ಕೋವಿಡ್‌-19: ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆಯೇ ಉಗ್ರರು?


Team Udayavani, Apr 18, 2020, 9:29 AM IST

ಕೋವಿಡ್‌-19: ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆಯೇ ಉಗ್ರರು?

ಬರ್ಲಿನ್‌: ಜರ್ಮನಿಯ ಪೊಲೀಸರು ಕಳೆದ ಬುಧವಾರ ಅಮೆರಿಕದ ಮಿಲಿಟರಿ ಸಂಸ್ಥಾಪನೆಗಳು ಮೇಲೆ ಬಾಂಬ್‌ ಹಾಕಲು ಸಂಚು ಮಾಡಿದ್ದ ನಾಲ್ವರು ಉಗ್ರರನ್ನು ಬಂಧಿಸಿದ್ದರು. ಇವರೆಲ್ಲ ಕಳೆದ ವರ್ಷವಷ್ಟೇ ಐಸಿಸ್‌ಗೆ ಸೇರಿದವರು ಮತ್ತು ಜರ್ಮನಿಯಲ್ಲಿ ಸುಪ್ತ ಘಟಕವನ್ನು ಸ್ಥಾಪಿಸಿ ಸಂದರ್ಭಕ್ಕಾಗಿ ಕಾಯುತ್ತಿದ್ದರು. ಇಡೀ ಜಗತ್ತು ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಸಮಯವೇ ದಾಳಿಗೆ ಸರಿಯಾದ ಸಮಯ ಎಂದು ಅವರು ಭಾವಿಸಿದ್ದರು. ಈ ಘಟನೆ ಹೇಗೆ ಭಯೋತ್ಪಾದಕರು ಮನುಕುಲವನ್ನು ಕಾಡುತ್ತಿರುವ ಒಂದು ರೋಗವನ್ನೂ ತಮ್ಮ ಸಮಯ ಸಾಧಕತನಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ನಿದರ್ಶನ.

ಕೋವಿಡ್‌ ಜಿಹಾದಿಗಳನ್ನೂ ಬಿಟ್ಟಿಲ್ಲ. ಆದರೆ ಅವರು ಇದನ್ನು ದೇವರೇ ಕಾಫಿರರನ್ನು ಶಿಕ್ಷಿಸಲು ಮಾಡಿದ ಉಪಾಯ ಎಂದು ಬಣ್ಣಿಸುತ್ತಿದ್ದಾರೆ. ಐಸಿಸ್‌ ಉಗ್ರ ಸಂಘಟನೆ ಕೋವಿಡ್‌ ಸಂಕಷ್ಟದ ಕಾಲದಲ್ಲೇ ಪಾಶ್ಚಾತ್ಯ ಮತ್ತು ಐರೋಪ್ಯ ದೇಶಗಳ ಮೇಲೆ ದಾಳಿ ಮಾಡುವಂತೆ ಉಗ್ರರಿಗೆ ಹೇಳಿದೆ ಎಂಬುದಾಗಿ ದ ಗಾರ್ಡಿಯನ್‌ ಉಗ್ರರ ಕೆಲವು ಸುದ್ದಿ ಮಾಧ್ಯಮಗಳನ್ನು ಉಲ್ಲೇಖಸಿ ವರದಿ ಮಾಡಿದೆ.

ಮಧ್ಯ ಪೂರ್ವ, ಏಷ್ಯಾ ಮತ್ತು ಆಫ್ರಿಕದ ದೇಶಗಳಲ್ಲಿ ಕೋವಿಡ್‌ ಹಾವಳಿಯ ಸಂದರ್ಭದಲ್ಲಿ ದಾಳಿ ನಡೆಸಲು ಜಿಹಾದಿ ಸಂಘಟನೆಗಳು ಸೂಚಿಸಿವೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕೋವಿಡ್‌ ನಿಯಂತ್ರಣದತ್ತ ಗಮನ ಹರಿಸುವಾಗ ದಾಳಿ ಸುಲಭವಾಗಬಹುದು ಎನ್ನುವುದು ಇದಕ್ಕೆ ಕಾರಣ.

ಐಸಿಸ್‌ ಆರಂಭದಲ್ಲಿ ತನ್ನ ಮುಖವಾಣಿ ಅಲ್‌ -ನಬಾದಲ್ಲಿ ಕೋವಿಡ್‌ ಆಕ್ರಮಣಕಾರಿ ದೇಶಗಳನ್ನು ಶಿಕ್ಷಿಸಲು ದೇವರು ಕಂಡುಕೊಂಡ ದಾರಿ ಎಂದು ಬಣ್ಣಿಸಿತ್ತು. ಪಾಶ್ಚಾತ್ಯ ಜಗತ್ತು ಕೋವಿಡ್‌ನಿಂದ ನಲುಗುತ್ತಿದ್ದರೂ ಜಿಹಾದಿಗಳು ತಮ್ಮ ಗುರಿಯಿಂದ ವಿಮುಖವಾಗಬಾರದು. ಇದು ಸುಸಂದರ್ಭ ಎಂದು ಭಾವಿಸಿ ಹೊಸ ದಾಳಿಗಳನ್ನು ನಡೆಸಬೇಕೆಂದು ಹೇಳಿತ್ತು. ಆದರೆ ಇತ್ತೀಚೆಗಿನ ಆವೃತ್ತಿಯಲ್ಲಿ ಮುಸ್ಲಿಮರನ್ನು ಈ ವೈರಸ್‌ ಬಾಧಿಸುವುದಿಲ್ಲ ಎನ್ನುವುದು ತಪ್ಪಾಗುತ್ತದೆ. ಎಲ್ಲರೂ ಎಚ್ಚರಿಕೆಯಿಂದಿರಬೇಕೆಂದು ಹೇಳಿಕೊಂಡಿದೆ.

ಹೆಚ್ಚಿನೆಲ್ಲ ಉಗ್ರ ಸಂಘಟನೆಗಳ ಮುಖವಾಣಿಗಳು ಅಮೆರಿಕ ಪ್ರತಿಪಾದಿಸಿದ ನಾಸ್ತಿಕವಾದವೇ ಇಂದಿನ ಸ್ಥಿತಿಗೆ ಕಾರಣ. ಜನರನ್ನು ಶಿಕ್ಷಿಸಲು ದೇವರೇ ಈ ವೈರಸ್‌ ಸೃಷ್ಟಿಸಿದ್ದಾನೆ ಎಂದು ಬರೆದಿವೆ.

ಮುಸ್ಲಿಮ್‌ ದೇಶಗಳಲ್ಲಿ ನೈತಿಕ ಭ್ರಷ್ಟಾಚಾರ, ಅಸಭ್ಯತೆ ಮತ್ತು ಪಾಪಗಳು ಹೆಚ್ಚಿವೆ. ಇವರನ್ನು ಶಿಕ್ಷಿಸಲು ದೇವರೇ ವೈರಸನ್ನು ಕಳುಹಿಸಿಕೊಟ್ಟಿದ್ದಾನೆ ಎಂದು ಆರು ಪುಟಗಳ ಪತ್ರವೊಂದರಲ್ಲಿ ಅಲ್‌ ಕಾಯಿದಾ ಹೇಳಿಕೊಂಡಿದೆ.

ಆಫ್ರಿಕ ಮತ್ತು ಮಧ್ಯ ಪೂರ್ವ ದೇಶಗಳ ಭ್ರಷ್ಟ, ಅಸಮರ್ಥ ಸರಕಾರಗಳಿಂದಾಗಿ ಜಿಹಾದಿ ಸಂಘಟನೆಗಳು ಅಲ್ಲಿ ತಳವೂರಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಜಿಹಾದಿ ಸಂಘಟನೆಗಳು ಜಗತ್ತಿನ ಶಕ್ತ ರಾಷ್ಟ್ರಗಳೆಂದು ಹೇಳಿಕೊಳ್ಳುತ್ತಿರುವ ಅಮೆರಿಕ, ಫ್ರಾನ್ಸ್‌, ಇಟಲಿ, ಸ್ಪೈನ್‌ ಬ್ರಿಟನ್‌, ಜರ್ಮನಿ ಕೋವಿಡ್‌ ಬಾಧೆಯಿಂದ ಅತಿ ಹೆಚ್ಚು ನಲುಗುತ್ತಿರುವುದಕ್ಕೆ ಸಂಭ್ರಮಿಸುತ್ತಿವೆ ಎಂದು ವರದಿ ಹೇಳಿದೆ.

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.