ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ
Team Udayavani, Sep 5, 2020, 1:27 PM IST
ಕೋವಿಡ್ 19 ಧುತ್ತೆಂದು ಎದುರಾದಾಗ
ಅರಿಯದ ದಾರಿಯಲಿ ನಡೆಯೆಂದರೆ ಹೇಗೆ ನಡೆಯಲಿ ನಾ?
ಅಳುಕು, ಅಂಜಿಕೆ, ಸವಾಲುಗಳ ನಡುವೆ
ಗುರಿ ಮುಟ್ಟುವೆನಾ ನಾ? (ವಿದ್ಯಾರ್ಥಿಯ ಮನದೊಳಗೆ )
ಬದಲಾಗಲೇ ಬೇಕು ಬದಲಾವಣೆಗೆ…
ಬದಲಾಗಲೇ ಬೇಕು ಬದುಕುಳಿಯಲು..
ಬದಲಾಗಲೇ ಬೇಕು
ಬದುಕು ಮುಂದುವರಿಸಲು. (ಶಿಕ್ಷಕರ ಸ್ಥಿತಿ )
ಪಠ್ಯ ಪಠ್ಯೇತರ ಚಟುವಟಿಕೆಗಳು, ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಂದ ತುಂಬಿ ತುಳುಕುತಿದ್ದ ನನ್ನ ಸರಕಾರಿ ಪ್ರೌಢ ಶಾಲೆ . ಇಂದು ಅವರ ಕಲರವ ವಿಲ್ಲದೇ, ಕೇವಲ ಶಿಕ್ಷಕರೊಂದಿಗೆ ಮೌನವಾಗಿ ಕಾಯುತ್ತಿದೆ ವಿದ್ಯಾರ್ಥಿಗಳ ಬರುವಿಕೆಗಾಗಿ ಶಬರಿಯಂತೆ… ದರ್ಶನ ಸಿಕ್ಕೇ ಸಿಗುವುದು ಎಂಬ ನಂಬಿಕೆ ಯಲಿ..
ಅತ್ತ ವಿದ್ಯಾರ್ಥಿ,ಇತ್ತ ಶಿಕ್ಷಕ.. ಸಂಬಂಧ ಕಲ್ಪಿಸಲೇಬೇಕಾದ ಅನಿವಾರ್ಯತೆಯಲ್ಲಿ ತಂತ್ರಜ್ಞಾನದ ಮೊರೆ ಹೊಕ್ಕಾಗ, ಕಷ್ಟ ವಾದರೂ ಸಾಧ್ಯವಾಗಿಸಿಕೊಂಡು ವಿದ್ಯಾರ್ಥಿಗಳ ನಂಬಿಕೆ ಉಳಿಸಿಕೊಂಡಿದ್ದೇವೆ. ವೃತ್ತಿ ಧರ್ಮವನ್ನು ಪ್ರಾಮಾಣಿಕವಾಗಿ ಪಾಲಿಸುತಿದ್ದೇವೆ.
ಕೋವಿಡ್ 19 ಗುರು ಶಿಷ್ಯರನ್ನು ಸಾಮಾಜಿಕವಾಗಿ ಅಂತರದಲ್ಲಿರಿಸಿದೆಯಾದರೂ, ಭಾವನಾತ್ಮಕವಾಗಿ, ಸಾಧ್ಯವಾದಷ್ಟು ಶೈಕ್ಷಣಿಕವಾಗಿ ಮುಖ್ಯ ಶಿಕ್ಷಕರೋಪಾದಿಯಾಗಿ ಸ್ಪಂದಿಸಲು ತಂತ್ರಜ್ಞಾನ ಸಹಕರಿಸಿದೆ.
ಶಿಕ್ಷಕರಾದ ನಮಗೆ ತಂತ್ರಜ್ಞಾನ ಸಂಪೂರ್ಣ ಕರಗತವಲ್ಲದ ಕಾರಣ ಸ್ವಲ್ಪ ಮುತುವರ್ಜಿ ವಹಿಸಿ, ನುರಿತವರನ್ನು ಕೇಳಿ, ನಾವೇ ಸ್ವಯಂ ಸಂಪನ್ಮೂಲ ತಯಾರಿಸಿ ವಿದ್ಯಾರ್ಥಿಗಳಿಗೆ ರವಾನಿಸಿದ್ದೇವೆ..ಅರ್ಥೈಸಲು ಪ್ರಯತ್ನಿಸುತ್ತಿದ್ದೇವೆ. ಇಲಾಖಾಧಿಕಾರಿಗಳ ಮಾರ್ಗದರ್ಶನ, ಮುಖ್ಯ ಶಿಕ್ಷಕರ ಸಲಹೆ, ಮೇಲುಸ್ತುವಾರಿ ಸಮಿತಿಯವರ ಸಹಕಾರದೊಂದಿಗೆ “ವಿದ್ಯಾಗಮ ” ಕಾರ್ಯಕ್ರಮದ ಮೂಲಕ ಶಾಲೆಯ ಕಟ್ಟಕಡೆಯ ವಿದ್ಯಾರ್ಥಿಯನ್ನೂ ಸಂಪರ್ಕಿಸಿದ್ದೇವೆ. ಇದು ಹೆಗ್ಗಳಿಕೆಯಲ್ಲ. ನಮ್ಮ ಜವಾಬ್ದಾರಿಯಾಗಿದೆ.. ಇದು ಅನಿವಾರ್ಯವೂ ಆಗಿದೆ.
ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ. “ಸ್ಮಾರ್ಟ್ ಫೋನ್ ಬಂದ ಮೇಲೆ ಮಕ್ಕಳು ದಾರಿ ತಪ್ಪಿದರು ” ಎಂದ ಮಾತು ನಮ್ಮನ್ನು ಅಣಕಿಸುತ್ತಿದೆ.
ಸಾಮಾಜಿಕ ಅಂತರ ಕಾಯ್ದು ಕೊಳ್ಳುವಲ್ಲಿ ಕೋವಿಡ್ ಗೆದ್ದೇ ಎಂದು ಬೀಗಿದರೂ ಗುರು ಶಿಷ್ಯರನ್ನು ಭಾವನಾತ್ಮಕವಾಗಿ ಹತ್ತಿರವಾಗಿಸಿದೆ. ಕೋವಿಡ್ ಹೋಗಲಿ. ವಿದ್ಯಾರ್ಥಿಗಳು ಬರಲಿ ಎಂಬುದೇ ನಮ್ಮ ಆಶಯ.
– ಶ್ರೀಮತಿ ತಾರಾಮತಿ (ಕನ್ನಡ ಭಾಷಾ ಶಿಕ್ಷಕಿ… ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ ಅನುಭವ
ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ
ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!
ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹರು
ಉತ್ತಮ ಶಿಕ್ಷಕರ ನೆನಪಲ್ಲಿ: ಬಡತನದ ಬವಣೆಯಲ್ಲಿ ಗೆದ್ದು ಗುರುವಾದ ಭೀಮಣ್ಣ ಸಜ್ಜನ್
MUST WATCH
ಹೊಸ ಸೇರ್ಪಡೆ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ