ವಿದ್ಯುತ್ ಸ್ಪರ್ಶಿಸಿ ಅಂತಿಮ ಪದವಿ ವಿದ್ಯಾರ್ಥಿನಿ ಸಾವು
Team Udayavani, Aug 9, 2021, 9:11 PM IST
ಸಾಂದರ್ಭಿಕ ಚಿತ್ರ..
ಕನಕಪುರ : ತಾಯಿಯನ್ನು ರಕ್ಷಣೆ ಮಾಡಲು ಹೋದ ಅಂತಿಮ ಪದವಿ ವಿದ್ಯಾರ್ಥಿನಿಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ದಾರುಣ ಘಟನೆ ಹಾರೋಹಳ್ಳಿಯ ಕೋಟೆಯಲ್ಲಿ ನಡೆದಿದೆ.
ತಾಲೂಕಿನ ಹಾರೋಹಳ್ಳಿ ಕೋಟೆ ನಿವಾಸಿ ಶ್ರೀನಿವಾಸ್ ಮೂರ್ತಿ ಅವರ ತೃತೀಯ ಪುತ್ರಿ ನಿಸರ್ಗ 21 ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆ ಒಗೆದ ಬಟ್ಟೆಗಳನ್ನು ಒಣಗಿ ಹಾಕಲು ಹೋದಾಗ ಈ ಅವಘಡ ಸಂಭವಿಸಿದೆ ತಾಯಿ ನಾಗಮಣಿ ಒಗೆದ ಬಟ್ಟೆಗಳನ್ನು ತಂತಿಯ ಮೇಲೆ ಒಣಗಿ ಹಾಕಲು ಹೋದಾಗ ವಿದ್ಯುತ್ ತಗಲಿದೆ ಅಲ್ಲೇ ಇದ್ದ ಮಗಳು ನಿಸರ್ಗ ತಾಯಿಯನ್ನು ರಕ್ಷಣೆ ಮಾಡಲು ಹೋದಾಗ ತಾಯಿ ನಾಗಮಣಿ ಪ್ರಾಣಾಪಾಯದಿಂದ ಪಾರಾದರು ಆದರೆ ಮಗಳು ನಿಸರ್ಗ ಳಿಗೆ ವಿದ್ಯುತ್ ತಗಲಿ ಕೆಳಗೆ ಬಿದ್ದಿದ್ದರು ಬಳಿಕ ಸ್ಥಳೀಯ ದಯಾನಂದ ಸಾಗರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಸರ್ಗ ಮೃತಪಟ್ಟಿದ್ದಾಳೆ.
ಇದನ್ನೂ ಓದಿ:‘ನೀರಜ್’ಹೆಸರಿನವರಿಗೆ ಫ್ರೀ ಪೆಟ್ರೋಲ್: ಚೋಪ್ರಾ ಚಿನ್ನದ ಸಾಧನೆಗೆ ಬಂಕ್ ಮಾಲೀಕನ ಸಂಭ್ರಮ
ವಿದ್ಯುತ್ ಕಂಬದಿಂದ ಮನೆಗೆ ಸಂಪರ್ಕಕಲ್ಪಿಸಲು ಅಳವಡಿಸಿದ್ದ ಕಬ್ಬಿಣದ ಪೈಪಿಗೆ ಬಟ್ಟೆ ಒಣಗಿ ಹಾಕಲು ತಂತಿಯನ್ನು ಕಟ್ಟಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ .
ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿರುವ ಹಾರೋಹಳ್ಳಿ ಪೊಲೀಸರು ಯುಡಿಆರ್ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.