯಾಮಗಳಿಗೆ ಮಕ್ಕಳನ್ನು ಸಜ್ಜುಗೊಳಿಸುವಿಕೆ ಮತ್ತು ದೇಶಿ ಸೊಗಡಿನ ಸಂಸ್ಕಾರ ಬಿತ್ತುವ ಶಾಲೆಯೊಂದು ಕಳೆದ 25 ವರ್ಷಗಳಿಂದ ಸದ್ದಿಲ್ಲದೇ ತನ್ನ ಕೆಲಸ ಮಡುತ್ತಿದೆ.

ಧಾರವಾಡ ನಗರ ಪಶ್ಚಿಮ ಭಾಗದಲ್ಲಿರುವ ಛೋಟಾ ಮಹಾಬಲೇಶ್ವರ ಬೆಟ್ಟವೆಂದೇ ಕರೆಯಲ್ಪಡುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ ಅತ್ತಿಕೊಳ್ಳದಲ್ಲಿರುವ ಬಾಲ ಬಳಗ ಸೃಜನಶೀಲ ಶಿಕ್ಷಣ ಟ್ರಸ್ಟ್‌ನ ಬಾಲ ಬಳಗ ಶಾಲೆ ತನ್ನ ಕಲಿಕೆ, ಮಕ್ಕಳ ಮನೋವಿಕಾಸ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ನಿಸರ್ಗ ರಮ್ಯ ಶಾಲೆ. ಸಾಮಾನ್ಯವಾಗಿ ಇಂದಿನ ಖಾಸಗಿ ಶಾಲೆಗಳು ದೈತ್ಯ ಕಟ್ಟಡ ಮತ್ತು ಹೈಟೆಕ್‌ ಸ್ವರೂಪದಲ್ಲಿರುತ್ತವೆ. ಜೋರಾಗಿ ತಿರುಗುವ ಒಂದಿಷ್ಟು ಪ್ಯಾನುಗಳು, ಕುಳಿತುಕೊಳ್ಳಲು ಹೈಟೆಕ್‌ ಡೆಸ್ಕ್, ಖುರ್ಚಿಗಳು, ಶಿಕ್ಷಕರಿಗೆ ಬೋಧಿಸಲು ಎಲೆಕ್ಟ್ರಾನಿಕ್‌ ಫಲಕಗಳು, ಪಿಟಿಪಿಗೆ ಅಗತ್ಯವಾದ ಫಲಕ, ಅವರು ಹೇಳಿದ ಅಂಗಡಿಗಳಿಂದಲೇ ಸಮವಸ್ತ್ರ ಖರೀದಿ ಒಟ್ಟಿನಲ್ಲಿ ಶಾಲೆಯ ಖರ್ಚುಗಳೆಲ್ಲವನ್ನೂ ಪೋಷಕರಿಂದಲೇ ಕೀಳುವ ವ್ಯವಸ್ಥೆ ಕಣ್ಣ ಮುಂದಿದೆ.

ಆದರೆ ಬಾಲ ಬಳಗ ಶಾಲೆಯಲ್ಲಿ ಇದೆಲ್ಲದಕ್ಕೂ ಜಾಗವೇ ಇಲ್ಲ. ಇಲ್ಲೇನಿದ್ದರೂ ತೆರೆದ ಶಾಲಾ ಕೊಠಡಿಗಳು, ಅಚ್ಚುಕಟ್ಟಾಗಿ ನಿರ್ಮಿಸಿದ ದೇಶಿ ಸೊಗಡಿನ ಶಾಲಾ ಆವರಣ. ಮಧ್ಯದಲ್ಲಿ ಬಯಲು ರಂಗಮಂದಿರ, ಸುತ್ತಲೂ ಹಸಿರು ಹೊನ್ನಿನ ಸುರಿಮಳೆ. ನಾನಾ ಜಾತಿಯ ಗಿಡಮರಗಳು. ಮಳೆಗಾಲದಲ್ಲಂತೂ ದಟ್ಟ ಕಾಡಿನ ಮಧ್ಯೆ ಕುಳಿತು ಶಾಲೆ ಕಲಿಯುವ ಗುರುಕುಲವೇನೋ ಎನ್ನುವಷ್ಟು ಅಪ್ಯಾಯಮಾನ ವಾತಾವರಣ. ಇಡೀ ಶಾಲೆಯ ಆವರಣದಲ್ಲಿ ಹತ್ತಾರು ಚಿಕ್ಕ ಚಿಕ್ಕ ಕಟ್ಟಡಗಳ ಗುತ್ಛ. ಎಲ್ಲಾ ಕಟ್ಟಡಗಳ ಮೇಲೂ ದೇಶಿಯ ಕಲೆಯ ಅನಾವರಣ. ಕಣ್ಣಿಗೆ ಹಿತವೆನಿಸುವ ಬಣ್ಣಗಳ ಲೇಪನ.

ವಿಭಿನ್ನ ಕಲಿಕಾ ಪದ್ಧತಿ : ಇತರೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಲಿಕೆ ಮತ್ತು ಬೋಧನೆ ಒಂದೇ ತೆರನಾಗಿರುತ್ತದೆ. ಆದರೆ ಬಾಲಬಳಗ ಶಾಲೆಯಲ್ಲಿ ಮಾತ್ರ ಸಮಗ್ರ ಶಿಕ್ಷಣ ಪದ್ಧತಿ ಅಳವಡಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಜತೆಗೆ ಅವರ ಆಸಕ್ತಿದಾಯಕ ವಿಷಯಗಳ ಪೋಷಣೆ ಮತ್ತು ಸ್ಫೂರ್ತಿದಾಯಕ ಚಟುವಟಿಕೆಗಳಿಗೆ ಒತ್ತು ನೀಡಲಾಗುತ್ತದೆ. ಮಗು ಕಲಿಕೆ ಕುರಿತು ಶಿಕ್ಷಕರು ವಿಚಾರಿಸುವುದು ಕಡಿಮೆ. ಇದೇನಿದ್ದರೂ ವಿದ್ಯಾರ್ಥಿಯ ಆಸಕ್ತಿಯ ಮೇಲೆ ಹೋಗುತ್ತದೆ. ಮನೆಗೆಲಸವೂ ಅಷ್ಟೇ. ಒತ್ತಾಯ, ಒತ್ತಡವಿಲ್ಲ. ನಗು ನಗುತ್ತಲೇ ಅವರಿಂದಲೇ ಕೆಲಸ ಮಾಡಿಸುವ ಬೋಧನಾ ತಂತ್ರಗಾರಿಕೆ ಗಮನ ಸೆಳೆಯುವಂತಿದೆ.

ಕಸದಲ್ಲಿ ಸರ, ಬದುಕು ನೀತಿ : ಶಾಲೆಯಲ್ಲಿ ಮಕ್ಕಳಿಗೆ ಅಂಕ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಬದಲು, ಅವರ ಬದುಕಿಗೆ ಅನುಕೂಲವಾಗುವ ಶಿಕ್ಷಣ ಮೂಲಗಳನ್ನು ಇಲ್ಲಿ ಶೋಧಿಸಲಾಗುತ್ತಿದೆ. ಹಣ ಕೊಟ್ಟು ಹಾಸ್ಟೇಲ್‌ ಫೀ ಕಟ್ಟಿ ಕೈ ತೊಳೆದುಕೊಳ್ಳುವ ಪೋಷಕರು ತಮ್ಮ ಮಗ, ಡಾಕ್ಟರ್‌, ಇಂಜಿನಿಯರ್‌ ಆಗಬೇಕು ಎಂದು ಬಯಸುವುದೇ ಹೆಚ್ಚು. ಆದರೆ ಇಂತಹ ಪರಿಕಲ್ಪನೆಗಳಿಗೆ ಇಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಬದಲಿಗೆ ಪೋಷಕರು, ಬೋಧಕರು, ಸಮಾಜದ ವಿವಿಧ ಮಜಲುಗಳನ್ನು ತಿಳಿಸುವ ಆತ್ಮವಿಶ್ವಾಸದ ಕುಡಿಗಳನ್ನು ಬಾಲ ಬಳಗ ಹಬ್ಬಿಸುತ್ತಿದೆ.

ರಜತ ಮಹೋತ್ಸವ ಸಂಭ್ರಮ ತಮ್ಮ ಮಗನನ್ನು ಕಠು ಶಿಸ್ತಿನ ಶಾಲೆಗೆ ಕಳುಹಿಸಲಾರದೇ ಅವನಿಗಾಗಿ ಪೋಷಕರೇ ಶಿಕ್ಷಕರಾಗಿ 25 ವರ್ಷಗಳ ಹಿಂದೆ ತಮ್ಮ ಮನೆಯ ಪಡಸಾಲೆಯಲ್ಲಿ ಶಿಶುವಿಹಾರದಿಂದ ಆರಂಭಗೊಂಡ ಬಾಲಬಳಗ ಇದೀಗ 1-10ನೇ ತರಗತಿವರೆಗೂ ಸಾವಿರ ಸಾವಿರ ಮಕ್ಕಳಿಗೆ ಶಿಕ್ಷಣ ನೀಡಿದೆ. ಇಂದು ಅವರೆಲ್ಲ ದೇಶ-ವಿದೇಶಗಳಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ ಕೂಡ. ವೈದ್ಯರಾದ ಡಾ|ಸಂಜೀವ ಕುಲಕರ್ಣಿ ಮತ್ತು ಪ್ರತಿಭಾ ಕುಲಕರ್ಣಿ ತಮ್ಮ ಮನೆಯನ್ನೇ ಶಾಲೆ ಮಾಡಿ ಮಕ್ಕಳಿಗೆ ವಿದ್ಯೆ ಕಲಿಸಿ ಸೈ ಎನಿಸಿಕೊಂಡವರು. 25 ವರ್ಷ ಕಳೆದಿದ್ದು, ಇದೀಗ ಬಾಲಬಳಗ ಶಾಲೆ ರಜತಮಹೋತ್ಸವ ಆಚರಣೆ ಸಂಭ್ರಮದಲ್ಲಿದೆ.

ಆಟವಾಡುತ್ತ, ಚಟಾಕಿ ಹಾರಿಸುತ್ತ, ಮುಗುಳ್ನಗುತ್ತಲೇ ನಮಗೆ ಪಾಠ ಹೇಳಿಕೊಡುವ ಬಾಲಬಳಗದ ಶಿಕ್ಷಣ ಪದ್ಧತಿ ನಿಜಕ್ಕೂ ಖುಷಿ ಕೊಡುತ್ತದೆ. ಅಷ್ಟೇಯಲ್ಲ, ಪ್ರತಿ ಕ್ಲಾಸಿನಲ್ಲೂ ಪ್ರತಿಯೊಬ್ಬ ಶಿಕ್ಷಕರನ್ನು ನಾವು ಪ್ರಶ್ನಿಸುವ ಹಕ್ಕು ಮತ್ತು ಸ್ವಾತಂತ್ರ್ಯವಿರುವುದಕ್ಕೆ ಶಾಲೆ ಬಗ್ಗೆ ಹೆಮ್ಮೆ ಅನಿಸುತ್ತದೆ. zಪಿ.ವಿ. ಭಟ್‌, ಬಾಳ ಬಳಗ ವಿದ್ಯಾರ್ಥಿ.

ಪ್ರಸ್ತುತ ಸ್ಕಾಟ್‌ ಲ್ಯಾಂಡ್‌ ನಿವಾಸಿ. ಜಪಾನಿನ ಲೇಖಕ ತೊತಾಚಾನ್‌ ತೆತಸ್ಕೋಕೂರ ಹಾಗೂ ಗೀಜುಬಾಯಿ ಬಧೇಕಾ ಅವರ ಶಿಕ್ಷಣ ತತ್ವಗಳ ಆಧಾರದ ಮೇಲೆ ಬಾಲಬಳಗ ಶಾಲೆ ನೆಲೆ ನಿಂತಿದೆ. ಮಕ್ಕಳು ಅಂಕ ಪಡೆದರಷ್ಟೇ ಶ್ರೇಷ್ಠರಲ್ಲ, ಅವರಲ್ಲಿರುವ ವಿಭಿನ್ನ ಪ್ರತಿಭೆಗೆ ಶಿಕ್ಷಣ ಪೂರಕವಾಗಬೇಕು. –ಡಾ|ಸಂಜೀವ ಕುಲಕರ್ಣಿ, ಬಾಳ ಬಳಗ ಟ್ರಸ್ಟ್‌ ಮುಖ್ಯಸ್ಥರು

-ಡಾ|ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.