ಕಾರು ಪುಕಾರು

ಸೆಕೆಂಡ್‌ ಹ್ಯಾಂಡ್‌ ಕಾರು ಕೊಳ್ಳುವ ಮುನ್ನ...

Team Udayavani, Jun 22, 2020, 5:05 AM IST

car-pukaru

ಲಾಕ್‌ಡೌನ್‌ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದೆ. ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.60ರಷ್ಟು ಮಂದಿ ಪ್ರಯಾಣಕ್ಕಾಗಿ ಖಾಸಗಿ ವಾಹನ ವನ್ನು ಆಯ್ಕೆ ಮಾಡಿಕೊಂಡಿದ್ದರು. ಅವರಲ್ಲಿ ಶೇ.50 ರಷ್ಟು ಮಂದಿ  ಸೆಕೆಂಡ್‌ಹ್ಯಾಂಡ್‌ ಕಾರನ್ನು ಕೊಳ್ಳಲು ಒಲವು ತೋರಿಸಿದ್ದಾರೆ. ಸೆಕೆಂಡ್‌ಹ್ಯಾಂಡ್‌ ಕಾರನ್ನು ಕೊಳ್ಳುವ ಮುನ್ನ, ಗ್ರಾಹಕರು ಹಲವು ವಿಚಾರಗಳತ್ತ ಗಮನ ಹರಿಸಬೇಕಾಗುತ್ತದೆ.

ಕಾರಿನ ಪರಿಶೀಲನೆ: ಹೊಚ್ಚ ಹೊಸ ಕಾರನ್ನು ಕೊಳ್ಳಲು ಲೋನ್‌ ಪಡೆ ಯುವಾಗ ವಿಧಿಸುವ ನಿಯಮಗಳೇ, ಸೆಕೆಂಡ್‌ ಹ್ಯಾಂಡ್‌ ಕಾರ್‌ಗೆ ಲೋನ್‌ ಪಡೆಯುವಾಗಲೂ ಇರು ತ್ತವೆ ಎಂದು ಕೆಲವರು ತಿಳಿದಿರುತ್ತಾರೆ. ಆದರೆ ಹಾಗಿಲ್ಲ. ಉದಾಹರಣೆಗೆ, ಐಸಿಐಸಿಐ ಬ್ಯಾಂಕು ಹೊಸ ಕಾರಿನ  ಮೇಲಿನ ಸಾಲಕ್ಕೆ 9.30 ಬಡ್ಡಿ ವಿಧಿಸಿದರೆ, ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ 14.25 ಬಡ್ಡಿ ವಿಧಿಸುತ್ತದೆ. ಅದಕ್ಕೆ ಕಾರಣ ಇಲ್ಲದಿಲ್ಲ. ಸೆಕೆಂಡ್‌ ಹ್ಯಾಂಡ್‌ ಕಾರಿನ ಬಿಡಿಭಾಗಗಳಿಗೆ ಗ್ಯಾರಂಟಿ  ಇರುವುದಿಲ್ಲ. ಹೀಗಾಗಿ ಕಾರು ಮಾಲೀಕ ಸಾಲ ಕಟ್ಟಲಾಗದೆ ಕಾರು ಜಪ್ತಿ ಮಾಡಿ ಕೊಳ್ಳಬೇಕಾದ ಸಮಯದಲ್ಲಿ ಕಾರು ಸುಸ್ಥಿತಿಯಲ್ಲಿ ಇರದಿದ್ದರೆ, ಅದಕ್ಕೆ ಬೆಲೆ ದೊರಕುವುದಿಲ್ಲ. ಹೊಸ ಕಾರಿನ ವಿಷಯದಲ್ಲಿ ಆ ಚಿಂತೆ ಇರುವುದಿಲ್ಲ.

ಹಳೆ ಬಾಕಿ ಕಟ್ಟಿಬಿಡಿ: ಸೆಕೆಂಡ್‌ ಹ್ಯಾಂಡ್‌ ಕಾರು ಕೊಳ್ಳುವ ಮುನ್ನ, ಆ ಕಾರಿನ ಮೇಲೆ ಹಳೆಯ ಸಾಲ ಏನಾದರೂ ಇದೆಯೇ, ಅವುಗಳಲ್ಲಿ ಬಾಕಿ ಉಳಿದಿದೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಮೂಲ ಮಾಲೀಕರು ಸಾಲದ ಬಾಕಿಯನ್ನು ಪೂರ್ತಿಯಾಗಿ ಚುಕ್ತಾ ಮಾಡಿದ  ನಂತರವೇ ಕಾರು ಖರೀದಿಸಬೇಕು. ಉದಾಹರಣೆಗೆ, ಸೆಕೆಂಡ್‌ ಹ್ಯಾಂಡ್‌ ಕಾರಿನ ಬೆಲೆ 3 ಲಕ್ಷ ಎಂದುಕೊಳ್ಳೋಣ. ಆ ಕಾರಿನ ಮೇಲೆ 2 ಲಕ್ಷ ಸಾಲ ಬಾಕಿ ಉಳಿಸಿಕೊಂಡಿದ್ದರೆ, ಕಾರು ಖರೀದಿದಾರ  2 ಲಕ್ಷ ರೂ.ಗಳನ್ನು ಮೊದಲು ಬ್ಯಾಂಕಿಗೆ ಕಟ್ಟಿ, ಉಳಿದ 1 ಲಕ್ಷವನ್ನು ಕಾರು ಮಾಲೀಕನಿಗೆ ನೀಡುವುದು ಎಲ್ಲಾ ರೀತಿಯಿಂದಲೂ ಸುರಕ್ಷಿತವಾದ ದಾರಿ.

ವಿಮೆಯ ರಕ್ಷಣೆ: ಹೊಚ್ಚ ಹೊಸ ಕಾರಿಗೆ ಇರುವ ವಿಮಾ ಸೌಲಭ್ಯವನ್ನೇ ಸೆಕೆಂಡ್‌ ಹ್ಯಾಂಡ್‌ ಕಾರಿಗೂ ಪಡೆದುಕೊಳ್ಳಬೇಕು. ಕಾರಿಗೆ ಈಗಾಗಲೇ ವಿಮೆ ಮಾಡಿಸಿದ್ದರೆ, ಕಾರು ಖರೀದಿಯಾದ 14 ದಿನಗಳ ಒಳಗೆ ಕಾರಿನ ವಿಮೆ ಪಾಲಿಸಿಯನ್ನು  ಖರೀದಿದಾರರು ತಮ್ಮ ಹೆಸರಿಗೆ ಮಾಡಿಸಿಕೊಂಡುಬಿಡಬೇಕು. ಜೊತೆಗೆ “ನೋ ಕ್ಲೈಮ್‌ ಬೋನಸ್‌’ (ಎನ್‌ಸಿಬಿ) ಅನ್ನು ಆ ವಿಮೆಗೆ ವರ್ಗಾಯಿಸಿ ಕೊಂಡುಬಿಡಬೇಕು. ಎನ್‌ಸಿಬಿ ಎಂದರೆ, ವಿಮೆಯನ್ನು ಇದುವರೆಗೂ ಕ್ಲೈಮ್‌ ಮಾಡಿಕೊಳ್ಳದೆ ಇರುವುದಕ್ಕೆ ಸಂಸ್ಥೆ ನೀಡುವ ಬೋನಸ್‌ ಸವಲತ್ತು. ಇದರಿಂದ ಕಾರಿನ ಮೇಲೆ ಕಟ್ಟುವ ಪ್ರೀಮಿಯಂ ಮೊತ್ತದಲ್ಲಿ ರಿಯಾಯಿತಿ ದೊರೆಯುತ್ತದೆ. ಈ ರಿಯಾಯಿತಿ ಶೇ.20- 50 ರಷ್ಟು ಇರುತ್ತದೆ.

ಪಡೆದುಕೊಳ್ಳಬೇಕಾದ ದಾಖಲೆಗಳು: ರಿಜಿಸ್ಟ್ರೇಷನ್‌ ಸರ್ಟಿಫೀಕೆಟ್‌, ಕಾರು ಖರೀದಿಸಿದ್ದರ ಇನ್‌ವಾಯ್ಸ್‌ ಬಿಲ್‌, ಸರ್ವಿಸ್‌ ಬುಕ್‌, ವಿಮೆ ದಾಖಲೆ ಪತ್ರ ಗಳು, ಫಾರ್ಮ್ 29 (ಕಾರು ಮಾಲೀಕತ್ವ ವರ್ಗಾವಣೆ ಕುರಿತಾದ ದಾಖಲೆ), ಫಾರ್ಮ್ 30  (ಕಾರು ಮಾಲೀಕತ್ವ ವರ್ಗಾ ವಣೆ ಕುರಿತ ಅರ್ಜಿ), ಫಾರ್ಮ್ 32, 35 (ಕಾರು ಮಾಲೀಕ ಲೋನ್‌ ಮಾಡಿ ಕಾರು ಖರೀದಿಸಿದ್ದರೆ)- ಇತ್ಯಾದಿ ದಾಖಲೆಗ ಳನ್ನು ಖರೀದಿದಾರ ಪಡೆದುಕೊಳ್ಳ ಬೇಕು. ಕೆಲ ಬ್ಯಾಂಕುಗಳು ಮೂರಕ್ಕೂ ಹೆಚ್ಚು ಬಾರಿ  ಮಾರಾಟಗೊಂಡ ಕಾರಿಗೆ ಲೋನ್‌ ನೀಡುವುದಿಲ್ಲ. ಈ ಬಗ್ಗೆಯೂ ಖರೀದಿ ದಾರ ತಿಳಿದುಕೊಂಡಿರ ಬೇಕಾಗುತ್ತದೆ.

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.