ನಟ ಯಶ್ ಅಭಿವೃದ್ದಿ ಪಡಿಸಿದ ತಲ್ಲೂರ ಕೆರೆ! ರೈಲ್ವೆ ಗುತ್ತಿಗೆದಾರರ ಎಡವಟ್ಟಿಗೆ ಕೆರೆ ಭಣಭಣ
Team Udayavani, Oct 15, 2020, 3:31 PM IST
ಯಲಬುರ್ಗಾ: ಈ ಬಾರಿ ಮಳೆಯ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿದೆ. ತಾಲೂಕಿನ ಬಹುತೇಕ ಕೆರೆಗಳು ತುಂಬಿ ಭರ್ತಿಯಾಗಿವೆ.
ಭರ್ತಿಯಾದ ಕೆರೆಗಳಿಗೆ ಪೂಜೆ ಬಾಗಿನ ಸಲ್ಲಿಸುವುದನ್ನು ಕಾಣುತ್ತಿದ್ದೇವೆ. ಆದರೆ ತಾಲೂಕಿನಲ್ಲಿಯೇ ಅತಿ ದೊಡ್ಡದಾದ
ಕೆರೆ, ಚಿತ್ರನಟ ಯಶ್ ಅಭಿವೃದ್ಧಿ ಪಡಿಸಿದ ತಲ್ಲೂರು ಕೆರೆ ಅಂಗಳ ಮಾತ್ರ ಭಣಗುಡುತ್ತಿದೆ.
ಕೆರೆಗೆ ನೀರು ಬರುವ ಸ್ಥಳವನ್ನು ರೈಲ್ವೆ ಇಲಾಖೆಯವರು ತಪ್ಪಿಸಿದ ಪರಿಣಾಮ ಈ ಬಾರಿ ಹೆಚ್ಚಿನ ಮಳೆಯಾದರೂ ಕೆರೆಯಲ್ಲಿ ನೀರು ಇಲ್ಲದಂತಾಗಿದೆ. ಗದಗ-ವಾಡಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಹೊಣೆ ಹೊತ್ತ ರೈಲ್ವೆ ಗುತ್ತಿಗೆದಾರರು ನೀರಿನ
ಜಾಡು ಹಾದಿಯನ್ನು ತಪ್ಪಿಸಿದ್ದು ಕೆರೆಗೆ ನೀರು ಬರುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ನೀರಿನ ಸಂಪರ್ಕ ಸ್ಥಳದಲ್ಲಿ ಗುಂಡಿ: ಕೆರೆಗೆ ನೀರು ಬರುವ ಸ್ಥಳ, ಜಮೀನುಗಳಲ್ಲಿ ಮರಂ ತೆಗೆಯಲು ದೊಡ್ಡ ದೊಡ್ಡ
ಪ್ರಮಾಣದಲ್ಲಿ ಗುಂಡಿ ತೋಡಿದ ಪರಿಣಾಮ ನೀರು ಗುಂಡಿಯಲ್ಲಿ ಒಂದಿಷ್ಟು ಸಂಗ್ರಹವಾಗಿದೆ. ಕೆರೆಗೆ ದೊಡ್ಡ ಪ್ರಮಾಣದಲ್ಲಿ ನೀರು ಬರುವ ವಜ್ರಬಂಡಿ, ಲಿಂಗನಬಂಡಿ, ನೀರಿನ ಹರಿವನ್ನು ತಪ್ಪಿಸಿದ್ದರಿಂದ ಕೆರೆಗೆ ನೀರು ಹರಿದು ಬಂದಿಲ್ಲ.
ಇದನ್ನೂ ಓದಿ:ಬಿಹಾರ ರಾಜಕೀಯ ರಂಗು: ಮೂವರು ಸ್ಟಾರ್ ನಾಯಕರು… ಅಟಲ್ ಮೇಲಿನ ಕೋಪಕ್ಕೆ ಎಲ್ ಜೆಪಿ ಸ್ಥಾಪನೆ
ಯಶ್ ಅಭಿವೃದ್ದಿ ಪಡಿಸಿದ ಕೆರೆ: ಚಿತ್ರನಟ ಯಶ್ ಅವರು ತಮ್ಮ ಯಶೋಮಾರ್ಗ ಸಂಸ್ಥೆ ವತಿಯಿಂದ 4 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತಿ ಈ ಕೆರೆ ಅಭಿವೃದ್ಧಿ ಪಡಿಸಿದ್ದರು. ಕೆರೆ 96 ಎಕರೆ ವಿಸ್ತೀರ್ಣ ಹೊಂದಿದೆ. 40 ಗ್ರಾಮಗಳಿಗೆ ಆಸರೆಯಾಗಬೇಕಿದ್ದ ಕೆರೆಗೆ ನೀರಿಲ್ಲ. ನಟ ಯಶ್ ಅವರ ಪ್ರಯತ್ನದಿಂದ ತಲ್ಲೂರು ಕೆರೆಗೆ ನೀರು ಬಂದಿತ್ತು. ರೈಲ್ವೆ ಇಲಾಖೆಯ ಗುತ್ತಿಗೆದಾರರ
ಅವೈಜ್ಞಾನಿಕ ನಿರ್ಣಯದಿಂದ ನೀರು ಇಲ್ಲದಂತಾಗಿದೆ. ಕಳೆದ ಅಭಿವೃದ್ಧಿ ಪಡಿಸಿದ ಬಳಿಕ ಕೆರೆ ತುಂಬಿ ಈ ಭಾಗದ ರೈತರಿಗೆ ಅನುಕೂಲವಾಗಿತ್ತು. ಆದರೆ ಈ ವರ್ಷ ನೀರಿನ ಮಾರ್ಗ ಬದಲಿಸಿದ್ದಾರೆ.
ರೈತರ ಆಕ್ರೋಶ: ಕೆರೆಯ ನೀರಿನ ಹಾದಿ ತಪ್ಪಿಸಿದ ರೈಲ್ವೆ ಗುತ್ತಿಗೆದಾರರ ನಡೆ ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸುವಂತೆ ತಹಶೀಲ್ದಾರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು
ರೈತರು ದೂರುತ್ತಾರೆ.
– ಮಲ್ಲಪ್ಪ ಮಾಟರಂಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK