ದೇವಾಲಯ ಧ್ವಂಸ: ವಿವಾದದಲ್ಲಿ ಕೆಸಿಆರ್
Team Udayavani, Jul 12, 2020, 11:27 AM IST
ಹೈದರಾಬಾದ್: ತೆಲಂಗಾಣ ಸಚಿವಾಲಯಗಳ ಸಂಕೀರ್ಣದಲ್ಲಿದ್ದ ನಲ್ಲಾ ಪೋಚಮ್ಮ ದೇವಸ್ಥಾನ ಮತ್ತು ಎರಡು ಮಸೀದಿಗಳನ್ನು ನೆಲಸಮಗೊಳಿಸಿದ ತೆಲಂಗಾಣ ಸರಕಾರದ ಕ್ರಮ, ರಾಜಕೀಯ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ಗಳೆರಡೂ ಸರಕಾರದ ಈ ಕ್ರಮವನ್ನು ಟೀಕಿಸಿದ್ದು, ರಾಜ್ಯದ ಇತಿಹಾಸದಲ್ಲಿ ಇದೊಂದು ಕಪ್ಪು ದಿನ ಎಂದು ಹೇಳಿವೆ.
“”ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ತಮ್ಮ ಮಗನನ್ನು ಮುಂದಿನ ಸಿಎಂ ಮಾಡುವುದು ಮುಖ್ಯ. ಹೀಗಾಗಿ, ಮೂಢನಂಬಿಕೆಗಳಿಗೆ ಮೊರೆ ಹೋಗುತ್ತಾರೆ. ಇತರ ಎಲ್ಲಾ ಸಮುದಾಯಗಳ ಧಾರ್ಮಿಕ ಭಾವನೆಗಳಿಗಿಂತ ತಮ್ಮ ಭಾವನೆಗಳು ಮತ್ತು ಮೂಢನಂಬಿಕೆಗಳಿಗೆ ಅವರು ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬುದು ಇದ ರಿಂದ ಮತ್ತೂಮ್ಮೆ ಸಾಬೀತಾಗಿದೆ” ಎಂದು ಕಾಂಗ್ರೆಸ್ನ ಕಾರ್ಯಕಾರಿ ಅಧ್ಯಕ್ಷ, ಸಂಸದ ಎ.ರೇವಂತ ರೆಡ್ಡಿ ಆರೋಪಿಸಿದ್ದಾರೆ.
ಬಿಜೆಪಿ ವಕ್ತಾರ ಕೆ.ಕೃಷ್ಣ ಸಾಗರ ರಾವ್ ಮಾತನಾಡಿ, “”ದೇವಾಲಯ ನೆಲಸಮ ಧರ್ಮನಿಂದನೆಯಾಗಿದೆ. ಹಿಂದೂಗಳನ್ನು ಅವಮಾನಿಸುವ, ಪ್ರಚೋದಿಸುವ ಕಾರ್ಯ ಇದು” ಎಂದು ಆರೋಪಿಸಿದ್ದಾರೆ.
ಜು.7ರಂದು ತೆಲಂಗಾಣ ಸಚಿವಾಲಯದ ಹಳೆಯ ಕಟ್ಟಡ ವನ್ನು ಕೆಡವಿ ಹಾಕಲಾಗಿದ್ದು, ಈ ವೇಳೆ, ಸಚಿವಾಲಯ ಸಂಕೀರ್ಣದಲ್ಲಿದ್ದ ನಲ್ಲಾ ಪೋಚಮ್ಮ ದೇವಸ್ಥಾನ ಮತ್ತು ಎರಡು ಮಸೀದಿಗಳೂ ನೆಲಸಮವಾಗಿವೆ. ಅಲ್ಲಿ ಹೊಸ ಕಟ್ಟಡ ನಿರ್ಮಿಸುವುದು ಸರಕಾರದ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ