ಅನುತ್ತೀರ್ಣಳಾದ ವಿದ್ಯಾರ್ಥಿನಿಗೆ ಪ್ರೇಮ ಪಾಠ; ಶಿಕ್ಷಕ ಅರೆಸ್ಟ್
ಸಮಾಧಾನ ಹೇಳದೆ ಕಾಮುಕತನ ಮೆರೆದ ಮಂಡ್ಯದ ಶಿಕ್ಷಕ
Team Udayavani, May 3, 2019, 4:24 PM IST
ಮಂಡ್ಯ : ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅನುತೀರ್ಣಳಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ವೇಳೆ ಪ್ರೇಮ ನಿವೇದನೆ ಮಾಡಿದ ಶಿಕ್ಷಕರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಮಂಡ್ಯ ನಗರದ ಖಾಸಗಿ ಶಾಲೆಯ ಶಿಕ್ಷಕ ಮೇಘನಾಥ್ ಬಂಧಿತ ಆರೋಪಿ. ಮೊಬೈಲ್ನಲ್ಲಿ ಕರೆ ಮಾಡಿ ವಿದ್ಯಾರ್ಥಿನಿಗೆ ಐ ಲವ್ ಯೂ ಎಂದಿದ್ದ.
ಶಿಕ್ಷಕ ಮಾತಾನಾಡಿದ ಆಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಮಂಡ್ಯ ಪೂರ್ವ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಎರಡು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದ ವಿದ್ಯಾರ್ಥಿನಿಗೆ ಒಂದೇ ವಿಷಯದಲ್ಲಿ ಅನುತ್ತೀರ್ಣಳಾಗಿದ್ದಿ.ನಾನು ನಿನಗೆ ನೋಟ್ಸ್ ಕೊಟ್ಟು ಪರೀಕ್ಷೆ ಬರೆಸುತ್ತೇನೆ ಎಂದು ಶಿಕ್ಷಕ ಹೇಳಿದ್ದ.