ಥೈಲ್ಯಾಂಡ್ ಜಗತ್ತಿನ ಸ್ವರ್ಗ
Team Udayavani, Nov 28, 2020, 7:00 AM IST
ಪ್ರವಾಸೋದ್ಯಮದಿಂದಲೇ ಮುನ್ನಡೆಯುತ್ತಿರುವ ದೇಶ ಥಾçಲ್ಯಾಂಡ್ನಲ್ಲಿ ಅನೇಕ ಪ್ರಕೃತಿ ದತ್ತವಾದ ಪ್ರವಾಸಿ ತಾಣಗಳಿವೆ. ಇದರೊಂದಿಗೆ ಮಾನವನ ಕೈಚಳಕವೂ ಸಾಕಷ್ಟು ಕೆಲಸ ಮಾಡಿದೆ.
ಗಾರವೆಂಬ ಸೀರೆಯನ್ನುಟ್ಟು, ಬಂಗಾರವೆಂಬ ಬಳೆಯನ್ನು ತೊಟ್ಟು, ನರ್ತಕಿಯೆಂಬ ನತ್ತನ್ನಿಟ್ಟು, ಚೆಲುವೆ ಚೆಂದುಳ್ಳಿ ಯಾಗಿ ಕೈಬೀಸಿ ಕರೆಯುವ ದೇಶ ಥಾçಲ್ಯಾಂಡ್…
ಜಗತ್ತಿನ ಪುಟ್ಟ ದ್ವೀಪ ರಾಷ್ಟ್ರ ಥೈಲ್ಯಾಂಡ್ ಪ್ರಕೃತಿದತ್ತವಾದ ರಮಣೀಯ ಪ್ರವಾಸಿ ತಾಣಗಳನ್ನು ಹೊಂದಿದೆ. ಈ ದೇಶ ಮುನ್ನಡೆಯುತ್ತಿರುವುದು, ಇಲ್ಲಿನ ಜನರು ಜೀವನ ನಡೆಸುತ್ತಿರುವುದು ಪ್ರವಾಸೋದ್ಯಮದಿಂದಲೇ ಎಂಬುದು ಇಲ್ಲಿನ ಅಚ್ಚರಿಯ ವಿಚಾರ. ಹೀಗಾಗಿ ಇಲ್ಲಿ ಪ್ರವಾಸಿಗರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವಿಮಾನ ನಿಲ್ದಾಣ, ಅಂಗಡಿ ಮಳಿಗೆಗಳಲ್ಲಿ ಪ್ರವಾಸಿಗರಿಗೆ ಕೈಮುಗಿದು ಸ್ವಾಗತಿಸಲಾಗುತ್ತದೆ ಮತ್ತು ಅದೇ ರೀತಿ ಬೀಳ್ಕೊಡಲಾಗುತ್ತದೆ.
ವಿಶ್ವದ ಮೂಲೆಮೂಲೆಯಿಂದಲೂ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಥೈಲ್ಯಾಂಡ್ನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಜತೆಗೆ ಉದ್ಯೋಗ, ಜೀವನವನ್ನು ರೂಪಿಸಲು ಯೋಗ್ಯ ದೇಶವಾಗಿದೆ.
ಸ್ವತ್ಛತೆ ಇಲ್ಲಿ ಎದ್ದು ಕಾಣುವ ವಿಚಾರ. ರಸ್ತೆ, ಹೆದ್ದಾರಿ ಸ್ವತ್ಛತೆ ಕಾರ್ಯ ಮೆಚ್ಚುವಂತಿದೆ. ಟ್ರಾಫಿಕ್ ಜಾಮ್ ಕಾಣ ಸಿಗುವುದೇ ಇಲ್ಲ. ಇಲ್ಲಿ ಹೆದ್ದಾರಿಯನ್ನೂ ಅದೇ ರೀತಿ ನಿರ್ಮಾಣಮಾಡಲಾಗಿದೆ. ಇಲ್ಲಿ ಎಂಜಿನಿಯರಿಂಗ್ ಪರಿಣತಿ ಎದ್ದು ಕಾಣುತ್ತದೆ.
ದೇಶದ ಕೇಂದ್ರಬಿಂದು ಬ್ಯಾಂಕಾಕ್ ಅತ್ಯಂತ ಸಮೃದ್ಧಿಯನ್ನು ಹೊಂದಿದ ನಗರ. ಇಲ್ಲಿ ಭಾರತೀಯ ಆಚಾರ, ವಿಚಾರಗಳಿಗೆ ಮನ್ನಣೆ ನೀಡುವುದರ ಜತೆಗೆ ಧರ್ಮ, ಸಂಪ್ರದಾಯ, ಹಬ್ಬಹರಿದಿನಗಳ ಆಚರಣೆಗೂ ಹೆಚ್ಚಿನ ಅವಕಾಶವಿದೆ.
ಕನ್ನಡಿಗರ ಹೃದಯ ಶ್ರೀಮಂತಿಕೆಗೆ ಇಲ್ಲಿನ ಜನ ಗೌರವ ನೀಡುತ್ತಾರೆ. ಕನ್ನಡ ನಾಡುನುಡಿ, ನಿತ್ಯಹರಿದ್ವರ್ಣ ಕಾಡುಗಳು, ಗಂಧದ ಮರ, ರಾಜಮಹಾರಾಜರ ಇತಿಹಾಸ, ಶಿಲ್ಪಕಲೆ, 8 ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕ ರಾಜ್ಯದ ಬಗ್ಗೆ ಇಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸುವುದು ವಿಶೇಷ.
ಅತ್ಯಂತ ಸುಸಂಸ್ಕೃತ, ಸರಳ ಜೀವನ ನಡೆಸುವ ಇಲ್ಲಿನ ಜನರು, ಕನ್ನಡಿಗರೊಂದಿಗೆ ಸಹೋದರತ್ವ ಭಾವನೆಯಿಂದ ಬೆರೆತುಕೊಳ್ಳುತ್ತಾರೆ. ಹಬ್ಬಗಳಲ್ಲಿಯೂ ಸಹಭಾಗಿಯಾಗುತ್ತಾರೆ. ದೇವರು, ಪೂಜೆ, ಪುನಸ್ಕಾರಗಳನ್ನು ಗೌರವಿಸುತ್ತಾರೆ.
- ಲಕ್ಷ್ಮೀ, ಅಂಕಲಗಿಮಠ , ಥೈಲ್ಯಾಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ