ತಾ| ಕಚೇರಿ ಝೆರಾಕ್ಸ್‌ ಯಂತ್ರಗಳು ಸ್ತಬ್ಧ!

ಎಲ್ಲ ಕೆಲಸ ಕಾರ್ಯಗಳಿಗೂ ಖಾಸಗಿಯವರ ಮೊರೆ ಹೋಗಬೇಕಾದ ಅನಿವಾರ್ಯ

Team Udayavani, Jan 13, 2022, 4:44 AM IST

ತಾ| ಕಚೇರಿ ಝೆರಾಕ್ಸ್‌ ಯಂತ್ರಗಳು ಸ್ತಬ್ಧ!

ಕುಂದಾಪುರ: ತಾಲೂಕು ಕಚೇರಿಯ ಕಂದಾಯ ಶಾಖೆ, ಚುನಾವಣೆ ಶಾಖೆ, ಆಹಾರ ಖಾತೆ ಸೇರಿದಂತೆ ವಿವಿಧೆಡೆಯ ಐದಕ್ಕೂ ಹೆಚ್ಚು ಝೆರಾಕ್ಸ್‌ ಯಂತ್ರಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ದುರಸ್ತಿಯಾಗಿಲ್ಲ
ಕೆಲವು ವರ್ಷಗಳ ಹಿಂದಿನವರೆಗೆ ಕಡತದ ಛಾಯಾಪ್ರತಿ ತೆಗೆಸಲು, ನಕಲು ತೆಗೆಸಲು ಕಚೇರಿ ಸಿಬಂದಿ ಅಂಗಡಿಗೆ ಹೋಗಿ ಪ್ರತಿ ಮಾಡಿಸುತ್ತಿದ್ದರು. ಆದರೆ ಸರಕಾರದ ಪಾಲಿಗೆ ದೈನಂದಿನ ಖರ್ಚು ಹೆಚ್ಚಾದಾಗ ಝೆರಾಕ್ಸ್‌ ಯಂತ್ರಗಳನ್ನೇ ನೀಡಲಾಯಿತು. ಆರಂಭದಲ್ಲಿ ಒಂದು ಯಂತ್ರ ನೀಡಿ ಅನಂತರ ವಿವಿಧ ಕಾರ್ಯನಿರ್ವಹಣೆ ಶಾಖೆಗಳಿಗೆ ಪ್ರತ್ಯೇಕ ಯಂತ್ರಗಳ ಆಗಮನವಾಯಿತು. ಆದರೆ ಯಂತ್ರ ಪೂರೈಸಿದ ಗುತ್ತಿಗೆದಾರ ಸಂಸ್ಥೆ ಅದನ್ನು ನಿರ್ವಹಣೆ ಮಾಡಲೇ ಇಲ್ಲ. ಪರಿಣಾಮ ಯಂತ್ರಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದವು. ಸಣ್ಣಪುಟ್ಟ ದುರಸ್ತಿಯನ್ನು ಸಿಬಂದಿ, ಅಧಿಕಾರಿ ಹಣ ಹಾಕಿ ಮಾಡಿಸುತ್ತಿದ್ದರು. ಆದರೆ ದೊಡ್ಡ ಮೊತ್ತದ ದುರಸ್ತಿ ಈ ಹಿಂದೊಮ್ಮೆ ಮಾಡಿಸಿದ್ದೂ ಇನ್ನೂ ಸರಕಾರದಿಂದ ಅನುದಾನ ಬಾರದೆ ಸಂಸ್ಥೆಗೆ ಪಾವತಿ ಆಗಿಲ್ಲ.

ಕಚೇರಿಗೆ ಅವಶ್ಯವಿದೆ
ನಾಗರಿಕರಿಗಷ್ಟೇ ಅಲ್ಲ, ತಾಲೂಕು ಕಚೇರಿಯ ಕೆಲಸ ಕಾರ್ಯಗಳಿಗೂ ಝೆರಾಕ್ಸ್‌ ಯಂತ್ರದ ಅಗತ್ಯವಿದೆ. ಅನೇಕ ಕಡತಗಳು, ದಾಖಲೆಗಳ ಪ್ರತಿ ತೆಗೆಯಲು ಅವಶ್ಯವಿದೆ. ಆದರೆ ಎಲ್ಲ ಕೆಲಸ ಕಾರ್ಯಗಳಿಗೂ ಖಾಸಗಿಯವರ ಮೊರೆ ಹೋಗುವುದು ಅನಿವಾರ್ಯ ಆಗಿದೆ.

ಸಾರ್ವಜನಿಕರು ಕೂಡ ಕಡತದ ನಕಲಿಗೆ ಬೇಡಿಕೆ ಸಲ್ಲಿಸಿದಾಗ ಖಾಸಗಿಯವರ ಮೂಲಕವೇ ನಕಲು ಮಾಡಿಸಿ ಕೊಡಬೇಕಾದ್ದು ಅನಿವಾರ್ಯ ಆಗಿದೆ. ಅಷ್ಟೂ ಯಂತ್ರಗಳನ್ನು ದುರಸ್ತಿ ಮಾಡಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹ.

ಕಡತಗಳು ಹೊರಗೆ
ತಾಲೂಕು ಕಚೇರಿಯಲ್ಲಿ ಇರಬೇಕಾದ ಅಮೂಲ್ಯ ಕಡತಗಳ ನಕಲು ಪ್ರತಿ ಹೆಸರಿನಲ್ಲಿ ಹೊರಗೆ ಅಂಗಡಿಯಲ್ಲಿ ಕಾಣಿಸಿಕೊಳ್ಳತೊಡಗಿದೆ. ಈ ಬಗ್ಗೆ ಸಾರ್ವಜನಿಕರು ಆರೋಪಗಳನ್ನು ಕೂಡ ಮಾಡುತ್ತಿದ್ದಾರೆ. ಇಷ್ಟಲ್ಲದೇ ಈ ಅಮೂಲ್ಯ ಕಡತಗಳಿಂದ ಕಾಗದ ಪತ್ರಗಳು ಕಾಣೆಯಾದರೆ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಾರೆ. ಝೆರಾಕ್ಸ್‌ ಯಂತ್ರಗಳು ಇಲ್ಲ ಎಂಬ ಕಾರಣದಿಂದ ಕೆಲವೊಂದು ಕೆಲಸ ಕಾರ್ಯಗಳೂ ವಿಳಂಬವಾಗುತ್ತಿವೆ ಎನ್ನುವ ಆರೋಪಗಳಿವೆ. ದಾಖಲೆಗಳ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಿ ತಿಂಗಳಾನುಗಟ್ಟಲೆಯಿಂದ ಕಾಯುತ್ತಿರುವವರೂ ಇದ್ದಾರೆ. ಅದೇ ಒಳನುಸುಳುವ ಬಲದಿಂದ ತತ್‌ಕ್ಷಣ ನಕಲು ಪ್ರತಿ ಪಡೆಯುವವರೂ ಇದ್ದಾರೆ. ಜನಸಾಮಾನ್ಯರಿಗೆ ಇಂತಹ ನುಸುಳುವ ಒಳಸುಳಿಗಳು ಗೊತ್ತಿಲ್ಲ. ಆದ್ದರಿಂದ ತಿಂಗಳುಗಳು ಕಳೆದರೂ ಕಡತದ ಪ್ರತಿ ಸಿಗುತ್ತಿಲ್ಲ ಎಂಬ ಅಳಲು ಕೇಳಿ ಬರುತ್ತಿದೆ.

ಕಡತ ಕಾಣೆ ಭಯ
ಅಮೂಲ್ಯ ಕಡತಗಳು ಕಚೇರಿಯಿಂದ ಹೊರಗೆ ಬಂದು ಖಾಸಗಿಯವರ ಬಳಿ ಇದ್ದರೆ ಅದರಿಂದ ದಾಖಲೆಗಳು, ಹಾಳೆಗಳು ಕಾಣೆಯಾದರೆ ಯಾರು ಜವಾಬ್ದಾರಿ. ಸಾರ್ವಜನಿಕರ ದಾಖಲೆ ಹಾಗೂ ಸರಕಾರಿ ದಾಖಲೆಗಳು ಅನ್ಯರ ವಶದಲ್ಲಿ ಇರಬಾರದು. ಎಲ್ಲೆಂದರಲ್ಲಿ, ಯಾರೆಂದರೆ ಯಾರಧ್ದೋ ಬಳಿ ಕಡತಗಳು ಕಾಣಿಸುತ್ತಿವೆ. ಒಂದು ಝೆರಾಕ್ಸ್‌ ಯಂತ್ರ ದುರಸ್ತಿ ಮಾಡಿಸದಷ್ಟು ಸಮಸ್ಯೆಯಲ್ಲಿದೆಯೇ ಕಂದಾಯ ಇಲಾಖೆ?
-ಸತೀಶ್ಚಂದ್ರ ಶೆಟ್ಟಿ ವಕ್ವಾಡಿ, ಸಾರ್ವಜನಿಕರು

ಅನ್ಯರ ಕೈಗಿಲ್ಲ ಕಡತ
ಝೆರಾಕ್ಸ್‌ ಯಂತ್ರಗಳು ಹಾಳಾಗಿದ್ದು ಈ ಹಿಂದೆ ದುರಸ್ತಿ ಮಾಡಿಸಿದ ಅನುದಾನವೇ ಬಂದಿಲ್ಲ. ದುರಸ್ತಿಗೆ ಅನುದಾನಕ್ಕೆ ಬರೆಯಲಾಗಿದೆ. ಒಂದು ತಿಂಗಳಲ್ಲಿ ಸರಿಯಾಗಲಿದೆ. ಕಚೇರಿಯ ಯಾವುದೇ ಕಡತಗಳನ್ನು ಅನ್ಯರ ಕೈಗೆ ನೀಡುತ್ತಿಲ್ಲ. ಸರಿಯಾದ ವ್ಯಕ್ತಿಗಳೇ ನಿರ್ವಹಣೆ ಮಾಡುತ್ತಾರೆ. ಅಧಿಕೃತರ ಬಳಿ ಮಾತ್ರ ಇರುತ್ತವೆ. ಸಾರ್ವಜನಿಕರಿಗೆ ನಕಲು ನೀಡಬೇಕಾದ ಸರಕಾರಿ ಸಿಬಂದಿಯೇ ಅಂಗಡಿಗೆ ತೆರಳಿ ನಕಲು ಮಾಡಿಸಿ ಹಸ್ತಾಂತರಿಸುತ್ತಾರೆ ವಿನಾ ಕಡತ ಹಸ್ತಾಂತರಿಸುವುದಿಲ್ಲ.
-ಕಿರಣ್‌ ಗೌರಯ್ಯ, ತಹಶೀಲ್ದಾರ್‌, ಕುಂದಾಪುರ

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.